ಕನ್ನಡಪ್ರಭ ವಾರ್ತೆ ಮಡಿಕೇರಿ
ಮೂರನೇ ಹಾಗೂ ನಾಲ್ಕನೇ ಸ್ಥಾನವನ್ನು ಫಿನಿಕ್ಸ್ ಎಫ್ ಸಿ ಮತ್ತು ಆರ್ಆರ್ಎಫ್ಸಿ ತಂಡ ಪಡೆದುಕೊಂಡಿತು.
ನಗರದ ಗಾಂಧಿ ಮೈದಾನದಲ್ಲಿ ನಡೆದ ಎಸ್ ಆರ್ ವಿ ಚಾಂಪಿಯನ್ ಲೀಗ್, ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಕೂರ್ಗ್ ಚಾರ್ಮಾರ್ಸ್ ತಂಡವು ಟೀಂ ಭಗವತಿ ವಿರುದ್ಧ ಪೆನಾಲ್ಟಿಯಲ್ಲಿ 3-1 ರ ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.
ದ್ವಿತೀಯ ಕ್ವಾಲಿಫಯರ್ ಪಂದ್ಯವು ಫಿನಿಕ್ಸ್ ಎಫ್ ಸಿ ಹಾಗೂ ಟೀಮ್ ಭಗವತಿ ತಂಡದ ನಡುವೆ ನಡೆದ ರೋಚಕ ಹಣಹಣಿಯಲ್ಲಿ ಟೀಮ್ ಭಗವತಿ ತಂಡವು 1-0 ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.
ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಟೀಮ್ ಭಗವತಿ ತಂಡದ ಲೋಹಿತ್ ಪಿಕ ಪಡೆದು ಕೊಂಡರೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಟೀಮ್ ಭಗವತಿ ತಂಡದ ವಿನೋದ್ ಪಡೆದು ಕೊಂಡರು.ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಯನ್ನು ಫಿನಿಕ್ಸ್ ಎಫ್ ಸಿ ತಂಡದ ಶಾಹಿದ್ ಪಡೆದು ಕೊಂಡರೆ, ಉದಯೋನ್ಮೋಖ ಆಟಗಾರ ಪ್ರಶಸ್ತಿಯನ್ನು ಕೂರ್ಗ್ ಚಾರ್ಮಾರ್ಸ್ ತಂಡದ ಪೊಣ್ಣನ್ನ ಪಡೆದರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೂರ್ಗ್ ಚಾರ್ಮಾರ್ಸ್ ತಂಡದ ಮಹೇಶ್ ಪಡೆದು ಕೊಂಡರು.
ಸಮಾರಂಭದಲ್ಲಿ ಪಾಲ್ಗೊಂಡ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವ ಬರುತ್ತದೆ ಎಂದರು.
ಶ್ರೀ ರಾಜೇಶ್ವರಿ ವಿದ್ಯಾಲಯದ ಅಧ್ಯಕ್ಷ ಗೋವಿಂದ ರಾಜು ಮಾತನಾಡಿದರು.
ಎಸ್ಆರ್ಪಿ ಫುಟ್ಬಾಲ್ ಪಂದ್ಯಕ್ಕೆ ಟೈಟಲ್ ಸ್ಪೋನ್ಸರ್ ಮಾಡಿದ ಸೋನಾ ಟಿ ವಿ ಎಸ್ ನ ದೀಪ, ಲಕ್ಷ್ಮಿ ಸಚಿನ್ ಪ್ರಾಂಶುಪಾಲರು ಶ್ರೀ ರಾಜೇಶ್ವರಿ ವಿದ್ಯಾಲಯ, ಮಂದಣ್ಣ ಉಪಪ್ರಾಂಶುಪಾಲರು ಶ್ರೀ ರಾಜೇಶ್ವರಿ ವಿದ್ಯಾಲಯ, ಕ್ರಿಸ್ಟೋಫರ್ ಅಧ್ಯಕ್ಷರು ಎಂಸಿಸಿ, ಹಾಗೂ ಶ್ರೀ ರಾಜೇಶ್ವರಿ ವಿದ್ಯಾಲಯದ ಸದಸ್ಯರಾಗಿರುವ ಕಿರಣ್ ಕುಮಾರ್, ಪ್ರಶಾಂತ್ ಮತ್ತಿತರರು ಹಾಜರಿದ್ದರು.
ಪಂದ್ಯದಲ್ಲಿ ಹೈ ಸ್ಕೋರರ್ ಆಗಿ ಮಡಿಕೇರಿ ಪ್ರೌಢಶಾಲೆಯ ವಿಶ್ವಾಸ್ ಸಿಂಗ್, ಉತ್ತಮ ಗೋಲ್ ಕೀಪರ್ ಆಗಿ ರಾಜೇಶ್ವರಿ ವಿದ್ಯಾಲಯದ ಮಹಸ್ವಿನ್ ಸ್ವಾಮಿ, ಉತ್ತಮ ಆಟಗಾರನಾಗಿ ಜನರಲ್ ತಿಮ್ಮಯ್ಯ ಶಾಲೆಯ ತರುಣ್ ಆಯ್ಕೆಯಾದರು.
ದೈಹಿಕ ಶಿಕ್ಷಣ ಶಿಕ್ಷಕ ಉನ್ನೈಸ್ ಎಂಎಂ, ಇಕ್ರಾ ಪಬ್ಲಿಕ್ ಸ್ಕೂಲ್ ಸಿದ್ದಾಪುರ, ಚೆಟ್ಟಳ್ಳಿಯ ಅಜಿತ್ ಹಾಗೂ ಬೆಂಗಳೂರಿನ ನರಸಿಂಹ (ನಾಣಿ ) ತೀರ್ಪುಗಾರರಾಗಿದ್ದರು.ವೀಕ್ಷಕ ವಿವರಣೆಯನ್ನು ಚಿಕ್ಕಮಗಳೂರಿನ ವೀಕ್ಷಕ ವಿವರಣೆಗಾರ ದಿನೇಶ್ ಹಾಗೂ ಹೆಬ್ಬಟ್ಟಗೇರಿಯ ರಮೇಶ್ ನಡೆಸಿಕೊಟ್ಟರು.
ಅಶೋಕ್ ಮಡಿಕೇರಿ ಹಾಗೂ ಅಜಿತ್ ಲೈವ್ ಸ್ಕೋರರ್ಗಳಾಗಿದ್ದರು.