ಮುಂಡರಗಿ: ವಿದ್ಯಾರ್ಥಿಗಳು ಕೇವಲ ಪಾಠದ ಕಡೆಗೆ ಗಮನ ಕೊಡದೆ ಶಾಲೆ ಬಿಟ್ಟ ನಂತರ ಹಾಗೂ ಶಾಲೆಯಲ್ಲಿ ಇರುವ ಆಟದ ಅವಧಿಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಆಟದಲ್ಲಿ ಪಾಲ್ಗೊಳ್ಳಬೇಕು ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.
ಶಾಲೆಯ ಶಿಕ್ಷಕ ಟಿ.ಬಿ. ಕಳಕರೆಡ್ಡಿ ಉಪನ್ಯಾಸ ಮಾಡಿದರು. ಸಂಸ್ಥೆಯ ಸದಸ್ಯ ಡಾ. ಅನ್ನದಾನಿ ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಆರ್ಪಿಯಾಗಿ ಸೇವೆ ಸಲ್ಲಿಸಿದ ವಿ.ಎಚ್. ಹೊಳೆಯಮ್ಮನವರ್ ಅವರನ್ನು, ಇತ್ತೀಚೆಗೆ ಸಿಆರ್ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಸ್.ಎಚ್. ಇಟಗಿ ಅವರನ್ನು ಹಾಗೂ ಶಾಲೆಗೆ 40 ಡೆಸ್ಕ್ ದಾನ ನೀಡಿದ ವರುಣ್ ಬೆಲ್ಲದ ಅವರನ್ನು ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ಎಚ್.ಎಂ. ರಾಠೋಡ್ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಕೊಟ್ರೇಶ ಅಂಗಡಿ, ಸಂಸ್ಥೆಯ ಸದಸ್ಯರಾದ ಎಸ್.ವೈ. ನಾಡಗೌಡ್ರ, ಜೆ.ಎಸ್. ಅಳವಂಡಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಸಿ.ವಿ. ಪಾಟೀಲ, ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯ ಎಂ.ಬಿ. ನಾಗರಹಳ್ಳಿ ಉಪಸ್ಥಿತರಿದ್ದರು. ಶಿಕ್ಷಕಿ ಎಸ್.ಎಸ್. ಉಕ್ಕಲಿ ಕಾರ್ಯಕ್ರಮ ನಿರೂಪಿಸಿದರು.