ಕನ್ನಡಪ್ರಭ ವಾರ್ತೆ ಕೋಲಾರಕಾಂಗ್ರೆಸ್ ಹೈಕಮಾಂಡ್ ಸೂಚನೆ ಇಲ್ಲದೇ ಯಾರೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೂ ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಬೆಂಬಲಿತ ಅಧಿಕೃತ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಮಾಡಿ ೧೩ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳತ್ತೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ನಗರದ ಜಿಪಂ ಆವರಣದಲ್ಲಿ ಸೋಮವಾರ ಕೋಮುಲ್ ಚುನಾವಣೆಗೆ ವೇಮಗಲ್ ಭಾಗದಿಂದ ಚಂಜಿಮಲೆ ರಮೇಶ್, ನೈರುತ್ಯ ಕ್ಷೇತ್ರಕ್ಕೆ ನಾಗನಾಳ ಸೋಮಣ್ಣ ಅವರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಕೋಲಾರ ಜಿಲ್ಲಾ ಕಾಂಗ್ರೆಸ್ಗೆ ರಮೇಶ್ ಕುಮಾರ್, ಬೈರತಿ ಸುರೇಶ್, ನಸೀರ್ ಅಹ್ಮದ್ ಹೈಕಮಾಂಡ್ ಇದ್ದಂತೆ. ಅವರ ಒಪ್ಪಿಗೆ ಇಲ್ಲದೆ ಯಾರೇ ನಾಮಪತ್ರ ಹಾಕಿದ್ದರೂ ನಮಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದರು.ಮಹಾಲಕ್ಷ್ಮೀ ನಾಮಪತ್ರಕ್ಕೆ ವಿರೋಧ
ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, ನಮಗೆ ಹೈಕಮಾಂಡ್ ಸೂಚನೆ ನೀಡದಂತೆ ಕೆಲಸ ಮಾಡತ್ತೇವೆ. ಕೋಚಿಮುಲ್ ಆಡಳಿತ ಮಂಡಳಿ ಮೊದಲಿನಿಂದಲೂ ಕಾಂಗ್ರೆಸ್ ವಶದಲ್ಲಿ ಇದ್ದು ಈ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಆಡಳಿತವೇ ಅಧಿಕಾರಕ್ಕೆ ಬರುತ್ತದೆ ಎಂದರುಕೋಮುಲ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳಾದ ನಾಗನಾಳ ಸೋಮಣ್ಣ, ಚಂಜಿಮಲೆ ರಮೇಶ್ ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು ಬ್ಯಾಟಪ್ಪ, ಮೈಲಾಂಡಹಳ್ಳಿ ಮುರಳಿ, ಉರಟಾಗ್ರಹಾರ ಚೌಡರೆಡ್ಡಿ, ವೈ.ಶಿವಕುಮಾರ್ ಇದ್ದರು.