ಕ್ರೀಡಾ ಕ್ಷೇತ್ರಗಳಲ್ಲಿ ಸಾಧನಗೈದ ರಾಷ್ಟ್ರೀಯ ಕ್ರೀಡಾಪಟುಗಳಾದ ಕೇರಂಪಟು ಕೆ.ಎಸ್. ವಿಜಯಕುಮಾರ್, ಪವರ್ಲಿಫ್ಟಿಂಗ್ ರಾಷ್ಟ್ರೀಯ ತೀರ್ಪುಗಾರರಾದ ಲಕ್ಷ್ಮಿ ದೇವಿ, ರಾಜ್ಯಮಟ್ಟದ ಕೇರಂ ಚಾಂಪಿಯನ್ ಶಿವಕುಮಾರ್, ಪವರ್ ಲಿಫ್ಟರ್ ಜಿ.ಗೋಪಾಲ್ , ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ ಎ. ಚಂದ್ರಪ್ಪರನ್ನು ಎಸ್.ಎಸ್.ಕೇರ್ ಟ್ರಸ್ಟ್ನ ಟ್ರಸ್ಟೀ ಡಾ.ಪ್ರಭಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.
ದಾವಣಗೆರೆ: ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಕ್ರೀಡೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಖೇಲೋ ಇಂಡಿಯಾ ಅಡಿಯಲ್ಲಿ ನಗರದ ಲೂಡ್ಸ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ಜರುಗಿದ ಪ್ರಪ್ರಥಮ ರಾಜ್ಯಮಟ್ಟದ ಮಹಿಳಾ ಪುಟ್ಬಾಲ್ ಪಂದ್ಯಾವಳಿಗಳ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನಗೈದ ರಾಷ್ಟ್ರೀಯ ಕ್ರೀಡಾಪಟುಗಳಾದ ಕೇರಂಪಟು ಕೆ.ಎಸ್. ವಿಜಯಕುಮಾರ್, ಪವರ್ಲಿಫ್ಟಿಂಗ್ ರಾಷ್ಟ್ರೀಯ ತೀರ್ಪುಗಾರರಾದ ಲಕ್ಷ್ಮಿ ದೇವಿ, ರಾಜ್ಯಮಟ್ಟದ ಕೇರಂ ಚಾಂಪಿಯನ್ ಶಿವಕುಮಾರ್, ಪವರ್ ಲಿಫ್ಟರ್ ಜಿ.ಗೋಪಾಲ್ , ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ ಎ. ಚಂದ್ರಪ್ಪರನ್ನು ಎಸ್.ಎಸ್.ಕೇರ್ ಟ್ರಸ್ಟ್ನ ಟ್ರಸ್ಟೀ ಡಾ.ಪ್ರಭಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಲತಿಕಾ ದಿನೇಶ್ ಶೆಟ್ಟಿ, ಕೇರಂ ಗಣೇಶ್, ಪುಟ್ಭಾಲ್ ಸಂಸ್ಥೆಯ ಅಶೋಕ್, ಸೈಯದ್, ನವಜಿತ್ ಬಳೆಗಾರ, ಮೊಹಮ್ಮದ್, ಯುವರಾಜ್, ಸಾಧಿಕ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.