ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ದುರ್ಗಾದೇವಿ ದೇವಸ್ಥಾನದ ಎದುರು ನಿರ್ಮಿಸಲಾದ ಶೆಲ್ಟರ್ ಕಾಮಗಾರಿ ಉದ್ಘಾಟನೆ ನೆರವೇರಿಸಿ ಬಳಿಕ ಪರಿಶಿಷ್ಟ ಸಮುದಾಯದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡಕುಟುಂಬಗಳಿಗೆ ಅನುಕೂಲವಾಗುವಂತೆ ಈ ಕಾಮಗಾರಿ ಮಾಡಲಾಗಿದೆ. ಗ್ರಾಮದ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಬೈರನಟ್ಟಿ-ಸುಣಧೋಳಿ ರಸ್ತೆಗೆ ಬಸ್ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಮದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಪ್ರಮುಖರಾದ ಪ್ರಕಾಶ ಮಾದರ, ಚಂದ್ರಪ್ಪ ಗಾಣಿಗೇರ, ಭೀಮಣ್ಣ ಹಟ್ಟಿಹೊಳಿ, ಶ್ರೀಶೈಲ ಮಾಲಿ, ಶಶಿಕಾಂತ ಬೆಣ್ಣಿ, ಮುರುಗೆಪ್ಪ ಪಾಟೀಲ, ಬಸವರಾಜ ಗಾಣಿಗೇರ, ನಿಂಗಪ್ಪ ಕಮತೆ, ಚಂದ್ರಶೇಖರ ಗುಂಡೊಳ್ಳಿ, ನಾಗಪ್ಪ ಗಾಣಿಗೇರ, ಮಾರುತಿ ಹೊರಟ್ಟಿ, ತುಕಾರಾಮ ಮಾದರ, ದುರ್ಗಪ್ಪ ಮೇತ್ರಿ, ಉದ್ದಪ್ಪ ಮಾದರ, ಸುರೇಶ ಕಂಕಣವಾಡಿ, ಪರಸಪ್ಪ ಮಾದರ, ಯಲ್ಲಪ್ಪ ಮಾದರ, ಅಶೋಕ ಮಾದರ, ನಾಗಲಿಂಗ ಮಾದರ, ಕಾರ್ಯಕರ್ತರು ಇದ್ದರು.