ತಿಂಗಳ ಅತಿಥಿಯಲ್ಲಿ ಸೋಬಾನೆ ಕಲಾವಿದೆ ಹುಚ್ಚಮ್ಮಗೆ ಗೌರವ

KannadaprabhaNewsNetwork |  
Published : Jun 17, 2025, 12:30 AM IST
16ಕೆಆರ್ ಎಂಎನ್  2.ಜೆಪಿಜಿರಾಮನಗರದ ಜಾನಪದ ಲೋಕದಲ್ಲಿ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಹುಚ್ಚಮ್ಮ ಅವರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಾರ್ಥ ನಡೆಯುವ ಲೋಕಸಿರಿ ತಿಂಗಳ ಅತಿಥಿ -106 ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಹುಚ್ಚಮ್ಮ ಅವರನ್ನು ಗೌರವಿಸಲಾಯಿತು.

ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಾರ್ಥ ನಡೆಯುವ ಲೋಕಸಿರಿ ತಿಂಗಳ ಅತಿಥಿ -106 ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಹುಚ್ಚಮ್ಮ ಅವರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ , ತಿಂಗಳ ಅತಿಥಿ ಸಣ್ಣ ಕಾರ್ಯಕ್ರಮ ಎನಿಸಿದರೂ ಇದರ ಮಹತ್ವ ದೊಡ್ಡದು. ಪ್ರತಿ ಕಾರ್ಯಕ್ರಮವೂ ದಾಖಲೆಯ ಕಾರ್ಯಕ್ರಮವೇ. ಇಂತಹ ಕಾರ್ಯಕ್ರಮವನ್ನು ನಾಡಿನಲ್ಲಿ ಎಲ್ಲೂ ಮಾಡುತ್ತಿಲ್ಲ. ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಯುತ್ತದೆ. ನಮ್ಮ ತಾತನಿಗೆ ಸೋಬಾನೆ ಪದಗಳೆಂದರೆ ತುಂಬಾ ಪ್ರೀತಿ. ಹಾಗಾಗಿ ವರ್ಷಪೂರ್ತಿ ಕೇಳುವಷ್ಟು ಸೋಬಾನೆ ಪದಗಳನ್ನು ದ್ವನಿ ಮುದ್ರಣ ಮಾಡಿ ಸಂಗ್ರಹಿಸಿದ್ದಾರೆ ಎಂದರು.

ಗೌರವ ಅತಿಥಿಗಳಾಗಿದ್ದ ಪತ್ರಕರ್ತ ಓದೇಶ ಸಕಲೇಸಪುರ ಮಾತನಾಡಿ, ಜಾನಪದ ಲೋಕಕ್ಕೆ ಬಂದರೆ ಮತ್ತೆ ನಮ್ಮ ಮೂಲ ನೆಲೆ ಹಳ್ಳಿಗೆ ಹೋಗಿ ಬಂದಂತಾಗುತ್ತದೆ. ಪ್ರತಿ ಮನೆ, ಹಳ್ಳಿಯ ಅಡುಗೆ ರುಚಿ ಬದಲಾದಂತೆ, ಪ್ರತಿ ಜಿಲ್ಲೆಯ ಸಂಸ್ಕೃತಿ ಕಲಾ ಪ್ರಕಾರಗಳು ವಿಭಿನ್ನ ವಿಶಿಷ್ಟ. ಜಾನಪದ ಲೋಕ ನಾಡಿನ ಸಮಗ್ರ ಚಿತ್ರಣವನ್ನು ನೀಡುವ ಕಲಾಕೇಂದ್ರವಾಗಿ ವಿಶೇಷತೆಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡ ಕಲಾವಿದರಾದೆ ಹುಚ್ಚಮ್ಮರವರು 12ನೇ ವಯಸ್ಸಿಗೆ ಹಾಡುವುದನ್ನು ನಮ್ಮ ಚಿಕ್ಕಮ್ಮನಿಂದ ಕಲಿತೆ. ಕಲಿತ ಕಲೆಯನ್ನು ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳಿಗೆ ಕಲಿಸುತ್ತಿರುವೆ ಎಂದು ಮಾತು ಆರಂಭಿಸಿ, ಬಂಜೆ ಹೊನ್ನಮ್ಮನ ಗೀತೆ, ಸೋಬಾನೆ ಪದ, ಜರಿಯುವ ಪದ, ತಿಂಗಳುಮಾಮನ ಪದ, ಬೀಸುವ ಕಲ್ಲಿನ ಪದ, ಕುಟ್ಟುವ ಪದ, ಕೋಲಾಟದ ಹಾಡುಗಳನ್ನು ಹಾಡಿ ರಂಜಿಸಿದರು.

ಒಮ್ಮೆ ಮದುವೆಯೊಂದರಲ್ಲಿ ಜರಿಯುವ ಪದವನ್ನು ಹಾಡಿದಾಗ ಗಂಡು ಮುನಿಸಿಕೊಂಡು ಹೋದ ಪ್ರಸಂಗವನ್ನು ಸ್ವಾರಸ್ಯಕರವಾಗಿ ನಿರೂಪಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಇದೇ ಸಂದರ್ಭದಲ್ಲಿ ಪುಟ್ಟಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ, ಲಕ್ಷ್ಮಿನರಸಮ್ಮ, ಹೊನ್ನಮ್ಮ, ಹುಚ್ಚಮ್ಮನ ಜೊತೆ ಹಾಡಿಗೆ ದನಿಯಾದರು. ಕ್ಯೂರೇಟರ್ ಡಾ.ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು.

ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ರಂಗಸಹಾಯಕ ಎಸ್. ಪ್ರದೀಪ್ , ಸಂಶೋಧನಾ ಸಹಾಯಕರಾದ ಡಾ.ಸಂದೀಪ್ , ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬು ಕುಂಬಾಪುರ ಮತ್ತಿತರರು ಉಪಸ್ಥಿತರಿದ್ದರು.

-------------------------------

16ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಹುಚ್ಚಮ್ಮ ಅವರನ್ನು ಗೌರವಿಸಲಾಯಿತು.

------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!