ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಮೃತರಾದ 13 ಜನರಿಗೆ ತಲಾ ಒಂದು ಲಕ್ಷ ರು. ಹಾಗೂ ನಾಲ್ಕು ಜನ ಗಾಯಾಳುಗಳಿಗೆ 1.50 ಲಕ್ಷ ರು. ವೈಯಕ್ತಿಕ ನೆರವು ನೀಡಿದರು.
ಬಳಿಕ ಮಾತನಾಡಿದ ಲೋಕಸಭಾ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಮೃತರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮೃತ ಕುಟುಂಬಗಳ ನೋವಿಗೆ ಸ್ಪಂದಿಸಲು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದರು.ಈ ಘಟನೆ ನಮ್ಮಗೆ ಜೀರ್ಣಿಸಲಾಗುವುದಿಲ್ಲ. ಭಗವಂತ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಈ ಎಮ್ಮೆಹಟ್ಟಿ ಗ್ರಾಮಸ್ಥರು ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಕುಟುಂಬದ ಉಳಿದ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ. ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಮುಂದೆ ಕೂಡ ನೆರವು ನೀಡುತ್ತೇವೆ. ಹೋದ ಜೀವಗಳ ನಷ್ಟ ನಾವು ತುಂಬಿಕೊಡಲಾಗುವುದಿಲ್ಲ. ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಮುಂದೆಯೂ ಮೃತ ಕುಟುಂಬದವರ ಬಗ್ಗೆ ಮಾಹಿತಿ ಪಡೆಯುತ್ತಿರುವಂತೆ ಜಿಲ್ಲಾಧ್ಯಕ್ಷರಾದ ಪ್ರಸನ್ನಕುಮಾರ್ ಅವರಿಗೂ ಹೇಳಿದ್ದೇವೆ ಎಂದರು.
ಅಪಘಾತದಲ್ಲಿ ಎಮ್ಮೆಹಟ್ಟಿ ಗ್ರಾಮದ ಐಎಎಸ್ ತಯಾರಿ ನಡೆಸುತ್ತಿದ್ದ, ರಾಷ್ಟ್ರೀಯ ಕ್ರೀಡಾಪಟು, ಮಾನಸ, ಮತ್ತು ತಾಯಿ ಭಾಗ್ಯಮ್ಮ, ನಾಗೇಶಪ್ಪ, ಮೀನಾಕ್ಷಮ್ಮ, ಮಗ ಆದರ್ಶ ಹಾಗೂ ತಾಯಿ ಸುಭದ್ರಮ್ಮ ಅವರನ್ನ ಕಳೆದುಕೊಂಡು ಗ್ರಾಮ ಸ್ಮಶಾನ ಮೌನಕ್ಕೆ ಜಾರಿತ್ತು. ಇವರ ಮನೆ ಪರಿಸ್ಥಿತಿ ಗಂಭೀರವಾಗಿದೆ. ಫುಟ್ ಬಾಲ್ ಪ್ಲೇಯರ್ ಆಗಿದ್ದ ಮಾನಸ ಅಂಧಳಾಗಿದ್ದಳು. ಏಷಿಯನ್ ಕಪ್ಗಾಗಿ ಕೊಚ್ಚಿಯಲ್ಲಿ ಫುಟ್ ಬಾಲ್ ಆಡಿದ್ದಾಳೆ. ಜಪಾನ್ ವಿರುದ್ಧ ಆಡಿದ್ದಾಳೆ ಎಂದು ಮಾನಸಾಳ ಕುಟುಂಬ ನೋವುನ್ನು ವ್ಯಕ್ತಪಡಿಸಿದೆ.
ಮಾನಸಾಳ ಕಥೆ ಒಂದು ಕಡೆಯಾದರೆ, ಗಾಯಗೊಂಡಿದ್ದ ಅರ್ಪಿತಳ ತಂದೆ ನಾಗೇಶ್ ರಾವ್, ವಿಶಾಲಾಕ್ಷಮ್ಮ ಆದರ್ಶ್, ಅಜ್ಜಿ ಸುಭದ್ರಮ್ಮ ಅಪಘಾತ ನಡೆದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗವಿಕಲೆಯಾದ ಅರ್ಪಿತಾಳರನ್ನ ದೊಡ್ಡಮ್ಮ ಮತ್ತು ಚಿಕ್ಕಮ್ಮರು ನೋಡಿಕೊಳ್ತಿದ್ದಾರೆ. ಆದರೆ ಅಪಘಾತದಲ್ಲಿ ಮೃತರಾದ ಮನೆಯವರ ಬಗ್ಗೆ ಅರ್ಪಿತಾಳಿಗೆ ಇನ್ನೂ ತಿಳಿಸಿಲ್ಲ. ಸದ್ಯಕ್ಕೆ ಡಿಸ್ಚಾರ್ಜ್ ಆಗಿ ಎಮ್ಮೆಹಟ್ಟಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ನೀರಸ ಮೌನಕಾಡಿದೆ. ಆದರೆ ಅರ್ಪಿತಾಳ ಮನದಲ್ಲಿ ತಂದೆ ತಾಯಿ ಇನ್ನೂ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂಬ ಭಾವನೆ ಇದೆ.
ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಘೋಷಿಸಲಾಗಿತ್ತು. ಅದರಲ್ಲಿ ಇಬ್ವರು ಗುಣಮುಖರಾದರೂ ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ವರ್ ಕೂಡ ತಲಾ ₹50 ಸಾವಿರ ನೆರವು ನೀಡಿ, ಶಿವರಾಜ್ಕುಮಾರ್ ದಂಪತಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಎಮ್ಮೆಹಟ್ಟಿ ಗ್ರಾಮದ ಮುಖಂಡರು ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಂತು, ಜಿ.ಡಿ.ಮಂಜುನಾಥ್ ಮತ್ತಿತರರಿದ್ದರು.
ಬಾಣಂತಿ ರೇಣುಕಾ ಅವರಿಗೆ ಸಾಂತ್ವಾನ ಹೇಳುವಾಗ ನಟ ಶಿವರಾಜ್ ಕುಮಾರ್ ಕಣ್ಣಿರು ಸುರಿಸಿದರು. ಪಕ್ಕದಲ್ಲೆ ಕುಳಿತಿದ ಗೀತಾ ಶಿವರಾಜ್ ಕುಮಾರ್ ಬಾಣಂತಿ ರೇಣುಕಾಳ ಕೈ ಹಿಡಿದು ಸಮಾದಾನ ಮಾಡಿ ಯಾವುದೇ ಸಮಯದಲ್ಲೂ ನಮ್ಮನ್ನು ಸಂಪರ್ಕಿಸಿ ನೆರವು ನೀಡುವುದಾಗಿ ಹೇಳಿ ತಲೆ ಸವರಿ ಮೊಬೈಲ್ ನಂಬರ್ ನೀಡಿದರು. ಎಮ್ಮೆಹಟ್ಟಿ ಬಿಟ್ಟು ತೆರಳಿದ ಕೆಲ ಸಮಯದ ನಂತರ ರೇಣುಕಾಳಿಗೆ ವಾಟ್ಸಪ್ನಲ್ಲಿ ಸಂದೇಶ ಕಳಿಸಿ ಧೈರ್ಯ ತುಂಬಿದರು.