ನಾಳೆಯಿಂದ ಸೇವಾಲಾಲ್ ಜಯಂತಿ: ಶೋಭಾಯಾತ್ರೆ: ತಿಪ್ಪೇಸ್ವಾಮಿ ನಾಯ್ಕ್

KannadaprabhaNewsNetwork |  
Published : Feb 06, 2026, 01:45 AM IST
 05 ಜೆ.ಜಿ.ಎಲ್. 2 ಅ) ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಬಂಜಾರ ಸಮಾಜದ ಅಧ್ಯಕ್ಷ ನರೇನಹಳ್ಳಿ ತಿಪ್ಪೇಸ್ವಾಮಿ ನಾಯ್ಕ್ ಇತರರು ಮಾತನಾಡಿದರು. | Kannada Prabha

ಸಾರಾಂಶ

ಪಟ್ಟಣದಲ್ಲಿ ಫೆ.೭ರಂದು ಸಂತ ಸೇವಾಲಾಲರ ೨೮೭ನೇ ವರ್ಷದ ಜಯಂತಿ ಹಿನ್ನೆಲೆ ಸೇವಾಲಾಲ್ ಮರಿಯಮ್ಮ ಬಂಜಾರ ಜನಸೇವಾ ಎಸ್ಸಿ ಸಂಘದ ವತಿಯಿಂದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ನರೇನಹಳ್ಳಿ ತಿಪ್ಪೇಸ್ವಾಮಿ ನಾಯ್ಕ್ ತಿಳಿಸಿದರು.

ಕನ್ನಡಪ್ರಭವಾರ್ತೆ ಜಗಳೂರು

ಪಟ್ಟಣದಲ್ಲಿ ಫೆ.೭ರಂದು ಸಂತ ಸೇವಾಲಾಲರ ೨೮೭ನೇ ವರ್ಷದ ಜಯಂತಿ ಹಿನ್ನೆಲೆ ಸೇವಾಲಾಲ್ ಮರಿಯಮ್ಮ ಬಂಜಾರ ಜನಸೇವಾ ಎಸ್ಸಿ ಸಂಘದ ವತಿಯಿಂದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ನರೇನಹಳ್ಳಿ ತಿಪ್ಪೇಸ್ವಾಮಿ ನಾಯ್ಕ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ನಡೆಯಲಿದೆ. ಅದರ ಪ್ರಯುಕ್ತ ಜಗಳೂರು ತಾಲೂಕಿನ ೧೮ ತಾಂಡಗಳಿಂದ ಒಗ್ಗೂಡಿ ಆಚರಣೆ ಮಾಡಲಾಗುತ್ತಿದೆ. ಕೇವಲ ಒಂದೇ ಸಮುದಾಯವಲ್ಲದೆ ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಸಂಘದ ಕಾರ್ಯದರ್ಶಿ ಕುಮಾರ್ನಾಯ್ಕ ಮಾತನಾಡಿ, ಪಟ್ಟಣದಲ್ಲಿ ಲಂಬಾಣಿ ಸಮುದಾಯಕ್ಕೆ ಜಯಂತಿ ಮಾಡಲು ಸ್ವಂತ ಜಾಗವಿಲ್ಲ. ಹಾಗಾಗಿ ತಾಲೂಕು ಕಚೇರಿ ಮುಂಭಾಗದಲ್ಲಿ ಹೋಮ, ಪೂಜೆಗಳನ್ನು ಮಾಡಲಾಗುವುದು. ಕಾರ್ಯಕ್ರಮದಲ್ಲಿ ಕುಮಾರ್ ಮಹಾರಾಜ್, ಶಿವಪ್ರಕಾಶ್ ಮಹಾರಾಜ್, ದೇನ್ಯಾಭಗತ್ ಸ್ವಾಮಿ, ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್, ಕೆ.ಪಿ ಪಾಲಯ್ಯ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ತಾಲೂಕಿನಿಂದ ೧೮ ತಾಂಡಗಳಿವೆ. ಸುಮಾರು ನೂರಕ್ಕಿಂತ ಹೆಚ್ಚು ಮಾಲಾಧಾರಿಗಳು ಆಗಮಿಸಲಿದ್ದಾರೆ. ೮೦ಕ್ಕೂ ಹೆಚ್ಚು ತೀಜ್ ಪುಟ್ಟಿಗಳು ಆಗಮಿಸಲಿದ್ದಾರೆ. ಈ ಬಾರಿ ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಎಲ್ಲಾ ಸಮಾಜದ ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ಕೃಷ್ಣಮೂರ್ತಿನಾಯ್ಕ ಮಾತನಾಡಿ, ಪಟ್ಟಣದ ಪ್ರವಾಸಿ ಮಂದಿರದಿಂದ ಅಂದು ಬೆಳಗ್ಗೆ ೧೧ಗಂಟೆಗೆ ಬೃಹತ್ ಶೋಭಾ ಯಾತ್ರೆಯ ಮೆರವಣಿಗೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಲಿದ್ದಾರೆ. ಅಲ್ಲಿಂದ ೮೦ಕ್ಕೂ ಹೆಚ್ಚು ಯುವತಿಯರು ಗೋದಿ ಸಸಿ ತೀಜ್ ಹೊತ್ತು ಸಾಗುವರು. ಭಜನೆ, ಕೋಲಾಟ, ಮಹಿಳೆಯರ ಗುಂಪು ನೃತ್ಯ, ಡಿಜೆ ಸೇರಿದಂತೆ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.

ಬಂಜಾರ ಸಮಾಜದ ಧರ್ಮನಾಯ್ಕ ಮಾತನಾಡಿ, ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಮಾಜಕ್ಕೆ ಶೇ ೪.೫ ರಷ್ಟು ಮೀಸಲಾತಿಯನ್ನು ಕೊಟ್ಟಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಸಮುದಾಯದ ಜತೆಗೆ ಇತರೆ ೫೯ ಸಮುದಾಯಗಳನ್ನು ಸೇರಿಸಿ ಶೇ ೫ ರಷ್ಟು ಮಾತ್ರ ಮೀಸಲಾತಿಯನ್ನು ಕೊಟ್ಟು ಅನ್ಯಾಯ ಮಾಡಿದೆ. ಆದ್ದರಿಂದ ಸೂರಗೊಂಡನಕೊಪ್ಪದಲ್ಲಿ ನಡೆಯುವ ಜಯಂತಿ ವೇದಿಕೆ ಸರ್ಕಾರದ ಯಾವ ಮಂತ್ರಿ, ಶಾಸಕರಿಗೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಮುಖಂಡರಾದ ದತ್ತಾ ನಾಯ್ಕ್, ಜ್ಯೋತಿ ನಾಯ್ಕ್, ಸ್ವಾಮಿ ನಾಯ್ಕ್, ಸತೀಶ್ ನಾಯ್ಕ್, ಮಹೇಶ್ ನಾಯ್ಕ್, ಶಿವಕುಮಾರ್, ಶ್ರೀನಿವಾಸ್ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ