ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಬಳಿಕ ಮಾತನಾಡಿದ ಅವರು, ಭಾರತೀಯ ಧರ್ಮ ದರ್ಶನ ಜಗತ್ತಿನ ಸಮಸ್ಯೆಗೆ ಪರಿಹಾರ ನೀಡುವುದರೊಂದಿಗೆ ಪರಿಸರ, ಜೀವ, ಆಜೀವ ಜಗತ್ತಿನಲ್ಲಿ ಮಾನವ ಜೀವನದ ಕಲ್ಯಾಣ ಹೇಗೆ ಸಾಧ್ಯ ಎಂದು ನಿರೂಪಿಸಿ, ಆಧ್ಯಾತ್ಮಿಕತೆ ಅಳವಡಿಸಿ ನೆಮ್ಮದಿಯ ಜೀವನ, ಸುಖ, ಶಾಂತಿಯ ಉಪಾಯ ತಿಳಿಸಿದೆ ಎಂದರು.ಆತ್ಮನ್ ಸಂಘಟನೆ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಅಂತಾರಾಷ್ಟ್ರೀಯ ಆಧ್ಯಾತ್ಮ ಸಮ್ಮೇಳನ ಆಯೋಜಿಸಿದ್ದು, ಇದರಲ್ಲಿ ಸ್ವಾಮಿ ಚಿನ್ಮಯ ಮಿಷನ್ನ ಅವ್ಯಾನಂದ, ಹುಸೇನ್ ದೀದಿ, ಡಾ.ಆದಿತ್ಯ, ಬುದ್ಧ ಧರ್ಮದ ಯೋಗಿ ಮಿಂಗ್ಯೂರ್ ರಿನ್ ಪೂಚೆ, ಇಸ್ಕಾನ್ ರಿಷಿ ಕುಮಾರ್ ಪ್ರಭು, ಎಂ.ಗುರು, ರಬ್ಬೀ ಎಜೆ ಕುಲೆ, ಗೀತಾ ಚಂದ್ರನ್ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.