ಧಾರವಾಡ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಹಂತ ಪ್ರಮುಖ ಘಟ್ಟ. ಕಲಿಕಾ ಗುಣಮಟ್ಟ ಹಾಗೂ ಉತ್ತೀರ್ಣತೆ ಅವರ ಭವಿಷ್ಯದ ದಿಕ್ಸೂಚಿ ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ವಾರ್ಷಿಕ ಪರೀಕ್ಷೆಗೆ ಡಿಎಸ್ಆರ್ಇಟಿ ಪಾಠ ಆಧಾರಿತ ಮೌಲ್ಯಾಂಕನ ಕೈಪಿಡಿ, ಕೆಎಸ್ಇಎಬಿ ಮಾದರಿ ಪ್ರಶ್ನೆ ಪತ್ರಿಕೆಗಳು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ದಿಕ್ಸೂಚಿಯಾಗಿವೆ. ಇದನ್ನು ಅಧ್ಯಯನ ಮಾಡಿ ಮಕ್ಕಳಿಗೆ ಸರಳವಾಗಿ ತಿಳಿಯುವಂತೆ ಕಿರು ಹೊತ್ತಿಗೆ ರಚಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ ತಿಳಿಸಿದರು.
ಮಕ್ಕಳಿಗೆ ಇದು ಉಪಯುಕ್ತ ಕೈಪಿಡಿ ಆಗಿದೆ ಎಂದು ಸಂಪನ್ಮೂಲ ವ್ಯಕ್ತಿ ಡಾ, ಶಿವಾನಂದ ಕವಟಕೊಪ್ಪ ಹೇಳಿದರು. ಕಾರ್ಯದರ್ಶಿ ಬಿ.ಜಿ. ಬಶೆಟ್ಟಿ, ಗುರು ತಿಗಡಿ, ಹಂಗರಕಿ ಗ್ರಾಪಂ ಉಪಾಧ್ಯಕ್ಷ ಚನ್ನಬಸು ಚಿತ್ತೂರು, ಶಂಕರ ಗಟ್ಟಿ, ಡಾ, ಶಿವಾನಂದ ಕವಟಕೊಪ್ಪ, ಕಾಶಪ್ಪ ದೊಡವಾಡ, ರಮೇಶ ತಳವಾರ, ಸಿದ್ಧಲಿಂಗ ಶಿವಶಿಂಪಿ, ಚಂದ್ರು ತಿಗಡಿ, ರಾಜು ಮಾಳವಾಡ, ನಾಗರಾಜ ತಳವಾರ ಇದ್ದರು.