ದಾಬಸ್ಪೇಟೆ: ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿದ ಪರಿಣಾಮ ಈ ಭಾಗದ ಜನತೆಗೆ ಕೊಟ್ಟ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಸೋಲೂರು ಹೋಬಳಿಗೆ ಕಾವೇರಿ ಹಾಗೂ ಎತ್ತಿನಹೊಳೆ ಜಲಮೂಲಗಳಿಂದ ನೀರು ಬರಲಿದೆ. 3.5ಎಂಎಲ್ ಡಿ ಕಾವೇರಿ ನೀರು ಬರಲಿದೆ. ಎತ್ತಿನಹೊಳೆ ನೀರು 2027ರ ಡಿಸೆಂಬರ್ ವೇಳೆಗೆ ನಮ್ಮ ಜಿಲ್ಲೆಗೆ ಬರಲಿದೆ. ಇನ್ನೂ ಹೆಚ್ಚಿನ ನೀರು ಹರಿಸುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ್ದೇನೆ ಎಂದರು.
ನೆಲಮಂಗಲ ತಾಲೂಕಿಗೆ ಸೋಲೂರು ಸೇರ್ಪಡೆ ಬೆನ್ನಲ್ಲೆ ಸೋಲೂರು ಜನರು ಕಾವೇರಿ ನೀರು ಕುಡಿಯುವ ಅದೃಷ್ಟ ಲಭಿಸಿದೆ. ಕಾವೇರಿ ನೀರು ರಾಮನಗರದ ಮೂಲಕ ಮಾಗಡಿಯ ಮಂಚಿನಬೆಲೆ ಜಲಾಶಯಕ್ಕೆ ಬರಲಿದೆ. ಆನಂತರ ಮಾಗಡಿ ಮೂಲಕ ಸೋಲೂರು ಗ್ರಾಮಗಳಿಗೆ ತಲುಪಲಿದೆ. ಇನ್ನೊಂದು ವರ್ಷದೊಳಗೆ ಕಾಮಗಾರಿ ಮುಗಿದು ಸೋಲೂರು ಹೋಬಳಿಯ ಜನತೆ ಕಾವೇರಿ ನೀರು ಕುಡಿಯಲಿದ್ದಾರೆ ಎಂದರು.ಸೋಲೂರು ಜನರಿಗೆ ಬಹಳಷ್ಟು ಅನುಕೂಲ : ಸೋಲೂರು ಹೋಬಳಿಗೆ ಯಾವುದೇ ಶಾಶ್ವತ ನೀರಿನ ವ್ಯವಸ್ಥೆಗಳಿಲ್ಲ. ಅಭಿವೃದ್ಧಿಯೇ ಕಾಣದ ಜನರರು, ಶಾಶ್ವತ ನೀರಿನ ಬೇಡಿಕೆಯ ಕನಸನ್ನು ಮರೆತು ಹೋಗಿದ್ದರು. ಈಗ ಗ್ರಾಮ ಗ್ರಾಮಕ್ಕೆ ಕಾವೇರಿ ಕುಡಿಯುವ ಸೋಲೂರಿನ 178 ಜನವಸತಿಗಳಿಗೆ ರಾಮನಗರದ ಮೂಲಕ ಮಾಗಡಿಯ ಮಂಚಿನಬೆಲೆ ಡ್ಯಾಮ್ ನಿಂದ ಕಾವೇರಿ ನೀರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬರಲಿದ್ದು, ಸೋಲೂರು ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಈ ಹಿಂದೆ 2-3 ಸ್ಥಳಗಳನ್ನು ಗುರುತಿಸಲಾಗಿತ್ತು ಆ ಸ್ಥಳಗಳು ತಾಂತ್ರಿಕವಾಗಿ ತೊಂದರೆಯಾಯಿತು. ಈ ಹಿಂದೆ ನೋಡಿದ ಜಾಗಕ್ಕೆ ಎಸ್ಟಿಮೇಟ್ ಆಗಿತ್ತು. ಇವಾಗ ಬೇರೆ ಎಸ್ಟಿಮೇಟ್ ನಡೆಯುತ್ತಿದ್ದು, ಜಾಗವನ್ನು ಶೀಘ್ರದಲ್ಲಿ ಅಂತಿಮಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಪೋಟೋ 1 :