ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬನ್ನಿಮಂಟಪದಲ್ಲಿರುವ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 2023- 2025ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅನರು, ಸಾಮಾಜಿಕ ಜಾಲತಾಣಗಳ ಸದ್ಬಳಕೆ ಹಾಗೂ ತಮ್ಮ ಸ್ನೇಹಿತರನ್ನು ಪರಸ್ಪರ ಪ್ರೇರೇಪಿಸುವುದು ಗುರಿ ಮುಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರೆಕ್ಟರ್ ಫಾ. ಡಾ. ಲೂರ್ದು ಪ್ರಸಾದ್ ಜೋಸೆಫ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೈಚಾರಿಕತೆಯಿಂದ ಸದ್ಬಳಕೆ ಮಾಡಿಕೊಂಡು, ತಮ್ಮ ಬದುಕನ್ನು ಆದರ್ಶಮಯವಾಗಿ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.239 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರವಿ ಜೆ.ಡಿ. ಸಲ್ಮಾನ್ಹಾ, ಸ್ನಾತಕೋತ್ತರ ಕೇಂದ್ರದ ಸಂಯೋಜಕಿ ಡಾ.ಸಿ.ಎ. ನೂರ್ ಮುಬಾಶೀರ್, ಕ್ಯಾಂಪಸ್ ಆಡಳಿತಾಧಿಕಾರಿ ಫಾ. ಜ್ಞಾನಪ್ರಕಾಶಂ, ಸಹಾಯಕ ರೆಕ್ಟರ್ ಫಾ.ಎಸ್. ಡೇವಿಡ್ ಸಾಗಯರಾಜ್, ನಾಗರಾಜ್ ಅರಸು, ಪ್ರಕಾಶ್ ಕುಟಿನೊ, ಥಾಮಸ್ ಗುಣಶೀಲನ್, ರೀನಾ ಫ್ರಾನ್ಸಿಸ್ ಮೊದಲಾದವರು ಇದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಎಸ್. ಲೀಲಾ, ಐಕ್ಯೂಎಸಿ ಸಂಯೋಜಕ ಡಾ.ಎಚ್.ಎಂ. ಮಂಜುನಾಥ್, ಗ್ರಂಥಾಪಲಕ ಡಾ.ಜಿ. ಮಂಜುನಾಥ ಹಾಗೂ ಸಹ ಪ್ರಾಧ್ಯಾಪಕ ಡಾ.ಎಚ್.ಎನ್.ವಿಶ್ವನಾಥ್ ನ್ಯಾಕ್ ಸಮಿತಿಗೆ ಸಂಪೂರ್ಣ ಮಾಹಿತಿ ಒದಗಿಸಿದರು.
ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲಿಕೆಗೆ ಪೂರಕವಾಗಿರುವ ವಾತಾವರಣ, ಮೂಲಸೌಕರ್ಯಗಳು, ಗ್ರಂಥಾಲಯದ ಸೇವಾ ಸೌಲಭ್ಯಗಳು, ಪ್ರಶಿಕ್ಷಣಾರ್ಥಿಗಳಲ್ಲಿರುವ ಶಿಸ್ತು, ಶೈಕ್ಷಣಿಕ- ಕೌಶಲ್ಯಾಭಿವೃದ್ಧಿಯ ಕ್ರಮಗಳನ್ನು ಮೆಚ್ಚಿದ ಸಮಿತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯವೈಖರಿಯನ್ನು ಪ್ರಶಂಸಿಸಿತು.