ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ಸೀಮೆಯ ಅರಮನೆಯಲ್ಲಿ ಉಪನ್ಯಾಸಕಿ ಅಕ್ಷತಾ ವಿ ಎಡ್ಮೆಮಾರ್ ತಮ್ಮ ಸ್ನಾತಕೋತರ ಪದವಿಗಾಗಿ ನಡೆಸಿದ ‘ಮೂಲ್ಕಿ ಸೀಮೆಯ ಅರಸು ಪರಂಪರೆ’ ಕಿರು ಸಂಶೋಧನಾ ಪ್ರಬಂಧ ಹಸ್ತಾಂತರ ಕಾರ್ಯಕ್ರಮದಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.ಸೀಮೆಯ ಅರಸ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.ಸಾಧಕರ ನೆಲೆಯಲ್ಲಿ ಉದ್ಯಮಿ ಸೂರ್ಯ ಕುಮಾರ್ ಹಳೆಯಂಗಡಿ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಮೋಹನ್ ದಾಸ್ ಉಳೆಪಾಡಿ, ನಾದಸ್ವರ ವಾದಕ ನಾಗೇಶ್ ಬಪ್ಪನಾಡು, ರಂಗ ಕರ್ಮಿ ಚಂದ್ರಶೇಖರ ಸುವರ್ಣ, ಮೂಲ್ಕಿ ಠಾಣೆಯ ಎಎಸ್ಐ ಸಂಜೀವ, ಸಂದೀಪ್ ಶೆಟ್ಟಿ ಪಡುಪಣಂಬೂರು, ಅನಿಲ್ ಶಾಮ್ ಶೆಟ್ಟಿ ಮೂಡುತೋಟ, ಸುಧೇಶ್ ಕುಮಾರ್, ಹರ್ಷಿತ್ ಸಾಲ್ಯಾನ್, ಬಂಕಿ ನಾಯಕರು, ಶಶೀoದ್ರ ಸಾಲ್ಯಾನ್, ಗಾಯತ್ರಿ ಮಹಿಳಾ ಮಂಡಲದ ಸದಸ್ಯರನ್ನು ಗೌರವಿಸಲಾಯಿತು. ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್, ಮೂಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್ ನ ನಿರ್ದೇಶಕ ಗೌತಮ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ರಚಿಸಿದ ಮೈಸೂರು ಮಹಾರಾಜರ ಭಾವಚಿತ್ರವನ್ನು ಹಸ್ತಾಂತರಿಸಲಾಯಿತು. ಹಿತಾಕ್ಷಿ ಉಮೇಶ್ ನಿರೂಪಿಸಿದರು. ಬಳಿಕ ಮೈಸೂರು ಮಹಾರಾಜರು ತುಳುನಾಡಿನ ಯಕ್ಷಗಾನ ಕಾರ್ಯಕ್ರಮವನ್ನು ವೀಕ್ಷಿಸಿದರು.ಸಚಿತ್ರ ಅಂಚೆ ಕಾರ್ಡ್ ಬಿಡುಗಡೆ
ವ್ಯಕ್ತಿಯ ಸುಖ-ಭೋಗ, ವೈಭವ, ಆಡಂಬರ ನೋಡಿ ಗೌರವಿಸುವುದಲ್ಲ. ಆತನ ಅಂತರಂಗದ ಸೌಂದರ್ಯ ಗೌರವಿಸಬೇಕು. ಆದರೆ, ಕಾಲದೋಷದಿಂದ ನಾವು ಹೈಟ್ ಮಾತ್ರ ಗಮನಿಸುತ್ತೇವೆ. ಅಂತರಂಗದ ಸೌಂದರ್ಯ ಲೈಟ್ನ್ನು ಗುರುತಿಸುವುದಿಲ್ಲ ಎಂದು ಶ್ರೀ ಅಮೋಘ ಕೀರ್ತಿ ಮುನಿಮಹಾರಾಜರು ಹೇಳಿದ್ದಾರೆ.ಸೋಮವಾರ ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.