ವಿಜ್ಞಾನ, ತಂತ್ರಜ್ಞಾನ ಆಧುನಿಕ ನಾಗರಿಕತೆ ಅವಳಿ ಸ್ತಂಭಗಳು: ಶಾಸಕ ಶಿವಣ್ಣನವರ

KannadaprabhaNewsNetwork |  
Published : Aug 21, 2026, 03:15 AM IST
ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಕೆಪಿಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಟೋಯೋಟಾ ಸಂಸ್ಥೆ ರು. 70 ಲಕ್ಷ ಮೊತ್ತದ ಪ್ರಯೋಗಾಲಯವನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿಜ್ಞಾನ ಮತ್ತು ತಂತ್ರಜ್ಞಾನ ಆಧುನಿಕ ನಾಗರಿಕತೆಯ ಅವಳಿ ಸ್ತಂಭಗಳಾಗಿದ್ದು, ಅವುಗಳಲ್ಲಿ ಪರಿವರ್ತನಾ ಶಕ್ತಿಯಿದೆ. ವಿಜ್ಞಾನವು ನೈಸರ್ಗಿಕ ಪ್ರಪಂಚದ ವ್ಯವಸ್ಥಿತ ಜ್ಞಾನ ಒದಗಿಸಿದರೆ ತಂತ್ರಜ್ಞಾನವು ಪ್ರಾಯೋಗಿಕ ಸಾಧನಗಳು ಮತ್ತು ವ್ಯವಸ್ಥೆಗಳನ್ನು ರಚಿಸಲು ಸಹಕರಿಸಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಆಧುನಿಕ ನಾಗರಿಕತೆಯ ಅವಳಿ ಸ್ತಂಭಗಳಾಗಿದ್ದು, ಅವುಗಳಲ್ಲಿ ಪರಿವರ್ತನಾ ಶಕ್ತಿಯಿದೆ. ವಿಜ್ಞಾನವು ನೈಸರ್ಗಿಕ ಪ್ರಪಂಚದ ವ್ಯವಸ್ಥಿತ ಜ್ಞಾನ ಒದಗಿಸಿದರೆ ತಂತ್ರಜ್ಞಾನವು ಪ್ರಾಯೋಗಿಕ ಸಾಧನಗಳು ಮತ್ತು ವ್ಯವಸ್ಥೆಗಳನ್ನು ರಚಿಸಲು ಸಹಕರಿಸಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಸ್‌ಜೆಜೆಎಂ ಕೆಪಿಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಟೋಯೋಟಾ ಸಂಸ್ಥೆ ₹ 70 ಲಕ್ಷ ಮೊತ್ತದ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಜಾಗತಿಕ ಸವಾಲುಗಳಿಗೆ ಪರಿಹಾರ ನೀಡುವುದರಲ್ಲಿ ಎರಡು ಮಾತಿಲ್ಲ, ಬಹುತೇಕ ಸಂಶೋಧನೆಗಳು ಇಂದು ಭೂಮಿಯಲ್ಲಿರುವ ಮನುಷ್ಯನನ್ನು ದೂರದ ಚಂದ್ರ ಗ್ರಹ ತಲುಪುವಲ್ಲಿ ಸಹಕರಿಸಿವೆ. ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳಿಲ್ಲದೇ ಬದುಕೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅವಲಂಬಿತವಾಗಿದ್ದೇವೆ ಎಂದರು.

ಟೋಯೋಟಾ ಸಂಸ್ಥೆ ಕಾರ್ಯವೈಖರಿ ಶ್ಲಾಘನೀಯ

ಇಲ್ಲಿಯವರೆಗೂ ನಾವೆಲ್ಲಾ ತಿಳಿದುಕೊಂಡಂತೆ ಟೋಯೋಟಾ ಸಂಸ್ಥೆಯು ವಾಹನಗಳ ಮಾರಾಟ ಮಾಡಿ ಕೇವಲ ಲಾಭದ ಉದ್ದೇಶಕ್ಕಾಗಿ ನಿರ್ಮಿತಗೊಂಡಿರುವ ಬಹುರಾಷ್ಟ್ರೀಯ (ಮಲ್ಟಿ ನ್ಯಾಷನಲ್) ಸಂಸ್ಥೆ ಎಂದು ಪರಿಭಾವಿಸಿಕೊಂಡಿದ್ದೆವು, ಆದರೆ ಒಂದು ಹೆಜ್ಜೆ ಮುಂದು ಹೋಗಿರುವ ಟೋಯೋಟಾ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಪ್ರಯೋಗಾಲಯದಲ್ಲಿ ತರಬೇತಿ ನೀಡಿ ಕೌಶಲ್ಯ ಹೊಂದಿದ ವಿದ್ಯಾರ್ಥಿಗಳಿಗೆ ಉದ್ಯೋಗದ ಭರವಸೆ (ಜಾಬ್ ಓರಿಯೆಂಟೆಡ್) ನೀಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ಸ್ವಾಗತಾರ್ಹ ಎಂದರು.

ತಂತ್ರಜ್ಞಾನ ಇಲ್ಲದ ಕ್ಷೇತ್ರವಿಲ್ಲ: ಎಸ್‌ಡಿಎಂಸಿ ಉಪಾಧ್ಯಕ್ಷ ದತ್ತಾತ್ರೇಯ ಸಾಳುಂಕೆ ಮಾತನಾಡಿ, ಯಾವುದೇ ಕ್ಷೇತ್ರಗಳು ತಂತ್ರಜ್ಞಾನದಿಂದ ದೂರ ಉಳಿದಿಲ್ಲ ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ರೋಗಗಳನ್ನು ಪತ್ತೆ ಹಚ್ಚುವಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ತಂತ್ರಜ್ಞಾನ ಕೆಲಸ ಮಾಡಿದರೇ, ಜೀವ ಉಳಿಸುವ ಸುಧಾರಿತ ಔಷಧಿಗಳನ್ನು ನೀಡುವಲ್ಲಿ ವಿಜ್ಞಾನ ಸಹಕರಿಸಲಿದೆ. ಹೀಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇವೆರಡರ ಸಮ್ಮಿಲನ ಇಂದು ಮನುಷ್ಯ ಬದುಕುಳಿಯಲು ನಿರ್ಣಾಯಕವಾಗಿ ಕಾರ್ಯ ನಿರ್ವಹಸಲಿದೆ ಎಂದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ಮುನಾಫ್ ಎರೇಶೀಮಿ, ವೀರೇಶ ಮತ್ತೀಹಳ್ಳಿ, ಜೈಭೀಮ್ ರಾರಾವಿ, ಡಾ.ಎ.ಎಂ.ಸೌದಾಗರ, ಮಾಲತೇಶ ಆಡಿನವರ, ಮಾಲತೇಶ ಕಂಬಳಿ, ಗುರುಸಿದ್ದಪ್ಪ ಮೂಡ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಹುಲ್ಯಾಳ, ಪ್ರಾಚಾರ್ಯ ಡಾ. ಮಾಲತೇಶ ಬಂಡೆಪ್ಪನವರ, ಉಪಪ್ರಾಚಾರ್ಯ ಬೀರೇಶ ಡೊಕ್ಕೇರ ಹಾಗೂ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ಜೀವನವೇ ಒಂದು ಸಂದೇಶ: ರಾಜೇಂದ್ರ
ಶಿರಹಟ್ಟಿ ತಾಲೂಕಿನಲ್ಲಿ ಮುಂಗಾರು ವೈಫಲ್ಯ, ವ್ಯಾಪಾರ‍ವೂ ಥಂಡಾ