)
- ಭೋವಿ ಶ್ರೀಗಳ ಪೂರ್ವಾಶ್ರಮದ ಹೆತ್ತವರಾದ ಹನುಮಂತಪ್ಪ- ಸರೋಜಮ್ಮಗೆ ಕುಟೀರ ಹಸ್ತಾಂತರ - - -
ಕುಂಚಿಟಿಗ ಪೀಠದ ಸ್ವಾಮೀಜಿ ಹಾಗೂ ಭೋವಿ ಪೀಠದ ಶ್ರೀಗಳ ಸ್ನೇಹ ಎಲ್ಲರಿಗೂ ಮಾದರಿಯಾಗಿದೆ. ಯಾರೇ ಸಂಕಷ್ಟದಲ್ಲಿದ್ದರೂ ಮೊದಲಿಗೆ ನೆರವಿಗೆ ಬರುವುದೇ ಹೊಸದುರ್ಗದ ಕುಂಚಿಟಿಗ ಪೀಠದ ಶ್ರೀ ಶಾಂತವೀರ ಸ್ವಾಮೀಜಿ ಎಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
ನಗರದ ಯರಗುಂಟೆಯಲ್ಲಿ ಹೊಸದುರ್ಗದ ಶ್ರೀ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಮ್ಮ ಬಾಲ್ಯ ಸ್ನೇಹಿತರಾದ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪೂರ್ವಾಶ್ರಮದ ಹೆತ್ತವರಾದ ಹನುಮಂತಪ್ಪ- ಸರೋಜಮ್ಮ ದಂಪತಿಗೆ ಕಟ್ಟಿಸಿದ ಸಿದ್ಧರಾಮ ಕುಟೀರ ಮನೆ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಕುಂಚಿಟಿಗ ಶ್ರೀಗಳು ಹಾಗೂ ಭೋವಿ ಪೀಠದ ಶ್ರೀಗಳು ಪರಸ್ಪರ ಗೌರವ ನೀಡುತ್ತಾರೆ. ಈ ಇಬ್ಬರೂ ಹಾಲು-ಜೇನಿನಂತಿದ್ದಾರೆ ಎಂದರು.ಶಾಂತವೀರ ಸ್ವಾಮೀಜಿ ಮನೆ ಹಸ್ತಾಂತರದ ಬಗ್ಗೆ ಯಾರಿಗೂ ಸುಳಿವನ್ನೇ ನೀಡಿರಲಿಲ್ಲ. ಯಾವುದೇ ಸ್ವಾಮೀಜಿಗಳ ಪೂರ್ವಾಶ್ರಮದ ಕುಟುಂಬದ ಸದಸ್ಯರು ಒಂದು ಹೊಸ ಬೈಕ್ ಖರೀದಿಸಿದರೂ ಆ ಕುಟುಂಬಕ್ಕೇನು ಬಿಡಪ್ಪಾ ಎಂಬಂತೆ ಮಾತನಾಡುವವರೂ ಇದ್ದಾರೆ. ಇಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರಿಗೆ ಕುಂಚಿಟಿಗ ಸಮಾಜದವರು ಕಾಣಿಕೆ ನೀಡಿದ್ದಾರೆ. ಯಾರೇ ಸಂತರು ಸಂಕಷ್ಟದಲ್ಲಿದ್ದರೂ ನೆರವಿಗೆ ಬರುವ ಶಾಂತವೀರ ಸ್ವಾಮೀಜಿ ಇತರರಿಗೂ ಪ್ರೇರಣೆಯಾಗಿದ್ದಾರೆ. ಭೋವಿ ಶ್ರೀಗಳು ಕರುಣಾಮಯಿ ಎಂದು ಹೇಳಿದರು.
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಮನೆ ನೋಡ, ಮನ ಬಂದಂತಾಗಿರಬೇಕು ಎನ್ನುತ್ತಾರೆ. ಇದು ಕೇವಲ ಮನೆಯಲ್ಲ, ಮನೆ ಹಿಂದೆ ಮಮ್ಮಲ ಮರುಗಿದ ಜೀವಗಳಿವೆ. ತಾವು ಕಲ್ಲು ಒಡೆದು, ಬೇರೆಯವರಿಗೆ ಮನೆ ಮಾಡಿ ಕೊಟ್ಟವರು ತಾವು ಹೊರಗೆ ಇದ್ದರು. 9 ತಿಂಗಳು ಹೆತ್ತು, ಹೊತ್ತ ಮಗನನ್ನೇ ಸಮಾಜಕ್ಕೆ ಸಮರ್ಪಿಸಿದರು. ಆ ತಂದೆ, ತಾಯಿಗೆ ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ ಸೂರು ನೀಡಿದ್ದಾರೆ. ಚಿತ್ರದುರ್ಗ ಮುರುಘಾ ಮಠದ ಗುರುಕುಲದಲ್ಲಿ ತಾವೆಲ್ಲಾ ಶ್ರೀಗಳ ಜೊತೆಗಿದ್ದ ಒಡನಾಟ ಮರೆಯುವುದಿಲ್ಲ. ನಾವು ಯಾವ ಸ್ವಾಮೀಜಿಗಳೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಬುದ್ಧ, ಬಸವ, ಗಾಂಧೀಗೆ ಬಿಟ್ಟಿಲ್ಲ. ನಿಂದಿಸುವವರು ಇರಬೇಕು ಎಂದರು.
ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ನವಲಿಂಗ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ, ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಗುಂಡಯ್ಯ ಸ್ವಾಮೀಜಿ, ಅಪ್ಪಣ್ಣ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ, ಭೋವಿ ನಿಗಮದ ಅಧ್ಯಕ್ಷ ನೇರಲಗುಂಟೆ ಎಸ್.ರಾಮಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಭೋವಿ ಸಮಾಜದ ಅಧ್ಯಕ್ಷ ರವಿ ಮಾಕಳಿ, ಶಾಸಕ ಡಿ.ಜಿ.ಶಾಂತನಗೌಡ, ತುಮಕೂರಿನ ವಿದ್ಯಾನಿಧಿ ಸಂಸ್ಥೆಯ ಪ್ರದೀಪಕುಮಾರ, ಬಿಜೆಪಿ ಮುಖಂಡರಾದ ಲಿಂಗಮೂರ್ತಿ, ಮಾಡಾಳ ಮಲ್ಲಿಕಾರ್ಜುನ, ಜಿ.ಎಸ್. ಅನಿತಕುಮಾರ, ಮುರುಳೀಧರ ಹಾಲಪ್ಪ, ಕಾಂಗ್ರೆಸ ಯುವ ಮುಖಂಡ ಸಮರ್ಥ ಎಂ.ಶಾಮನೂರು, ಡಿ.ಬಸವರಾಜ ಇತರರು ಇದ್ದರು.
-(ಫೋಟೋಗಳಿವೆ).