ರಂಗೋಲಿಯಲ್ಲಿ ಅರಳಿದ ಶಿವನ ಚಿತ್ರ

KannadaprabhaNewsNetwork |  
Published : Feb 27, 2025, 12:30 AM IST
33 | Kannada Prabha

ಸಾರಾಂಶ

ರಂಗೋಲಿಯಲ್ಲಿ ಶಿವನ ಚಿತ್ರವನ್ನು ಬಿಡಿಸಿದರು ಅತ್ಯುತ್ತಮ 5 ರಂಗೋಲಿ ಸ್ಪರ್ಧೆ ವಿಜೇತರಾದ ರಾಮಾನುಜಾ ರಸ್ತೆ ನಿವಾಸಿ ಸುಶೀಲಾ, ಕಲ್ಯಾಣಗಿರಿಯ ಕೋಮಲಾ, ವಿದ್ಯಾರಣ್ಯಪುರಂನ ವನಿತಾ ಸುಭಾಷ್, ಎಂ.ಎಚ್‌. ಜನಿಷಾ ಹಾಗೂ ಶ್ರೀರಾಂಪುರದ ಮಂಗಳಾ ಅವರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವೇಶ್ವರ ನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್, ಕೆಎಂಪಿ ಕೆ ಟ್ರಸ್ಟ್ ಮತ್ತು ಜೆಸಿಐ ಮೈಸೂರು ಕಿಂಗ್ ಲೇಡೀಸ್ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಮಹಿಳೆಯರಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.ರಂಗೋಲಿಯಲ್ಲಿ ಶಿವನ ಚಿತ್ರವನ್ನು ಬಿಡಿಸಿದರು ಅತ್ಯುತ್ತಮ 5 ರಂಗೋಲಿ ಸ್ಪರ್ಧೆ ವಿಜೇತರಾದ ರಾಮಾನುಜಾ ರಸ್ತೆ ನಿವಾಸಿ ಸುಶೀಲಾ, ಕಲ್ಯಾಣಗಿರಿಯ ಕೋಮಲಾ, ವಿದ್ಯಾರಣ್ಯಪುರಂನ ವನಿತಾ ಸುಭಾಷ್, ಎಂ.ಎಚ್‌. ಜನಿಷಾ ಹಾಗೂ ಶ್ರೀರಾಂಪುರದ ಮಂಗಳಾ ಅವರಿಗೆ ಬಹುಮಾನ ವಿತರಿಸಲಾಯಿತು.ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ ಮಾತನಾಡಿ, ಸಂಸ್ಕೃತಿ, ಪರಂಪರೆ, ಆಚಾರ ವಿಚಾರ ಉಳಿಸಿ ಬೆಳೆಸುವಲ್ಲಿ ಹಬ್ಬಗಳ ಪಾತ್ರ ಮಹತ್ವದ್ದಾಗಿದೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ, ಮನುಷ್ಯ ಮನುಷ್ಯರ ನಡುವೆ ಬಾಂಧವ್ಯ ಬೆಳೆಸಲು ಹಬ್ಬಗಳು ಸಹಕಾರಿ, ಸದೃಢ, ಸ್ವಾಸ್ಥ್ಯ, ಸಮಾಜ ನಿರ್ಮಾಣಕ್ಕೆ ಇಂತಹ ಹಬ್ಬಗಳ ಮೂಲಕ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದೆ ಎಂದು ಹೇಳಿದರು.ನಗರಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ಪಬ್ಲಿಕ್ ಶಾಲೆಯ ಸಿಇಒ ತೇಜಸ್ ಶಂಕರ್, ಸಮೃದ್ಧಿ ಟ್ರಸ್ಟ್ ಅಧ್ಯಕ್ಷ ಸಹನಗೌಡ, ಶ್ರೀ ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸಾಯಿರಾಂ ಫೌಂಡೇಷನ್ ಅಧ್ಯಕ್ಷೆ ಖುಷಿ, ಅಂಬಾ ಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ, ವಕೀಲರಾದ ಜಯಶ್ರೀ ಶಿವರಾಮ್, ಸಂಧ್ಯಾ, ಸುಶೀಲಾ, ಮಹಾನ್ ಶ್ರೇಯಸ್, ಜೆಸಿಐ ಸದಸ್ಯರು, ಮೋಹನ್ ರಾಚಯ್ಯ, ಗೌತಮ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ