- ಬಾಯಿ ಚಪಲಕ್ಕೆ ಸಂಘ ಪರಿವಾರ-ಮೋದಿ ಟೀಕೆಗೆ ಗರಂ - - -
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕೈದು ಸಲ ಶಾಸಕರಾದರೂ ಇಂದಿಗೂ ಸಚಿವರಾಗದ ಅದೆಷ್ಟೋ ಹಿರಿಯರು ಕಾಂಗ್ರೆಸ್ಸಿನಲ್ಲಿದ್ದರೂ, ಎಐಸಿಸಿ ಅಧ್ಯಕ್ಷರ ಮಗನೆಂಬ ಕಾರಣಕ್ಕೆ ನಿಮ್ಮನ್ನು ಸಚಿವನಾಗಿ ಮಾಡಿದ್ದಾರೆ. ಮೊದಲು ನಿಮ್ಮ ಸ್ವಂತ ಶಕ್ತಿ ತೋರಿಸಿ ಎಂದರು.
ಗೃಹ ಮಂತ್ರಿಯಾಗಿ ನಿನ್ನ ಸ್ವಂತ ಶಕ್ತಿ ತೋರಿಸಪ್ಪ. ದೀನ ದಲಿತರಿಗೆ ಸ್ಥಾನಮಾನ, ಅವಕಾಶ ಸಿಗಲೆಂದು ಬಾಬಾ ಸಾಹೇಬ್ ಅಂಬೇಡ್ಕರ್ರವರು ಮೀಸಲಾತಿ ಜಾರಿಗೆ ತಂದರು. ಖರ್ಗೆ ಕುಟುಂದವರಾದ ನಿಮಗೇ ಯಾಕೆ ಮೀಸಲಾತಿ? ಬೇರೆ ದಲಿತರಿಗೆ ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟು, ನೀವು ಬೇರೆ ಯಾವುದಾದರೂ ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು, ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.ಮೋದಿ ಪ್ರೆಸ್ ಮೀಟ್ ಮಾಡುವುದಿಲ್ಲವೆಂದು ಟೀಕಿಸುತ್ತೀರಿ? ಈ ಹಿಂದೆ ಐಟಿ ಬಿಟಿ ಸಚಿವನಾಗಿ, ಈಗ ಗೃಹ ಸಚಿವರಾಗಿ ನಿಮ್ಮ ಸಾಧನೆ ಏನು? ನಿಮ್ಮ ಹಿಂದಿನ ಇಲಾಖೆಯ ಸಾಧನೆ ಬಗ್ಗೆ ಒಂದು ಸುದ್ದಿಗೋಷ್ಠಿ ಮಾಡಿ, ನಿಮ್ಮ ಸಾಧನೆ ಹೇಳಿ ನೋಡೋಣ. ಕಲುಬುರಗಿ ಜಿಲ್ಲೆ, ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿ ಬಗ್ಗೆಯಾದರೂ ಸಾರ್ವಜನಿಕವಾಗಿ ಹೇಳಿ ಎಂದು ಕುಟುಕಿದರು.
ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಕಟ್ಟಡ ಕುಸಿತ, ಅನಾಹುತಗಳ ಸಂಭವಿಸಿದರೆ ಎಲ್ಲರಿಗಿಂತ ಮೊದಲು ಅಲ್ಲಿ ಹಾಜರಾಗಿ ಸಂಕಷ್ಟಕ್ಕೀಡಾದವರನ್ನು ರಕ್ಷಿಸುವುದು, ಗಾಯಾಳುಗಳ ನೆರವಿಗೆ ನಿಲ್ಲುವುದೇ ಸಂಘ ಪರಿವಾರ ಮತ್ತು ಸಂಘದ ಸ್ವಯಂ ಸೇವಕರು. ಹೀಗೆ ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯ ಮಾಡುವ ಸಂಘದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಯಶವಂತ ರಾವ್ ಜಾಧವ್ ತಿಳಿಸಿದರು.
-15ಕೆಡಿವಿಜಿ12: ಯಶವಂತ ರಾವ್ ಜಾಧವ್.