ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಕಾವೇರಿ ನದಿ ನೀರು ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ಮುಖ್ಯ ನಾಲೆ, ವಿತರಣಾ ನಾಲೆ ಮತ್ತು ಉಪನಾಲೆಗಳ ಆಧುನೀಕರಣ ಕಾರ್ಯಕ್ಕೆ ೧೬೧೩ ಕೋಟಿ ರು. ವೆಚ್ಚ ಮಾಡುತ್ತಿದ್ದು, ಇದುವರೆಗೆ ೧೫೨೯.೫೨ ಕೋಟಿ ರು. ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಉತ್ತರಿಸಿರುವ ಅವರು, ಒಟ್ಟು ೧೮೦೪ ಕಿ.ಮೀ.ನಾಲೆ ಉದ್ದವಿದ್ದು, ಇದರಲ್ಲಿ ೧೦೩೩.೩೪ ಕಿ.ಮೀ. ದೂರದವರೆಗಿನ ನಾಲಾ ಆಧುನೀಕರಣಕ್ಕೆ ಅನುಮೋದನೆ ನೀಡಲಾಗಿತ್ತು. ಇದುವರೆಗೆ ೮೬೭.೫೭ ಕಿ.ಮೀ. ದೂರದವರೆಗೆ ನಾಲೆ ಆಧುನೀಕರಣ ಪೂರ್ಣಗೊಂಡಿದ್ದು, ಇನ್ನು ೧೬೫.೭೭ ಕಿ.ಮೀ. ಉದ್ದದ ಕಾಮಗಾರಿ ಬಾಕಿ ಉಳಿದಿದೆ ಎಂದು ಉತ್ತರ ನೀಡಿದ್ದಾರೆ.
ವಿಶ್ವೇಶ್ವರಯ್ಯ ಮುಖ್ಯ ನಾಲೆ ೪೬.೨೫ ಕಿ.ಮೀ. ಉದ್ದವಿದ್ದು, ಇದರಲ್ಲಿ ೪೦ ಕಿ.ಮೀ. ಉದ್ದದ ನಾಲೆ ಆಧುನೀಕರಣಕ್ಕೆ ೩೦೦ ಕೋಟಿ ರು. ಅಂದಾಜುವೆಚ್ಚವಾಗಿದ್ದು, ೩೨ ಕಿ.ಮೀ. ಉದ್ದದ ನಾಲೆ ಆಧುನೀಕರಣಕ್ಕೆ ೩೦೯ ಕೋಟಿ ರು. ವೆಚ್ಚವಾಗಿದೆ. ಇನ್ನೂ ೮ ಕಿ.ಮೀ. ಉದ್ದದ ನಾಲೆ ಆಧುನೀಕರಣ ಕಾಮಗಾರಿ ಬಾಕಿ ಇದೆ ಎಂದು ಹೇಳಿದ್ದಾರೆ.ಎಸ್ಬಿಸಿ ಮತ್ತು ಕೆಎಸ್ಬಿ ಮುಖ್ಯ ಹಾಗೂ ವಿತರಣಾ ನಾಲೆಗಳ ದೂರ ೧೪೦.೧೯ ಕಿ.ಮೀ. ಉದ್ದವಿದ್ದು, ಅದರಲ್ಲಿ ೧೦೪..೧೩೯ ಕಿ.ಮೀ. ದೂರದ ನಾಲಾ ಆಧುನೀಕರಣಕ್ಕೆ ೯೬ ಕೋಟಿ ರು. ಖರ್ಚು ಮಾಡಲಾಗಿದೆ. ೧೪.೭೦ ಕಿ.ಮೀ. ಉದ್ದದ ಮದ್ದೂರು ಶಾಖಾ ನಾಲೆ, ೧೦.೪೦ ಕಿ.ಮೀ. ಹಾಗೂ ೬.೮೫ ಕಿ.ಮೀ. ಉದ್ದದ ನಾಲೆ ಆಧುನೀಕರಣಕ್ಕೆ ೭೦.೮೫ ಕೋಟಿ ರು. ಖರ್ಚಾಗಿದೆ. ೩೯.೧೫ ಕಿ.ಮೀ. ಉದ್ದದ ಕಾವೇರಿ ಶಾಖಾ ನಾಲೆ ಆಧುನೀಕರಣದಲ್ಲಿ ೨೯ ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಂಡಿದೆ. ಅದೇ ರೀತಿ ೭೧.೬೨ ಕಿ.ಮೀ. ಉದ್ದದ ವಿತರಣಾ ನಾಲೆ ಪೈಕಿ ೨೧.೬೩ ಕಿ.ಮೀ. ಉದ್ದದ ಕಾಮಗಾರಿಗೆ ೭೪.೬೯ ಕೋಟಿ ರು. ಖರ್ಚಾಗಿರುವುದಾಗಿ ವಿವರಿಸಿದ್ದಾರೆ.
ಹೆಬ್ಬಾಳ ಚನ್ನಯ್ಯ ಮುಖ್ಯ ನಾಲೆ ೪೦ ಕಿ.ಮೀ., ೭೨.೪೯ ಕಿ.ಮೀ. ಉದ್ದದ ವಿತರಣಾ ನಾಲೆ ಪೈಕಿ ೯..೧೩ ಕಿ.ಮೀ. ಉದ್ದದ ನಾಲೆಗಳ ಆಧುನೀಕರಣಕ್ಕೆ ೯೩.೧೩ ಕೋಟಿ ರು. ವರೆಗೆ ಖರ್ಚಾಗಿದೆ. ಅದೇ ರೀತಿ ಹೆಬ್ಬಳ್ಳ ಚನ್ನಯ್ಯ ಶಾಖಾ ನಾಲೆ, ವಿತರಣಾ ನಾಲೆ, ಪಿಕಪ್ ನಾಲೆಗಳ ಆಧುನೀಕರಣಕ್ಕೆ ೧೦೦ ಕೋಟಿ ರುಉ.. ಖರ್ಚು ಮಾಡಿದೆ. ತುರುಗನೂರು ಲಿಂಕ್ ಮುಖ್ಯ ನಾಳೆ, ವಿತರಣಾ ನಾಲೆ, ಸಣ್ಣ ನಾಲೆಗಳ ಅಭಿವೃದ್ಧಿಗೆ ೩೭.೮೨ ಕೋಟಿ ರು. ಖರ್ಚಾಗಿದೆ ಎಂದಿದ್ದಾರೆ.ಅಣೆಕಟ್ಟು ವ್ಯಾಪ್ತಿಯ ೬೯.೧೯ ಕಿ.ಮೀ. ಉದ್ದದ ವಿರಿಜಾ, ೨೬ ಕಿ.ಮೀ. ಉದ್ದದ ಹೆಚ್ಹೆಚ್ಎಲ್ಸಿ ನಾಲೆ ಆಧುನೀಕರಣಕ್ಕೆ ೧೦೯.೪೫ ಕೋಟಿ ರು. ಖರ್ಚಾಗಿದೆ. ೮.೨೦ ಕಿ.ಮೀ. ಉದ್ದದ ಬಂಗಾರದೊಡ್ಡಿ ನಾಲೆ ಆಧುನೀಕರಣಕ್ಕೆ ೧೬.೩೪ ಕೋಟಿ ರು. ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.
ಕಾವೇರಿ ನದಿ ನೀರು ಅಚ್ಚುಕಟ್ಟು ವ್ಯಾಪ್ತಿಯ ಜಿಲ್ಲೆಯ ಮುಖ್ಯ ನಾಲೆ, ವಿತರಣಾ ನಾಲೆ, ಉಪ ನಾಲೆಗಳ ಆಧುನೀಕರಣದಿಂದ ಅಚ್ಚುಕಟ್ಟು ಪ್ರಾರಂಭದಿಂದ ಕೊನೆಯ ಹಂತದವರೆಗೆ ಎಲ್ಲಾ ರೈತರಿಗೆ ಸಮರ್ಪಕವಾಗಿ ಸಕಾಲದಲ್ಲಿ ನೀರನ್ನು ಒದಗಿಸಲು ಮತ್ತು ನಾಲೆ ಮತ್ತು ನಾಲೆ ಅಚ್ಚುಕಟ್ಟು ವ್ಯಾಪ್ತಿಯಡಿ ಬರುವ ಎಲ್ಲಾ ಕೆರೆಗಳಿಗೆ ನೀರನ್ನು ಸಮರ್ಪಕವಾಗಿ ತುಂಬಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.ನಾಲಾ ಆಧುನೀಕರಣ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮತ್ತು ಗುಣಮಟ್ಟದಲ್ಲಿ ನಿರ್ವಹಿಸಲು ಇಲಾಖಾ ವ್ಯಾಪ್ತಿಯ ಗುಣನಿಯಂತ್ರಣ ಕೋಶ ಸಕ್ಷಮ ಕಚೇರಿ ವತಿಯಿಂದ ಸ್ಥಳ ತಪಾಸಣೆ ನಡೆಸಿ ಕಾಮಗಾರಿಯ ಸಾಮಗ್ರಿಗಳ ಗುಣಮಟ್ಟಗಳನಬ್ನು ದೃಢಪಡಿಸಿಕೊಂಡು ಕಾಮಗಾರಿಗಳನ್ನು ಗುಣಾತ್ಮಕವಾಗಿ ನಿರ್ವಹಿಸಿರುವುದಾಗಿ ತಿಳಿಸಿದ್ದಾರೆ.