ಆರ್.ಎಸ್‌.ಎಸ್ ಶತಾಬ್ದಿ ಪಟಸಂಚಲನ: ಸ್ವಾಗತಕ್ಕೆ ಬೆಳಗಾವಿ ಕೇಸರಿಮಯ

KannadaprabhaNewsNetwork |  
Published : Oct 10, 2025, 01:02 AM IST
ಆರ್‌ಎಸ್‌ಎಸ್‌... | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ತ ಅ.12 ರಂದು ಆರ್‌ಎಸ್‌ಎಸ್ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ಜರುಗಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ತ ಅ.12 ರಂದು ಆರ್‌ಎಸ್‌ಎಸ್ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ಜರುಗಲಿದೆ. ನಗರದ ಸರ್ದಾರ ಮೈದಾನದಲ್ಲಿ ಸೇರುವ ಗಣವೇಷಧಾರಿಗಳು ಸಂಜೆ 5 ಗಂಟೆಗೆ ಪಥಸಂಚಲನ ಆರಂಭಿಸುವ ಒಂದು ತಂಡ ಚನ್ನಮ್ಮ ವೃತ್ತ, ಚವಾಟ ಗಲ್ಲಿ, ಭಡಕಲ ಗಲ್ಲಿ, ಮಾರುತಿ ಗಲ್ಲಿ, ಕುಲಕರ್ಣಿ ಗಲ್ಲಿ, ತಿಲಕ್‌ ಚೌಕ್‌ ಮಾರ್ಗವಾಗಿ ಲಿಂಗರಾಜ ಕಾಲೇಜು ಮೈದಾನಕ್ಕೆ ತಲುಪಲಿದ್ದಾರೆ.

ಮತ್ತೊಂದು ತಂಡ ಚನ್ನಮ್ಮ ವೃತ್ತ, ಕಾಕತಿವೆಸ್‌, ಸಮಾದೇವಿ ಗಲ್ಲಿ, ತಿಲಕ್‌ ಚೌಕ್‌ ಮಾರ್ಗವಾಗಿ ಲಿಂಗರಾಜು ಕಾಲೇಜು ಮೈದಾನಕ್ಕೆ ತಲುಪುವ ಮೂಲಕ ಪಥಸಂಚಲನ ಪೂರ್ಣಗೊಳಿಸುವರು. ಗಣವೇಷಧಾರಿಗಳು ಸಾಗುವ ಮಾರ್ಗದುದ್ದಕ್ಕೂ ಬೆಳಗಾವಿಯ ನಾಗರೀಕರು ಅಲ್ಲಲ್ಲಿ ಹೂಮಳೆ ಮತ್ತು ರಸ್ತೆಯುದ್ದಕ್ಕೂ ರಂಗೋಲಿ ಹಾಕಿ ಭಾರತ ಮಾತಾಕೀ ಜೈ ಘೋಷದ ಸ್ವಾಗತದೊಂದಿಗೆ ಸ್ವಾಗತ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ. ಪಥಸಂಚಲನದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮದವಣಗಿತ್ತಿಯಂತೆ ಅಲಂಕಾರಗೊಳ್ಳಲಿದ್ದು, ಎಲ್ಲಿ ನೋಡಿದರು ಕೇಸರಿಮಯವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ ಆರ್ಭಟಕ್ಕೆ ಮದ್ಯ ಮಾರಾಟವೇ ಕುಸಿತ!
24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಸಿದ್ದರಾಮಯ್ಯ