‘ಕನ್ನಡಪ್ರಭ’ದಿಂದ ಸಾಮಾಜಿಕ ಕಳಕಳಿ ಕಾರ್‍ಯಕ್ರಮ: ಶಾಸಕ ಬಿ.ಪಿ.ಹರೀಶ್‌

KannadaprabhaNewsNetwork |  
Published : Dec 29, 2025, 02:00 AM IST
28 ಎಚ್‌ಆರ್‌ಆರ್‌ 01ಹರಿಹರದ ಎಸ್‌ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಪ್ರಭ, ಸುವರ್ಣ ನ್ಯೂಸ್ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ“ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯ ಜೀವಿ” ಚಿತ್ರಕಲಾ ಸ್ಪರ್ಧೆಯ2025ರ ಕಾರ್ಯಕ್ರಮವನ್ನು ಶಾಸಕ ಬಿ.ಪಿ. ಹರೀಶ್‌ ಉದ್ಘಾಟಿಸಿದರು. ಬಾತಿತಪೋವನ ಮುಖ್ಯಸ್ಥ ಶಶಿಕುಮಾರ್‌ ಮೆಹರ್ವಾಡೆ, ಜಿಲ್ಲಾ ವರದಿಗಾರ ನಾಗರಾಜ್‌ ಬಡದಾಳ್‌ ಹಾಗೂ ಇತರರುಉಪಸ್ಥಿತರಿದ್ದರು.  ಹರಿಹರದ ಎಂಕೆಇಟಿ ಸಿಬಿಎಸ್‌ಇ ಶಾಲೆಯ ಖುಷಿ ಎಂ. ರಾಥೋಡ್ ಪ್ರಥಮ ಬಹುಮಾನ28 ಎಚ್‌ಆರ್‌ಆರ್‌ 01 ಎ ಖುಷಿ ಎಂ ರಾಥೋಡ್‌ಭಾನುವಳ್ಳಿ ಗ್ರಾಮದ ಕೆಪಿಎಸ್‌ ಶಾಲೆಯ ಸುಹಾನಾ ಭಾನು ದ್ವಿತೀಯ ಬಹುಮಾನ28 ಎಚ್‌ಆರ್‌ಆರ್‌ 01 ಬಿ ಸುಹಾನಾ ಭಾನು‌ಬೆಳ್ಳೂಡಿ ಗ್ರಾಮದ ಎಸ್‌ಪಿಜಿಎಚ್‌ಎಸ್‌ ಶಾಲೆಯ ಮಂಜುನಾಥ್‌ ಕೆ.ಎನ್.‌ತೃತೀಯ ಬಹುಮಾನ28 ಎಚ್‌ಆರ್‌ಆರ್‌ 01 ಸಿ ಮಂಜುನಾಥ ಕೆ.ಎನ್‌.ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿ ಬಿಂದುಹಾಗೂ ಎನ್‌. ಚಿನ್ಮಯ್‌ ಯಾದವ್‌ ಸಮಾಧಾನಕರ ಬಹುಮಾನ28 ಎಚ್‌ಆರ್‌ಆರ್‌ ಡಿ ಬಿಂದು  28 ಎಚ್‌ಆರ್‌ಆರ್‌ ಈ  ಚಿನ್ಮಯ್‌ | Kannada Prabha

ಸಾರಾಂಶ

ಕನ್ನಡಪ್ರಭ ದಿನ ಪತ್ರಿಕೆ ಸಾಮಾಜಿಕ ಕಳಕಳಿ, ನೇರ ಬರಹ, ಮುಂದಾಗುವ ಸುದ್ದಿ, ಆಡಳಿತ ವಿರೋಧಿ ದಿಟ್ಟ ನಿಲುವು ಜನಪರ ಕಾಳಜಿಯ ಜತೆ ಜತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಪಿ.ಹರೀಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಕನ್ನಡಪ್ರಭ ದಿನ ಪತ್ರಿಕೆ ಸಾಮಾಜಿಕ ಕಳಕಳಿ, ನೇರ ಬರಹ, ಮುಂದಾಗುವ ಸುದ್ದಿ, ಆಡಳಿತ ವಿರೋಧಿ ದಿಟ್ಟ ನಿಲುವು ಜನಪರ ಕಾಳಜಿಯ ಜತೆ ಜತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಪಿ.ಹರೀಶ್‌ ತಿಳಿಸಿದರು.

ನಗರದ ಎಸ್‌ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡಪ್ರಭ, ಸುವರ್ಣ ನ್ಯೂಸ್ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ‘ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ’ ಚಿತ್ರಕಲಾ ಸ್ಪರ್ಧೆ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ತಂದೆಯ ಕಾಲದಲ್ಲಿ ನಮ್ಮ ತಂದೆಯವರಾದ ಬಸವನಗೌಡ ಅವರು ಮೊದಲು ನೋಡುತ್ತಿದದ್ದೆ ಕನ್ನಡಪ್ರಭ ದಿನ ಪತ್ರಿಕೆಯನ್ನು, ಕಾರಣ ಸಮಾಜದ ರಾಜಕಾರಣಿಗಳ ಅಂಕುಡೊಂಕುಗಳನ್ನು ನಿರ್ಭೀತಿಯಿಂದ ಪ್ರಕಟಿಸುತ್ತಿದ್ದರು. ಈಗಲೂ ನನ್ನ ನೆಚ್ಚಿನ ಪತ್ರಿಕೆಯಾಗಲು ಕನ್ನಡಪ್ರಭದ ಸಾಮಾಜಿಕ ಕಾರ್ಯಗಳು. ಆ ಪರಂಪರೆಯನ್ನು ಪತ್ರಿಕೆಯ ಸಂಪಾದಕ ರವಿ ಹೆಗಡೆಯವರು ಮುಂದುವರಿಸಿಕೊಂಡು ಹೊರಟಿದ್ದಾರೆ ಎಂದರು.

ಬಾತಿ ತಪೋವನ ಮುಖ್ಯಸ್ಥ, ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ್‌ ಮೆಹರ್ವಾಡೆ ಮಾತನಾಡಿ, ನಶಿಸುತ್ತಿರುವ ವನ್ಯ ಪ್ರಾಣಿಗಳನ್ನು ಉಳಿಸಲು ಪರಿಸರ ಸಂರಕ್ಷಣೆ ಅಂಥಹ ಕಾರ್ಯ ಮಾಡಲು ಕನ್ನಡಪ್ರಭ ಸದಾ ಒಂದು ಹೆಜ್ಜೆ ಮುಂದಿದೆ. ಇಂಥಹ ಕಾರ್ಯಗಳಿಂದಾಗಿ ಕನ್ನಡಪ್ರಭ ಪತ್ರಿಕೆಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಸರ ಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಂಗಳಿಗೊಂದು ಅಥವಾ ವರ್ಷದಲ್ಲಿ ಒಂದೆರಡು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಣೆ ಮಾಡುವ ಕಾರ್ಯ ಮಾಡಿದಾಗ ದೇಶ ಸುಭಿಕ್ಷವಾಗಲು ಸಾಧ್ಯ ಎಂದರು.

ಕನ್ನಡಪ್ರಭದ ದಾವಣಗೆರೆ ಜಿಲ್ಲಾ ವರದಿಗಾರ ನಾಗರಾಜ್‌ ಬಡದಾಳ್‌ ಮಾತನಾಡಿ, ಪತ್ರಿಕೆಯ ಇಂಥಹ ಕಾರ್ಯಗಳಿಗೆ, ದಾನಿಗಳು, ಶಿಕ್ಷಣ ಸಂಸ್ಥೆಗಳು ಮುಂದೆ ಬಂದಾಗ ಸಾಮಾಜಿಕ ಕಳಕಳಿಯ ಕಾರ್ಯಗಳು ನಡೆಯಲು ಸಾಧ್ಯ. ಹುಬ್ಬಳ್ಳಿಯ ಗಾಜಿನಮನೆಯಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮವನ್ನು ರಾಜ್ಯಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಕನ್ನಡಪ್ರಭ ಸಂಪಾದಕರಾದ ರವಿ ಹೆಗಡೆಗೆ ಸಲ್ಲುತ್ತದೆ ಎಂದರು.

ಚಿತ್ರಕಲಾ ತೀರ್ಪುಗಾರರಾಗಿ ಎ. ರಿಯಾಜ್‌ ಅಹ್ಮದ್‌, ಪಿ. ನಾಗರಾಜ್‌ ಕಾರ್ಯ ನಿರ್ವಹಿಸಿದರು. ಹರಿಹರ ತಾಲೂಕು ಕನ್ನಡಪ್ರಭ ವರದಿಗಾರ ರವಿಶಂಕರ್‌ ಗದ್ಗಿಮಠ ಸ್ವಾಗತಿಸಿದರು.

ಕನ್ನಡಪ್ರಭ ಜಿಲ್ಲಾ ಜಾಹಿರಾತು ಮುಖ್ಯಸ್ಥ ಟಿ.ಆರ್. ಸುದೀಂದ್ರ, ಪತ್ರಿಕೆಯ ಜಿಲ್ಲಾ ಸರ್ಕೂಲೇಷನ್‌ ಮುಖ್ಯಸ್ಥ ಶಿವರಾಜ್‌, ತಾಲೂಕು ಅ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಿ.ನಾಗೇಂದ್ರಪ್ಪ, ಭಾನುವಳ್ಳಿ ಪತ್ರಿಕಾ ವಿತರಕ ಎಸ್‌. ಭೀಮಣ್ಣ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌: ಸಿದ್ದರಾಮಯ್ಯ
ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ