ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜನ್ಮದಿನ ಆಚರಣೆಯಲ್ಲಿ ಪಿ.ಚಂದ್ರಮೌಳಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಲೋಕಕ್ಕೆ ಬೆಳಕಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು 117 ನೇ ಜನ್ಮ ದಿನವನ್ನು ನಗರದ ಎಂ.ಜಿ.ರಸ್ತೆಯ ಬಸವಣ್ಣ ಗುಡಿಯಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ, ಪಂಚಾಚಾರ್ಯ ಸೇವಾಸಮಿತಿ, ಗುಂಡಭಕ್ತ ಮಂಡಳಿ, ವೀರಶೈವ ಸಮಾಜದ ಮುಖಂಡರು ಭಾವಚಿತ್ರಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಿ ಆಚರಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ, ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿದ್ದ ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಎಂದು ಹೇಳಿದರು.ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವತತ್ವ ಬಿತ್ತಿ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಸಿದ್ಧಗಂಗಾ ಶ್ರೀಗಳು ಮನುಕುಲಕ್ಕೆ ಮಾದರಿ. ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟವರು. ಶ್ರೀಗಳು ಜಾತಿ, ಧರ್ಮಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿ ಅನ್ನ, ವಸತಿ, ಶಿಕ್ಷಣ ಕ್ಕೆ ಒತ್ತು ಕೊಟ್ಟು ಸ್ವಾಸ್ಥ್ಯ ಸಮಾಜಕ್ ಹಾಕಿದವರು ಎಂದರು.
ಶಿವಕುಮಾರ ಸ್ವಾಮೀಜಿ ಹಸಿದು ಬಂದ ಅತಿಥಿಗಳಿಗೆ ದಾಸೋಹ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ನಡೆದಾಡುವ ದೇವರು, ಅಭಿನವ, ಬಸವಣ್ಣ ಎಂದೇ ಹೆಸರಾಗಿದ್ದವರು 111 ವರ್ಷಗಳ ತುಂಬು ಜೀವನ ನಡೆಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಆರೋಗ್ಯ ವಸತಿ ಕಲ್ಪಿಸಿ ಸಮಾಜಕ್ಕೆ ಮಾದರಿಯಾದವರನ್ನು ರಾಜ್ಯ ಸರ್ಕಾರ ಶ್ರೀಗಳ ಜಯಂತಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.ವೀರಶೈವ ಸಮಾಜದ ಮುಖಂಡ ಜಿ.ವೀರೇಶ್ ಮಾತನಾಡಿ, ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಕೆಲಸದಲ್ಲಿದ್ದು ಪ್ರತಿ ವರ್ಷ ಶ್ರೀಗಳ ಜನ್ಮದಿನದ ಅಂಗವಾಗಿ ಮಠಕ್ಕಾಗಮಿಸಿ ಕೈಲಾದ ಸೇವೆ ಸಲ್ಲಿಸಿ ಜನ್ಮದಿನವನ್ನು ಕುಟುಂಬದ ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ ಎಂದರು.
ಜಾತಿ, ಧರ್ಮ ಮೀರಿ ಮಕ್ಕಳಿಗೆ ವಿದ್ಯಾದಾನ ಮಾಡಿ ಸಮಾಜದ ಏಳಿಗೆಗೆ ದುಡಿದಿರುವ ಶ್ರೀಗಳಿಗೆ ಸರ್ಕಾರ ಶೀಘ್ರದಲ್ಲೇ ಭಾರತ ರತ್ನ ನೀಡಿ ಗೌರವಿಸಬೇಕು ಎಂದ ಅವರು, ಇಂತಹ ಮಹಾನೀಯರು ಜನ್ಮವಿತ್ತ ನಾಡಿನಲ್ಲಿ ನಾವೆಲ್ಲರೂ ಹುಟ್ಟಿರು ವುದು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಪಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಅಶೋಕ್, ಮುಖಂಡರಾದ ಎಂ.ಬಿ. ಅಶೋಕ್ಕುಮಾರ್, ಬಿ.ಆರ್. ಜಯಪ್ರಕಾಶ್, ಕಾಂತರಾಜ್, ಎ.ಎಸ್.ಎಸ್.ಆರಾಧ್ಯ, ಲೋಕೇಶ್, ಉಮೇಶ್, ಗಂಗಾಧರಪ್ಪಹಾಜರಿದ್ದರು.
ಪೋಟೋ ಫೈಲ್ ನೇಮ್ 1 ಕೆಸಿಕೆಎಂ 4ಚಿಕ್ಕಮಗಳೂರಿನ ಎಂ.ಜಿ.ರಸ್ತೆಯ ಬಸವಣ್ಣ ಗುಡಿಯಲ್ಲಿ ಸೋಮವಾರ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು 117 ನೇ ಜನ್ಮ ದಿನವನ್ನು ಆಚರಿಸಲಾಯಿತು.