ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವಾಸಿ ಶಿವಶಂಕರ್ ಮಾತನಾಡಿ, 6ನೇ ವಾರ್ಡಿನಲ್ಲಿ ತುಂಬಾ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. 15 ವಾರ್ಡ್ಗಳಲ್ಲೂ ಯಮನ ರೂಪದಲ್ಲಿ ನಾಯಿಗಳ ಹಿಂಡು ಬರುತ್ತಿದೆ. ಎಲ್ಲಿ ನೋಡಿದರೂ, ಯಾವ ಏರಿಯಾ ನೋಡಿದರೂ ಗುಂಪು ಗುಂಪು ಬೀದಿ ನಾಯಿಗಳೇ ಕಾಣುತ್ತವೆ ಎಂದರು.ನಾಯಿಗಳ ದಾಳಿಗೆ ಒಳಗಾದ ಯುವಕನ ತಾಯಿ ರೇಣುಕಾ ಮಾತನಾಡಿ, ಪಕ್ಕದ ಬೀದಿಯಲ್ಲಿ ಗಣಪತಿಯನ್ನು ಕೂರಿಸಿದ್ದನ್ನು ನಮ್ಮ ಮಗ ನೋಡಲು ಹೋದಾಗ ಬೀದಿ ನಾಯಿಗಳು ದಾಳಿ ಮಾಡಿವೆ. ನಮ್ಮ ಮಗನಿಗೆ ಆದ ಪರಿಸ್ಥಿತಿ ಬೇರೆ ಯಾರ ಮಕ್ಕಳಿಗೂ ಆಗದಿರಲಿ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಬೀದಿ ನಾಯಿಗಳ ಹಾವಳಿಂದ ಜನರಿಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದರು.