ರಾಮನಗರ: ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯ ಚೇತರಿಕೆಯಾಗಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಕಾಂಗ್ರೆಸ್ ಮುಖಂಡರು ನಗರದ ಪೀರನ್ ಶಾ ವಲಿ ದರ್ಗಾ ಹಾಗೂ ವಿವಿಧ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಬ್ರೇಜ್ ಖಾನ್, ಶಾಸಕ ಇಕ್ಬಾಲ್ ಹುಸೇನರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದ್ದು, ಅವರ ಬೇಗ ಚೇತರಿಸಿಕೊಂಡು ಜನಸೇವೆಗೆ ಮರಳುವಂತಾಗಲಿ ಎಂದು ಪ್ರಾರ್ಥಿಸಿದ್ದೇವೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಇಕ್ಬಾಲ್ ಹುಸೇನ್ ಜನಪ್ರಿಯ ಶಾಸಕ ಎನಿಸಿಕೊಂಡಿದ್ದಾರೆ. ಇನ್ನೂ ಬೇಕಾದಷ್ಟು ಕೆಲಸಗಳು ಬಾಕಿ ಉಳಿದಿದ್ದು, ಜನಸೇವೆಗೆ ಅವರ ಅಗತ್ಯವಿದೆ ಎಂದರು.
ನಗರಸಭೆ ಸದಸ್ಯರಾದ ನಿಜಾಮುದ್ದೀನ್ ಷರೀಫ್, ಅಬ್ದುಲ್ ಸಮದ್, ಅಣ್ಣು, ನಾಗಮ್ಮ, ಮಾಜಿ ಸದಸ್ಯರಾದ ಬಾಸಿದ್, ದರ್ಗಾ ಹಜರತ್ ಪೀರನ್ ಷಾ ವಲಿ ಕಮಿಟಿ ಅಧ್ಯಕ್ಷ ಅಜ್ಮತುಲ್ಲಾ ಖಾನ್, ಕಾರ್ಯದರ್ಶಿ ಸೖಯದ್ ಲಿಯಾಕತ್, ಮುಖಂಡರಾದ ಕಾಶೀಫ್, ಶಫಿ, ಅಫು, ಆರೀಫ್ , ಅಮೀರ್ ಜಾನ್ , ಮೋಸಿನ್ , ನದೀಮ್, ರಶೀದ್ , ಎಕ್ಬಾಲ್, ವಾಹಿದ್ ಮತ್ತಿತರರು ಹಾಜರಿದ್ದರು.ಮೃತ್ಯುಂಜಯ ಹೋಮ :
ಸಂಜೀವಿನಿ ಮೃತ್ಯುಂಜಯ ಹೋಮ:
ಕಾಂಗ್ರೆಸ್ ಮುಖಂಡರಾದ ಕೆ.ರಮೇಶ್, ಜಗದೀಶ್ , ರೈಡ್ ನಾಗರಾಜ್ , ಲೋಹಿತ್ ಬಾಬು, ಗಿರೀಶ್ ಮತ್ತಿತರರು ಭಾಗವಹಿಸಿದ್ದರು.
4.ರಾಮನಗರದ ಪೀರನ್ ಷಾ ವಲಿ ದರ್ಗಾದಲ್ಲಿ ಮುಸ್ಲಿ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
6.ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಸಂಜೀವಿನಿ ಮೃತ್ಯುಂಜಯ ಮತ್ತು ಚಂಡಿಕಾ ಹೋಮ ನೆರವೇರಿಸಲಾಯಿತು.