ಕನ್ನಡಪ್ರಭ ವಾರ್ತೆ ಹಾಸನ
ವಿವಾದಿತ ನಿವೇಶನ ತನ್ನದೇ ಎಂದು ದೇವರಾಜ್ ಎಂಬುವರು 2025ರ ಏಪ್ರಿಲ್ 16ರ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಕಾಂಪೌಂಡ್ ತೆರವುಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಅದೇ ಆದೇಶಕ್ಕೆ ಫೆಬ್ರವರಿ 11ರಂದು ನ್ಯಾಯಾಲಯ ತಡೆ ನೀಡಿರುವುದಾಗಿ ಪುಷ್ಪ ಸ್ಪಷ್ಟಪಡಿಸಿದ್ದಾರೆ. ತಡೆ ಆದೇಶ
ಜಾರಿಯಲ್ಲಿದ್ದರೂ ಜೆಸಿಬಿ ಮತ್ತು ಟಿಪ್ಪರ್ ವಾಹನಗಳ ಸಹಾಯದಿಂದ ಏಕಾಏಕಿ ಕಾಂಪೌಂಡ್ ಒಡೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.ಪ್ರಕರಣ ಸಂಬಂಧ ನಡೆದ ಗಲಾಟೆಯ ವಿಡಿಯೋ ದೃಶ್ಯಾವಳಿಗಳಿರುವ ಪೆನ್ ಡ್ರೈವ್, ನ್ಯಾಯಾಲಯದ ಆದೇಶ ಪ್ರತಿ, ಸೈಟ್ ಖರೀದಿ ಮಾಡಿದ ಕ್ರಯಪತ್ರಗಳ ದಾಖಲಾತಿ ಸೇರಿದಂತೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಎಸ್ಪಿಗೆ ಸಲ್ಲಿಸಲಾಗಿದೆ. ನಮ್ಮ ಬಳಿ ಇರುವ ಎಲ್ಲಾ ದಾಖಲೆಯನ್ನು ನೀಡಿದ್ದೇನೆ. ಪರಿಶೀಲನೆಗೆ ಸಮಯ ಕೇಳಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪುಷ್ಪ ಮಾಧ್ಯಮಗಳಿಗೆ ತಿಳಿಸಿದರು.
ಇದು ಅಪರಾಧ. ನಮ್ಮ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಹಾನಿ ಮಾಡಲಾಗಿದೆ. ಆದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಸಂಬಂಧಪಟ್ಟ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಅವರ ಪಾತ್ರದ ಕುರಿತು ಕೂಡ ಅವರು ಪ್ರಶ್ನೆ ಎತ್ತಿದ್ದು, ಮೊದಲ ದಿನವೇ ದಾಖಲೆ ಪರಿಶೀಲಿಸಿ ಇಬ್ಬರನ್ನೂ
ಒಂದು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ರಕ್ಷಣೆ ಸಿಕ್ಕಿಲ್ಲ. ಓರ್ವ ಮಹಿಳೆಯಾಗಿ ನಾನೇ ಬಂದು ಹೋರಾಡುತ್ತಿದ್ದೇನೆ. ನಮಗೇ ಈ ರೀತಿ ಆಗಿದ್ದರೆ ಇತರರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಪುಷ್ಪ, ತಮ್ಮ ಸೈಟ್ ಬಳಿ ಗಲಾಟೆ ನಡೆಸಿದ ಎಲ್ಲರ ವಿರುದ್ಧವೂ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಎಸ್ಪಿ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಸೈಟ್ ಮಾಲೀಕತ್ವ ವಿವಾದ ಈಗ ಪೊಲೀಸ್ ಮತ್ತು ನ್ಯಾಯಾಂಗದ ಗಮನ ಸೆಳೆದಿದ್ದು, ಮುಂದಿನ ಕ್ರಮಗಳತ್ತ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.