ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಗೆ ಚಾಲನೆ

KannadaprabhaNewsNetwork |  
Published : May 17, 2025, 02:11 AM IST
ಚಿತ್ರ.1: ಪುಟ್ಬಾಲ್ ಒದೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಡಿ.ಶಿವಪ್ಪ ಅವರ ಮೊಮ್ಮಗ ವಿಶಾಲ್ ಶಿವಪ್ಪ. 2: ಪುಟ್ಬಾಲ್ ಪಂದ್ಯಾವಳಿಯಲ್ಲಿ ತೊಡಗಿಸಿಕೊಂಡಿರುವುದು. | Kannada Prabha

ಸಾರಾಂಶ

ಡಿ.ಶಿವಪ್ಪ ಅವರ ಮೊಮ್ಮಗ ವಿಶಾಲ್ ಶಿವಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಧ್ವಜಾರೋಹಣ ನೇರವೇರಿಸಿ ಚೆಂಡನ್ನು ಒದೆಯುವ ಮೂಲಕ 10 ದಿನಗಳ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಮೊದಲ ದಿನ ಆತಿಥೇಯ ಬ್ಲೂ ಬಾಯ್ಸ್ ಹಾಗೂ ಅಮಿಟಿ ಎಫ್.ಸಿಗೆ ಗೆಲುವುಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಳೆಯ ಆತಂಕದ ನಡುವೆ ಇಲ್ಲಿನ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ 26ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್‌ ಟೂರ್ನಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಡಿ.ಶಿವಪ್ಪ ಅವರ ಮೊಮ್ಮಗ ವಿಶಾಲ್ ಶಿವಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಧ್ವಜಾರೋಹಣ ನೇರವೇರಿಸಿ ಚೆಂಡನ್ನು ಒದೆಯುವ ಮೂಲಕ 10 ದಿನಗಳ ಪಂದ್ಯಾವಳಿಯನ್ನು ಉದ್ಘಾಟಿಸಿದರು.ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಶಬ್ಬಿರ್, ರಫೀಕ್ ಖಾನ್, ವಸಂತಿ, ಮಾಜಿ ಅಧ್ಯಕ್ಷ ಕೆ.ಇ.ಕರೀಂ ಹಾಗೂ ಬ್ಲೂಬಾಯ್ಸ್ ಯೂತ್ ಕ್ಲಬ್ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಬಿ.ಕೆ.ಪ್ರಶಾಂತ್, ಕುಶಾಲನಗರ ಉದ್ಯಮಿ ಬ್ಲೆಸ್ಜಿಕ್ರಾಸ್ತ, ಎಂ.ಎ.ಉಸ್ಮಾನ್ ಸೇರಿದಂತೆ ಮತ್ತಿತರರು ಇದ್ದರು.

ಪಂದ್ಯಗಳು ಮತ್ತು ಫಲಿತಾಂಶ:

ಮೊದಲ ದಿನದ ಪಂದ್ಯ ಆತಿಥೇಯ ಬ್ಲೂ ಬಾಯ್ಸ್ ಯೂತ್ ಕ್ಲಬ್ ಮತ್ತು ಪನ್ಯ ಎಫ್.ಸಿ. ಪನ್ಯ ತಂಡದ ನಡುವೆ ನಡೆಯಿತು. ಪಂದ್ಯಾವಳಿಯ ಮೊದಲ ಪಂದ್ಯವೇ ಜಿದ್ದಾಜಿದ್ದಿನಿಮದ ಕೂಡಿದ್ದು, ಟೈ ಬ್ರೇಕರ್‌ನಲ್ಲಿ ಬ್ಲೂಬಾಯ್ಸ್‌ ತಂಡ ಗೆಲುವು ಕಂಡಿತು.

ಪಂದ್ಯದ ಮೊದಲಾರ್ಧದ 12 ಮತ್ತು 18ನೇ ನಿಮೀಷದಲ್ಲಿ ಬ್ಲೂಬಾಯ್ಸ್ ತಂಡದ ಮುನ್ನಡೆ ಆಟಗಾರ ಚಂದ್ರ ಅವರು ಗೋಲು ಹೊಡೆಯುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ಚೇತರಿಕೆಯ ಆಟವಾಡಿದ ಪನ್ಯ ಎಫ್.ಸಿ. ತಂಡ, 2 ಗೋಲು ಗಳಿಸುವ ಮೂಲಕ ಸಮಬಲಗೊಳಿಸಿದರು. ಕೊನೆಗೆ ಫಲಿತಾಂಶಕ್ಕಾಗಿ ಟೈಬ್ರೇಕರ್‌ ಮೊರೆ ಹೋಗಲಾಯಿತು. ಟೈಬ್ರೇಕರ್‌ನಲ್ಲಿ ಪನ್ಯ ಎಫ್.ಸಿ ತಂಡವನ್ನು 5-3 ಗೋಲುಗಳಿಂದ ಸೋಲಿಸಿ ಆತಿಥೇಯ ಬ್ಲೂ ಬಾಯ್ಸ್ ತಂಡದ ಗೆದ್ದಿತು.

ಎರಡನೇ ಪಂದ್ಯ ಅಮಿಟಿ ಎಫ್.ಸಿ ಗದ್ದೆಹಳ್ಳ ಮತ್ತು ಬೆಟ್ಟಗೇರಿ ಎಫ್.ಸಿ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಸಮಬಲದ ಪ್ರದರ್ಶನ ನೀಡಿತು. ಅವಧಿ ಮುಗಿಯುವವರೆಗೂ ಯಾವುದೇ ತಂಡ ಗೋಲು ದಾಖಲಿಸಲಿಲ್ಲ. ಪರಿಣಾಮ ಟೈಬ್ರೇಕರ್‌ನಲ್ಲಿ 5-4 ಗೋಲುಗಳಿಂದ ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡ ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.* ಇಂದಿನ ಪಂದ್ಯಮೊದಲ ಪಂದ್ಯ 3 ಗಂಟೆಗೆ

ಫ್ರೆಂಡ್ಸ್ ಎಫ್.ಸಿ ಬೀಟ್ಟಿಕಟ್ಟೆ - ಮಿಡ್‌ಸಿಟಿ ಸುಂಟಿಕೊಪ್ಪದ್ವಿತೀಯ ಪಂದ್ಯ 4 ಗಂಟೆಗೆಆಲ್‌ಸ್ಟಾರ್ ಎಫ್.ಸಿ. ಗೋಣಿಕೊಪ್ಪ - ನೇತಾಜಿ ಯುವಕ ಸಂಘ ಕೊಡಗರಹಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ