ಕನ್ನಡಪ್ರಭ ವಾರ್ತೆ ತಾಳಿಕೋಟೆ
ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಜಗದ್ಗುರುಗಳು ಕೈಗೊಳ್ಳು ಪ್ರತಿನಿರ್ಣಯಕ್ಕೂ ಪಂಚಮಸಾಲಿ ಸಮಾಜ ಬದ್ದವಾಗಿದೆ ಎಂದು ಸಮಾಜದ ಮುಖಂಡ ಕಾಶಿನಾಥ ಮುರಾಳ ಸ್ಪಷ್ಟಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪಂಚಮಸಾಲಿ ಸಮಾಜ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಮಾಜದ ಒಳಿತಿಗಾಗಿ ೨ಎ ಮೀಸಲಾತಿಗಾಗಿ ಸುಮಾರು ೧೫ ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದಾರೆ. ನಮ್ಮದೇ ಸಮಾಜದ ಶಾಸಕರು ಸಮಾಜದ ಋಣದ ಮೇಲೆ ಆಯ್ಕೆಯಾದ ಶಾಸಕ ವಿಜಯಾನಂದ ಕಾಶಪ್ಪನವರ ಜಗದ್ಗುರುಗಳ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಮತ್ತೊಂದು ಪೀಠ ಸ್ಥಾಪನೆ ಬಗ್ಗೆ ವಿಚಾರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಭೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಶಾಸಕನಿಗೆ ಅನ್ಯಾಯವಾದಾಗ ಜಗದ್ಗುರುಗಳ ಜೊತೆಯಾಗಿ ಸಮಾಜದ ಜನರು ಧ್ವನಿಗೂಡಿಸಿದ್ದಾರೆ. ಆದರೆ ಕಾಶಪ್ಪನವರ ಸಮಾಜ ಜಗದ್ಗುರುಗಳ ಬಗ್ಗೆ ಹಗುರುವಾಗಿ ಮಾತನಾಡಿ, ಮತ್ತೊಂದು ಪೀಠ ಸ್ಥಾಪನೆಯ ಅಪಸ್ವರ ಎತ್ತಿರುವುದು ಸಮಾಜ ಸಿಟ್ಟಿಗೇಳುವಂತೆ ಮಾಡಿದೆ. ಬಸವ ಜಯಮೃತ್ಯುಂಜಯ ಸ್ವಾಮಿಗಳು ಕೂಡಲ ಸಂಗಮದಲ್ಲಿ ಏ.೨೦ರಂದು ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ ಕರೆದಿದ್ದು, ತಾಲೂಕಿನಿಂದ ಪಂಚಮಸಾಲಿ ಸಮಾಜದ ಸಹಸ್ರಾರು ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸುವುದಾಗಿ ತಿಳಿಸಿದರು.ಯುವ ಮುಖಂಡ ವೀರೇಶಗೌಡ ಬಾಗೇವಾಡಿ ಮಾತನಾಡಿ, ಪಂಚಮಸಾಲಿ ಸಮಾಜದ ಜನರು ಸದ್ಯದ ಪರಸ್ಥಿತಿಯಲ್ಲಿ ಸೂಜಿಯಾಗಿ ಕೆಲಸ ಮಾಡಬೇಕಿದ್ದು, ಕತ್ತರಿಯಾಗಿ ಕೆಲಸ ಮಾಡುವುದು ಬೇಡ. ರಾಜಕೀಯ ಕ್ಷೇತ್ರದಲ್ಲಿ ಮುರಗೇಶ ನಿರಾಣಿ, ಬಸನಗೌಡ ಪಾಟೀಲ(ಯತ್ನಾಳ), ವಿಜಯಾನಂದ ಕಾಶಪ್ಪನವರ ಒಳಗೊಂಡು ಅನೇಕ ಶಾಸಕರಿದ್ದಾರೆ. ಎಲ್ಲರನ್ನು ಒಂದೇ ವೇದಿಕೆಯಡಿ ಕಾಣುವ ಕಾರ್ಯ ನಾವು ಮಾಡಬೇಕಿದೆ. ಪಂಚಮಸಾಲಿ ಸಮಾಜದ ಪೂರ್ವಭಾವಿಗೆ 10 ಸಾವಿರ ಜನ ಭಾಗವಹಿಸುವುದಾಗಿ ಹೇಳಿದರು.ಸಮಾಜದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ ಮಾತನಾಡಿ, ಸಮಾಜದಲ್ಲಿ ಹುಟ್ಟಿ ರಾಜಕೀಯ ಸ್ವಹಿತಾಶಕ್ತಿಗಾಗಿ ಜಗದ್ಗುರುಗಳ ವಿರುದ್ದ ಅವಹೇಳನಕಾರಿ ಮಾತನಾಡಿದ್ದು ಸರಿಯಲ್ಲ. ಪಂಚಮಸಾಲಿ ಸಮಾಜಕ್ಕೆ ಒಂದೇ ಪೀಠ, ಅದು ಕೂಡಲಸಂಗಮ ಪೀಠ. ಜಗದ್ಗುರುಗಳು ಯಾವ ನಿರ್ಣಯ ತೆಗದುಕೊಳ್ಳುತ್ತಾರೋ ಅದಕ್ಕೆ ಸಮಾಜ ಬದ್ದವಿರುವುದಾಗಿ ಹೇಳಿದರು.ಈ ವೇಳೆ ದ್ಯಾಮನಗೌಡ ಪಾಟೀಲ, ಕುಮಾರಗೌಡ ಪಾಟೀಲ, ರಾಮನಗೌಡ ಬಾಗೇವಾಡಿ, ಡಿ.ವ್ಹಿ.ಪಾಟೀಲ, ಅಶೋಕಗೌಡ ಪಾಟೀಲ, ಪ್ರಭು ಬಿಳೇಭಾವಿ, ನಾಗಪ್ಪ ಚಿನಗುಡಿ, ಗುರಸಂಗ ಕಶೆಟ್ಟಿ, ಬಸನಗೌಡ ಪಾಟೀಲ, ಮುತ್ತು ಕಶೆಟ್ಟಿ, ಪ್ರಕಾಶ ಸಾಸಾಬಾಳ, ಮುರುಗೇಶ ಕೋರಿ, ಭೀಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಕಾಶಿನಾಥ ಅರಳಿಚಂಡಿ, ಶಿವರಾಜ ಪಾಟೀಲ, ನಿಂಗು ಕುಂಟೋಜಿ, ಅಶೋಕ ಚಿನಗುಡಿ, ಸಿದ್ದನಗೌಡ ಪಾಟೀಲ, ಜಗದೀಶ ಬಿಳೇಭಾವಿ, ನಾಗಪ್ಪ ಗೊಟಗುಣಕಿ, ಕಲ್ಲಪ್ಪಗೌಡ ಪಾಟೀಲ, ಭೀಮು ಸೂಳಿಭಾವಿ, ಜಗದೀಶ ಬಿಳೇಭಾವಿ, ಪ್ರಕಾಶ ಪಾಟೀಲ, ಪ್ರಭು ಕಲ್ಲೂರ, ಸುರೇಶ ಗುಂಡಣ್ಣವರ, ಕುಮಾರ ಭಾವಿ, ಸಂಗಮೇಶ ಹಾರಿವಾಳ, ಬಸವರಾಜ ಕಶೆಟ್ಟಿ, ಸಿದ್ದು ಬೋಳಶೆಟ್ಟಿ, ಈರಣ್ಣ ಮೈಲೇಶ್ವರ, ದೇಗಿನಾಳ, ಮೊದಲಾದವರು ಉಪಸ್ಥಿತರಿದ್ದರು.