ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವೆಂಕಟೇಶ ನಾಯ್ಕ ನೇಮಕ । ಕನ್ನಡಪ್ರಭ ತನ್ನ ಸರಣಿ ವರದಿ 3 ನೇ ಭಾಗದಲ್ಲಿ ಪ್ರಸ್ತಾಪಿಸಿತ್ತು
ಬರೀ ಬಾಯಿ ಮಾತಿನಲ್ಲಿಯೇ ಇದ್ದ ಚಿತ್ರದುರ್ಗದ ನಗರದ ರಸ್ತೆ ಅಗಲೀಕರಣ ಪ್ರಕ್ರಿಯೆ ಅಂತೂ ಟ್ರ್ಯಾಕ್ ಗೆ ಬಂದಿದೆ. ಜಿಲ್ಲಾಧಿಕಾರಿ ವೆಂಕಟೇಶ್ ಅವರು ಅಗಲೀಕರಣಕ್ಕೆ ವಿಶೇಷ ಭೂ ಸ್ವಾಧೀನ ಅಧಿಕಾರಿಯನ್ನಾಗಿ ವೆಂಕಟೇಶ್ ನಾಯ್ಕ ಅವರನ್ನು ನೇಮಕ ಮಾಡುವುದರ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. ಹೊಸ ವರ್ಷದಿಂದ ಅಗಲೀಕರಣ ಪ್ರಕ್ರಿಯೆಗೆ ಪೂರ್ವ ಸಿದ್ಧತೆ ಕಾರ್ಯಗಳು ಆರಂಭವಾಗಲಿವೆ. ವಿಶೇಷ ಭೂ ಸ್ವಾಧೀನ ಅಧಿಕಾರಿ ಅಗತ್ಯತೆ ಬಗ್ಗೆ ಕನ್ನಡಪ್ರಭ ತನ್ನ ಸರಣಿ ವರದಿಯ ಮೂರನೇ ಕಂತಿನಲ್ಲಿ ಪ್ರಸ್ತಾಪಿಸಿತ್ತು.
ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ನಿಯೋಜನೆ ಗೊಂಡಿರುವ ವೆಂಕಟೇಶ ನಾಯ್ಕ ಹಾಲಿ ತುಮಕೂರು-ಚಿತ್ರದುರ್ಗ ನೇರ ರೈಲು ಮಾರ್ಗ ಹಾಗೂ ಬೀದರ್- ಶ್ರೀರಂಗಪಟ್ಟಣ ಹೆದ್ದಾರಿಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೆಂಕಟೇಶ್ ನಾಯ್ಕ ನಾಯಕನಹಟ್ಟಿ ಪಕ್ಕದ ಮನಮೈನಹಟ್ಟಿಯವರಾಗಿದ್ದು ಚಿತ್ರದುರ್ಗ ಬಲ್ಲವಂತವರಾಗಿದ್ದಾರೆ.ವಿಶೇಷ ಭೂ ಸ್ವಾಧೀನ ಅಧಿಕಾರಿ ನೇಮಕದ ಹಿನ್ನಲೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಸ್ತೆ ಅಗಲೀಕರಣ ಕುರಿತು ಚರ್ಚಿಸಲಾಗಿತ್ತು. ಅದರ ಮೊದಲ ಹಂತವಾಗಿ ವಿಶೇಷ ಭೂ ಸ್ವಾಧೀನ ಅಧಿಕಾರಿ ನೇಮಕ ಮಾಡಲಾಗಿದೆ. ನಗರಸಭೆಯಲ್ಲಿ ಅವರು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕೊಠಡಿ ನೀಡಲು ಸೂಚಿಸಲಾಗಿದೆ ಎಂದರು.
ಚಿತ್ರದುರ್ಗದಲ್ಲಿ ಇದುವರೆಗೂ ನಡೆದಿರುವ ಮೂರು ರಸ್ತೆ ಅಗಲೀಕರಣದಲ್ಲಿ ಭೂ ಸ್ವಾಧೀನ ಅಧಿಕಾರಿ ನೇಮಕ ಮಾಡಲಾಗಿರಲಿಲ್ಲ. ಗೋಡೆಗಳಿಗೆ ಮಾರ್ಕ್ ಹಾಕಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಚಾನುಸಾರ ಕಟ್ಟಡ ತೆರವು ಗೊಳಿಸಲಾಗಿತ್ತು. ಅಬ್ಬಾ..!