ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ಮಿಲನ

KannadaprabhaNewsNetwork |  
Published : Jan 19, 2026, 12:45 AM IST
ಸಂಡೂರಿನ ಶ್ರೀಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟದಲ್ಲಿ ಭಾನುವಾರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀಛತ್ರಪತಿ ಶಿವಾಜಿ ವಿದ್ಯಾಮಂದಿರದ ೧೯೭೫-೭೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸನ್ಮಾನಿಸಿ, ಗೌರವಿಸಿದ ಕ್ಷಣ. | Kannada Prabha

ಸಾರಾಂಶ

೧೯೭೫-೭೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳಿಂದ ಆಯೋಜನೆಗೊಂಡಿದ್ದ ಪುನರ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ವಿಶೇಷವಾಗಿತ್ತು.

ಸಂಡೂರು: ಪಟ್ಟಣದ ಶ್ರೀಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸ್ಥಳೀಯ ಛತ್ರಪತಿ ಶಿವಾಜಿ ವಿದ್ಯಾಮಂದಿರದ ೧೯೭೫-೭೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳಿಂದ ಆಯೋಜನೆಗೊಂಡಿದ್ದ ಪುನರ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ವಿಶೇಷವಾಗಿತ್ತು. ಇಲ್ಲಿ ಗುರುವಂದನೆ ಸ್ವೀಕರಿಸಿದ ಗುರುಗಳು ಹಾಗೂ ಗುರುವಂದನೆ ಸಲ್ಲಿಸಿದ ಶಿಷ್ಯರು ಹಿರಿಯ ನಾಗರಿಕರಾಗಿದ್ದು ಗಮನಾರ್ಹವಾಗಿತ್ತು.

ಕಾರ್ಯಕ್ರಮವನ್ನು ಆಯೋಜಿಸಿದ್ದ ವಿದ್ಯಾರ್ಥಿಗಳು ೫೦ ವರ್ಷಗಳ ನಂತರ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿರುವ ತಮ್ಮ ಗುರುಗಳನ್ನು ಕಂಡು, ಅವರಿಂದ ಆಶೀರ್ವಾದ ಪಡೆದರು. ತಮ್ಮ ಬ್ಯಾಚಿನ ಸ್ನೇಹಿತರನ್ನು ಭೇಟಿಯಾಗಿದ್ದು, ಅವರಲ್ಲಿ ಸಂತಸವನ್ನುಂಟು ಮಾಡಿದ್ದಲ್ಲದೆ, ಅವರಲ್ಲಿ ಸಾರ್ಥಕತೆಯ ಭಾವವನ್ನುಂಟು ಮಾಡಿತು.ಛತ್ರಪತಿ ಶಿವಾಜಿ ವಿದ್ಯಾಮಂದಿರದ ನಿವೃತ್ತ ಪ್ರಾಚಾರ್ಯರು, ಶಿಕ್ಷಕರು ಆದ ದಿವಾಕರ ಆಚಾರ್, ಎಸ್.ಆರ್. ಬಡಿಗೇರ್, ಪಾಂಡುರಂಗಾಚಾರ್ ಗಲಗಲಿ, ಬಸವರಾಜ ಮಸೂತಿ, ತಿಪ್ಪಯ್ಯ, ಶಂಭುಲಿಂಗಪ್ಪ ಹಗರಿ, ಎ.ವೃಷಭೇಂದ್ರಾಚಾರ್ ಹಾಗೂ ಜಗನ್ನಾಥ ಹೊರಪೇಟೆ ತಮ್ಮ ಮಾತುಗಳಲ್ಲಿ ಶ್ರೀಛತ್ರಪತಿ ಶಿವಾಜಿ ವಿದ್ಯಾಮಂದಿರದ ಇತಿಹಾಸ, ವಿದ್ಯಾಮಂದಿರಕ್ಕೆ ದಿವಂಗತ ಎಂ.ವೈ. ಘೋರ್ಪಡೆ, ಗುರುನಾಥರಾವ್, ಮುದ್ದುಕೃಷ್ಣ ಮುಂತಾದವರು ನೀಡಿದ ಕೊಡುಗೆ, ಸಂಡೂರಿನ ನೆಲದ ಹಿರಿಮೆಯನ್ನು ಸ್ಮರಿಸಿದರು.

ಶಂಭುಲಿಂಗಪ್ಪ ಹಗರಿಯವರು ತಮ್ಮ ಹಿತವಚನದೊಂದಿಗೆ ಜಿ.ಪಿ. ರಾಜರತ್ನಂ ಅವರ ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನಾ ಎಂಬ ಹಾಡನ್ನು ಹಾಡಿ, ವಿದ್ಯಾರ್ಥಿಗಳನ್ನು ಖುಷಿಪಡಿಸಿದರು.

ಹಳೆಯ ವಿದ್ಯಾರ್ಥಿ ಎಂ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಗಳು ವಿದ್ಯೆ, ಜ್ಞಾನ ಹಾಗೂ ಬುದ್ಧಿಯನ್ನು ಧಾರೆ ಎರೆದು ನಮಗೆ ಬದುಕನ್ನು ಕಟ್ಟಿಕೊಟ್ಟರು. ನಾವು ಏನೇ ಸಾಧನೆ ಮಾಡಿದ್ದರೆ, ಅದಕ್ಕೆ ಪಾಲಕರು ಹಾಗೂ ಗುರುಗಳು ನೀಡಿದ ಶಿಕ್ಷಣ ಹಾಗೂ ಸಂಸ್ಕಾರ ಕಾರಣವಾಗಿದೆ ಎಂದು ಸ್ಮರಿಸಿದರು.

ಮಯೂರ್‌ನಾಥ್ ಘಂಟಿ, ಸ್ಟೀಫನ್ ಸಿಂಥಿಯಾ ಅವರು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದ ಆರಂಭದಲ್ಲಿ ಈ ಹಿಂದೆ ತಮ್ಮ ಶಾಲೆಯಲ್ಲಿ ತಾವುಗಳು ಹಾಡುತ್ತಿದ್ದ ಪ್ರಾರ್ಥನಾ ಗೀತೆಯನ್ನು ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಾಡಿದರು. ನರಿ ಬಸವರಾಜ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಹಾಡುಗಳಿಗೆ ಹರ‍್ಮೋನಿಯಂ ಸಾಥ್ ನೀಡಿದರು. ಹೆಚ್. ಕುಮಾರಸ್ವಾಮಿ ತಬಲಾ ಸಾಥ್ ನೀಡಿದರು. ಪುಷ್ಪಾ ಜೋಷಿಯವರು ವಂದಿಸಿದರು.

ಹಳೆಯ ವಿದ್ಯಾರ್ಥಿಗಳಾದ ಮಹಾಬಲೇಶ್ವರ್ ಜ್ಯೊತಿ, ವಿ.ಎಂ. ಶರಣಯ್ಯ, ನಾರಾಯಣಾಚಾರ್, ದೇವೇಂದ್ರಪ್ಪ, ಮಹಾರುದ್ರಗೌಡ, ಬಸವರಾಜ್ ಬಂಡ್ರಿ, ನಬಿಸಾಬ್, ಶ್ರೀನಿವಾಸ್, ಮಂಜುನಾಥ್, ವಿಶ್ವಮೂರ್ತಿಸ್ವಾಮಿ ಹಿರೇಮಠ್, ತಿಮ್ಮಾರೆಡ್ಡಿ, ರಾಜಶೇಖರ್, ಮುಕುಂದರಾವ್ ಶಾನುಭೋಗ್, ಜಾವೀದ್, ರಾಮಮೂರ್ತಿ, ಗಿರಿಜಮ್ಮ ಐಕಲ್, ಬಿ. ಸರೋಜಾ, ವಿಜಯಮ್ಮ ಸೇರಿದಂತೆ ಶ್ರೀಛತ್ರಪತಿ ಶಿವಾಜಿ ವಿದ್ಯಾಮಂದಿರದ ೧೯೭೫-೭೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಡ್ಡಾಯ ಪ್ರವೇಶಕ್ಕೆ ಆಗ್ರಹ
ಹೇಳಿಕೆ ಮಾತು ಬಿಟ್ಟು ಜನಪರ ಅಭಿವೃದ್ಧಿ ಕೆಲಸ ಮಾಡಲಿ: ಸಂಸದ ಬಿ.ವೈ ರಾಘವೇಂದ್ರ