ಒಂದು ರಾಷ್ಟ್ರ ಒಂದೇ ಪ್ರಕಾರದ ಶಿಕ್ಷಣ ನೀತಿ: ಕಿರಣ್ ಸಾಗರ್‌

KannadaprabhaNewsNetwork |  
Published : Jan 12, 2026, 03:00 AM IST
ರಾಜ್ಯ ವ್ಯಾಪಿ ಸರಕಾರಿ ಶಾಲೆ ಮತ್ತು ಕನ್ನಡ ಮಾದ್ಯಮ ಶಾಲೆಗಳಿಗೆ ಸ್ಮಾರ್ಟ್ ಬೋರ್ಡನ್ನು  ಒದಗಿಸುವ ಯೋಜನೆ | Kannada Prabha

ಸಾರಾಂಶ

ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲೆಗೆ ಗುರುವಾರ ಸ್ಮಾರ್ಟ್ ಬೋರ್ಡನ್ನು ಹಸ್ತಾಂತರಿಸಿ

ಉಪ್ಪಿನಂಗಡಿ: ಒಂದು ರಾಷ್ಟ್ರ ಒಂದೇ ಪ್ರಕಾರದ ಶಿಕ್ಷಣ ನೀತಿ ಜಾರಿಯಾಗಬೇಕು. ಸರ್ಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ಲಭಿಸುವಂತಾಗಲು ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸರ್ಕಾರಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಸ್ಮಾರ್ಟ್ ಬೋರ್ಡನ್ನು ಒದಗಿಸುವ ಯೋಜನೆಯನ್ನು ಅನುಷ್ಠಾನಿಸಲಾಗಿದೆ ಎಂದು ಯುವ ಬೆಂಗಳೂರು ಟ್ರಸ್ಟ್ ಸಂಸ್ಥಾಪಕ ಕಿರಣ್ ಸಾಗರ್ ತಿಳಿಸಿದರು. ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲೆಗೆ ಗುರುವಾರ ಸ್ಮಾರ್ಟ್ ಬೋರ್ಡನ್ನು ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಕಲಿಕೆಯ ಸ್ವರೂಪ ಬದಲಾಯಿಸಲು, ಮತ್ತು ಕಲಿಕೆಯಲ್ಲಿ ಚೈತನ್ಯ ಮೂಡಿಸಲು ರಾಜ್ಯದ ೩೪೫ ಶಾಲೆಗಳಿಗೆ ಸ್ಮಾರ್ಟ್ ಬೋರ್ಡನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ಸದ್ಭಳಕೆ ಮಾಡಿದ ಶಾಲೆಗಳ ಪ್ರತಿ ತರಗತಿಗಳಿಗೆ ಇಂತಹ ಬೋರ್ಡನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದರು. ಯುವ ಬೆಂಗಳೂರು ಟ್ರಸ್ಟ್ ಅಧ್ಯಕ್ಷ ಸುನಿಲ್ ಮಾತನಾಡಿ ೧೦ ಜನರಿಂದ ಪ್ರಾರಂಭವಾದ ಈ ಟ್ರಸ್ಟ್ ಇದೀಗ ೨೦ ಸಾವಿರ ಸದಸ್ಯರನ್ನು ಹೊಂದಿದೆ. ಮಾತ್ರವಲ್ಲದೆ ಈ ದಿನ ದ ಕ ಜಿಲ್ಲೆಯ ಉಪ್ಪಿನಂಗಡಿ, ಕೊಂಬೆಟ್ಟು ಪುತ್ತೂರು, ಕಾವು, ಬಡನಾಜೆ, ನೆಲ್ಯಾಡಿ, ವೇಣೂರು, ಬೆಳ್ಳಾರೆ, ಮಚ್ಚಿನ, ಅಲಂಕಾರ್, ಸೇರಿದಂತೆ ಒಟ್ಟು ಹನ್ನೊಂದು ವಿದ್ಯಾ ಸಂಸ್ಥೆಗಳಿಗೆ ಈ ಕೊಡುಗೆ ನೀಡಲಾಗಿದೆ ಎಂದರು.

೧೮೩೬ ನೇ ಇಸವಿಯಲ್ಲಿ ಸ್ಥಾಪನೆ ಕಂಡ ಉಪ್ಪಿನಂಗಡಿಯ ಈ ಸರ್ಕಾರಿ ಮಾದರಿ ಶಾಲೆಗೆ ಇದೀಗ ೧೯೦ ವರ್ಷ ಪೂರ್ಣವಾಗಿದೆ. ಇದೇ ಸಂದರ್ಭಕ್ಕೆ ಸರಿಯಾಗಿ ಸ್ಮಾರ್ಟ್ ಬೋರ್ಡ್ ಲಭಿಸಿರುವುದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.

ಶಾಲಾ ಮುಖ್ಯಗುರು ಹನುಮಂತಯ್ಯ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ ಭಟ್, ಶಾಲಾಭಿವೃದ್ಧಿ ಸಮಿತಿಯ ಕಲಂದರ್ ಶಾಪಿ, ತಾರಾನಾಥ್, ಕೈರುನ್ನೀಸಾ, ಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಂತೋಷ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ