ತುಕ್ಕು ಹಿಡಿದ ತೂಗು ಸೇತುವೆ: ಆತಂಕ

KannadaprabhaNewsNetwork |  
Published : Jun 13, 2024, 12:52 AM IST
ಕಳಸ ತಾಲೂಕಿನ ಕಲ್ಲುಗೋಡು ತೂಗು ಸೇತುವೆ ಮೇಲೆ ಓಡಾಡುತ್ತಿರುವ ಶಾಲಾ ಮಕ್ಕಳು. | Kannada Prabha

ಸಾರಾಂಶ

ಕಳಸ: ಕಳೆದ ಎರಡು ದಶಕದ ಹಿಂದೆ ಕಟ್ಟಿರುವ ತೂಗು ಸೇತುವೆ ಹಲವೆಡೆ ಹಾಳಾಗಿದ್ದು ಸ್ಥಳೀಯರು ಆತಂಕದಲ್ಲಿಯೇ ಪ್ರತಿ ದಿನ ಓಡಾಡುತ್ತಿದ್ದಾರೆ.

ಕಳಸ: ಕಳೆದ ಎರಡು ದಶಕದ ಹಿಂದೆ ಕಟ್ಟಿರುವ ತೂಗು ಸೇತುವೆ ಹಲವೆಡೆ ಹಾಳಾಗಿದ್ದು ಸ್ಥಳೀಯರು ಆತಂಕದಲ್ಲಿಯೇ ಪ್ರತಿ ದಿನ ಓಡಾಡುತ್ತಿದ್ದಾರೆ.

ಈ ಸೇತುವೆ ಇರೋದು ಕಳಸ ತಾಲೂಕು ಕೇಂದ್ರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಕಲ್ಲುಗೋಡು ಗ್ರಾಮದಲ್ಲಿ ಕಲ್ಲುಗೋಡು, ಕರಿಮನೆ ಗ್ರಾಮದವರು ಕಳಸಕ್ಕೆ ಬರಬೇಕಾದರೆ ಈ ತೂಗು ಸೇತುವೆ ಮೇಲೆಯೇ ಬರಬೇಕು. ಈ ಸೇತುವೆ ಮೇಲೆ ಪ್ರತಿದಿನ ಶಾಲಾ ಮಕ್ಕಳು, ಗ್ರಾಮಸ್ಥರು ಓಡಾಡುತ್ತಿದ್ದಾರೆ. ಆದರೆ, ಈ ಸೇತುವೆಗೆ ತುಕ್ಕು ಹಿಡಿದಿದ್ದು ಹಲವೆಡೆ ಹಾಳಾಗಿದೆ. ಅದ್ದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.

ಇಲ್ಲಿ ಹಾದು ಹೋಗಿರುವ ಭದ್ರಾ ನದಿಗೆ ತೂಗು ಸೇತುವೆ ನಿರ್ಮಾಣ ಮಾಡಲಾಗಿದ್ದು, ಈ ಸೇತುವೆ ಹಾಳಾಗಿದೆ. ಇದಕ್ಕೆ ಹೊಂದಿಕೊಂಡಿರುವ ರಸ್ತೆಯೂ ಕೂಡ ಮಳೆಗಾಲದಲ್ಲಿ ಕೆಸರುಮಯವಾಗಿದೆ. ಹಾಗಾಗಿ ಸ್ಥಳೀಯರು ರಸ್ತೆ ದುರಸ್ತಿ ಜತೆಗೆ, ತೂಗು ಸೇತುವೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. 12 ಕೆಸಿಕೆಎಂ 6ಕಳಸ ತಾಲೂಕಿನ ಕಲ್ಲುಗೋಡು ತೂಗು ಸೇತುವೆ ಮೇಲೆ ಓಡಾಡುತ್ತಿರುವ ಶಾಲಾ ಮಕ್ಕಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ