ಕನ್ನಡಪ್ರಭ ವಾರ್ತೆ ಮೈಸೂರು
ಜೆ.ಪಿ. ನಗರದ ಶಿವಶಕ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್ ನಗರದ ಶ್ರೀ ರಾಜೇಂದ್ರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಥೆಯ 2ನೇ ವಾರ್ಷಿಕೋತ್ಸವ, ಬಸವ, ಅಕ್ಕಮಹಾದೇವಿ ಹಾಗೂ ಶಿವಕುಮಾರ ಸ್ವಾಮೀಜಿ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಮತ ನೋಡದೆ ಎಲ್ಲರಿಗೂ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರು ಶಿಕ್ಷಣ, ಅನ್ನ ದಾಸೋಹ ನೀಡಿದ್ದಾರೆ. ನಿಜವಾದ ವಿಶ್ವಗುರು ಅವರು. ಅವರಿಗೆ ಭಾರತ ರತ್ನ ನೀಡಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಆದರೆ ಭಾರತ ರತ್ನಕ್ಕಿಂತ ಮಿಗಿಲಾದ ಜೀವನವನ್ನು ಸಾಗಿಸಿ, ಸಾಧಿಸಿ ಅವರು ಹೋಗಿದ್ದಾರೆ ಎಂದರು.ಬಸವಣ್ಣನವರು ಸಮಾಜದಲ್ಲಿದ್ದ ತಪ್ಪುಗಳನ್ನು ತಿದ್ದಿ ಸಮ ಸಮಾಜ ನಿರ್ಮಿಸಲು ಯತ್ನಿಸಿದರು. ಬಸವಣ್ಣ ಅವರ ಚಿಂತನೆಗಳು ಸರ್ವರೂ ಒಪ್ಪುವಂತಿದೆ. ಬಸವಣ್ಣ ನಮ್ಮ ನಾಡಿನವರು ಎಂಬುದು ಹೆಮ್ಮೆಯ ವಿಚಾರ. 12ನೇ ಶತಮಾನದ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಮೂಢನಂಬಿಕೆ, ಮಡಿವಂತಿಕೆ ತೀವ್ರವಾಗಿದ್ದ ವೇಳೆ ಜಗಜ್ಯೋತಿ ಬಸವಣ್ಣ ಅವರು ಎಲ್ಲಾ ವರ್ಗದ ದಾರ್ಶನಿಕರಿರನ್ನು ಒಟ್ಟುಗೂಡಿಸಿ ಸಮಾಜ ಪರಿವರ್ತಿಸಲು ಪ್ರಯತ್ನಿಸಿದ್ದಾಗಿ ಅವರು ಹೇಳಿದರು.
ಊಟಿಯಲ್ಲಿ ಜೀವನೋತ್ಸಾಹ ಶಿಬಿರಕನ್ನಡಪ್ರಭ ವಾರ್ತೆ ಮೈಸೂರು
ಶಿಬಿರದಲ್ಲಿ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಮಹೇಶ್ ಮಾಶಾಳ, ಡಾ.ಹಿ.ಚಿ. ಬೋರಲಿಂಗಯ್ಯ, ವಿಶ್ವನಾಥ್ ಎಂ. ಹಿರೇಮಠ, ಎಂ.ಡಿ. ಶರತ್, ಡಾ. ಶರತ್ ಚಂದ್ರ ಸ್ವಾಮೀಜಿ, ಡಾ. ರಾಹುಲ್ ದೇವರಾಜ್, ವಿಶ್ವೇಶ್ವರ ಭಟ್, ಕುಸುಮ ಆಯರಹಳ್ಳಿ, ಶೋಭಾ ಮಳವಳ್ಳಿ ಮತ್ತು ಬೇಲೂರು ರಾಮಮೂರ್ತಿ ಅವರು ಕ್ರಮವಾಗಿ ಶಿವಯೋಗ, ಸಹನಶೀಲತೆ, ಜಾನಪದ ಬದುಕು, ಕೂಡುಕುಟುಂಬ, ಅಂತರ್ಜಾಲದ ಆತಂಕಗಳು, ಲೌಕಿಕದಿಂದ ಲೌಕಿಕದೆಡೆಗೆ, ಭಾರತೀಯ ಸಂಸ್ಕೃತಿ, ಬದುಕು ಹೇಗಿದ್ದರೆಚೆಂದ, ವಚನ ಸಂಸ್ಕೃತಿ, ನೈಜ ಸುದ್ದಿಗಳು ಮತ್ತು ನಕ್ಕರೆ ಸ್ವರ್ಗ ವಿಷಯ ಕುರಿತು ಉಪನ್ಯಾಸ ನೀಡುವರು. 11 ರಂದು ಶಿಬಿರದ ಸಮಾರೋಪ ಏರ್ಪಡಿಸಲಾಗಿದೆ.ಶಿಬಿರದಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಯೋಗ ಮತ್ತು ಧ್ಯಾನ, ದೇಸಿ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.