ಭಾರತೀಯ ಧರ್ಮದರ್ಶನದಿಂದ ಜಗತ್ತಿನ ಸಮಸ್ಯೆಗೆ ಪರಿಹಾರ: ಭಟ್ಟಾರಕ ಶ್ರೀ

KannadaprabhaNewsNetwork |  
Published : Feb 02, 2025, 11:46 PM IST
ವಾರಣಾಸಿ ನಮೋ ಘಾಟ್‌ನಲ್ಲಿ ಭಾರತೀಯ ಧರ್ಮ ದರ್ಶನಗಳ ಎರಡು ದಿನಗಳ ಸಮ್ಮೇಳನವನ್ನು ಮೂಡುಬಿದಿರೆ ಶ್ರೀ ಉದ್ಘಾಟಿಸಿದರು. | Kannada Prabha

ಸಾರಾಂಶ

ವಾರಣಾಸಿ ನಮೋ ಘಾಟ್‌ನಲ್ಲಿ ಭಾರತೀಯ ಧರ್ಮ ದರ್ಶನಗಳ ಎರಡು ದಿನಗಳ ಸಮ್ಮೇಳನವನ್ನು ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ವಾರಣಾಸಿ ನಮೋ ಘಾಟ್‌ನಲ್ಲಿ ಭಾರತೀಯ ಧರ್ಮ ದರ್ಶನಗಳ ಎರಡು ದಿನಗಳ ಸಮ್ಮೇಳನವನ್ನು ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಾರತೀಯ ಧರ್ಮ ದರ್ಶನ ಜಗತ್ತಿನ ಸಮಸ್ಯೆಗೆ ಪರಿಹಾರ ನೀಡುವುದರೊಂದಿಗೆ ಪರಿಸರ, ಜೀವ, ಆಜೀವ ಜಗತ್ತಿನಲ್ಲಿ ಮಾನವ ಜೀವನದ ಕಲ್ಯಾಣ ಹೇಗೆ ಸಾಧ್ಯ ಎಂದು ನಿರೂಪಿಸಿ, ಆಧ್ಯಾತ್ಮಿಕತೆ ಅಳವಡಿಸಿ ನೆಮ್ಮದಿಯ ಜೀವನ, ಸುಖ, ಶಾಂತಿಯ ಉಪಾಯ ತಿಳಿಸಿದೆ ಎಂದರು.ಆತ್ಮನ್ ಸಂಘಟನೆ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಅಂತಾರಾಷ್ಟ್ರೀಯ ಆಧ್ಯಾತ್ಮ ಸಮ್ಮೇಳನ ಆಯೋಜಿಸಿದ್ದು, ಇದರಲ್ಲಿ ಸ್ವಾಮಿ ಚಿನ್ಮಯ ಮಿಷನ್‌ನ ಅವ್ಯಾನಂದ, ಹುಸೇನ್ ದೀದಿ, ಡಾ.ಆದಿತ್ಯ, ಬುದ್ಧ ಧರ್ಮದ ಯೋಗಿ ಮಿಂಗ್ಯೂರ್ ರಿನ್ ಪೂಚೆ, ಇಸ್ಕಾನ್ ರಿಷಿ ಕುಮಾರ್ ಪ್ರಭು, ಎಂ.ಗುರು, ರಬ್ಬೀ ಎಜೆ ಕುಲೆ, ಗೀತಾ ಚಂದ್ರನ್ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!