ಮೇಲುಕೋಟೆ:
ಚೆಲುವನಾರಾಯಣಸ್ವಾಮಿಗೆ ಪುಷ್ಪಕೈಂಕರ್ಯ ನೈವೇಧ್ಯ ಮುಖ್ಯವಾಗಿ ಅವರೇ ಪಲ್ಲಕ್ಕಿ ಉತ್ಸವ ನಡೆಸುವ ಮೂಲಕ ಶ್ರದ್ಧಾಭಕ್ತಿಂದ ಸೇವೆ ಮಾಡಿದರು. ಆಚಾರ್ಯರಾಮಾನುಜರು ಅಂದಿನ ಬಿಗಿಯಾದ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಬ್ರಹ್ಮೋತ್ಸವದ ಕಾಲದಲ್ಲಿ ತೇರು, ತೆಪ್ಪ, ತೀರ್ಥಗಳಂದು ಚೆಲುವನಾರಾಯಣಸ್ವಾಮಿ ದೇವಾಲಯ ಮುಕ್ತಪ್ರವೇಶ ಹಾಗೂ ಸೇವೆಗೆ ಅವಕಾಶ ಕಲ್ಪಿಸಿದ್ದರು.
ಪ್ರಮುಖವಾಗಿ ಮಹಾರಥೋತ್ಸವದ ರಾತ್ರಿ ಬಂಗಾರದಪಲ್ಲಕ್ಕಿ ನಡೆಸುವ ಅವಕಾಶ ನೀಡಿದ್ದು, ಮೈಸೂರಿನ ಅಶೋಕಪುರಂನ ಕಾಳಿಕಾಂಬ ಟ್ರಸ್ಟ್ ದಲಿತರ ಪರ ಪ್ರತಿವರ್ಷ ಉತ್ಸವ ನಡೆಸುತ್ತಾ ಬಂದಿದೆ. ಈ ವರ್ಷವೂ ಅದ್ದೂರಿಯಾಗಿ ನೆರವೇರಿಸಿತು. ರಾತ್ರಿ 9.15ರವೇಳೆಗೆ ದಲಿತರ ವಿಶೇಷ ಮಂಗಳವಾಧ್ಯಗಳೊಂದಿಗೆ ಆರಂಭವಾದ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ 12ಗಂಟೆ ವೇಳೆಗೆ ಮುಕ್ತಾಯವಾಯಿತು.ಉತ್ಸವದಲ್ಲಿ ದಲಿತ ಮುಖಂಡರಾದ ಕಾಳಿಕಾಂಬ ಟ್ರಸ್ಟ್ ಗೌರವಾಧ್ಯಕ್ಷ ವೆಂಕಟರಾಮು, ಮೈಸೂರಿನ ಮಾಜಿ ಮೇಯರ್ ಹಾಗೂ ಅಧ್ಯಕ್ಷ ಪುರುಷೋತ್ತಮ್ ಮತ್ತು ಕಾರ್ಯದರ್ಶಿ ಎಂ.ಚಂದ್ರಶೇಖರ್ ಮತ್ತು ಸಹಕಾರ್ಯದರ್ಶಿ ಸೋಮಣ್ಣ ಗುಂಡಪ್ಪ ಸಹಕಾರ್ಯದರ್ಶಿ ಆರ್.ಸಿ ಮಹೇಶ್ ಸೇರಿದಂತೆ ಸಾವಿರಾರು ದಲಿತ ಭಕ್ತರು ಭಾಗವಹಿಸಿದ್ದರು. ಬಂಗಾರದ ಪಲ್ಲಕ್ಕಿ ಉತ್ಸವ ವೈಭವದಿಂದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ನೆರವೇರಿತು.
ಮದ್ದೂರು: ಕರ್ನಾಟಕ ರತ್ನ, ಪದ್ಮಭೂಷಣ, ನಡೆದಾಡಿದ ದೇವರು ಡಾ.ಶಿವಕುಮಾರ ಮಹಾಸ್ವಾಮೀಜಿಗಳ 119ನೇ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಪಟ್ಟಣದಲ್ಲಿ ಆಚರಿಸಲಾಯಿತು.ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಸಿದ್ದಗಂಗಾ ಶ್ರೀಗಳ ಭಕ್ತವೃಂದದಿಂದ ಲೀಲಾವತಿ ಬಡಾವಣೆಯ ಉದ್ಯಾನದ ಬಳಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಗಣ್ಯರು ನೂರಾರು ಮಂದಿ ಸಾರ್ವಜನಿಕರಿಗೆ ದಾಸೋಹ ವಿತರಿಸಿದರು.