ಬೆಂಬಲಬೆಲೆ ರಾಗಿ ಖರೀದಿ ಪ್ರಕ್ರಿಯೆ 30ಕ್ಕೆ ಮುಕ್ತಾಯ

KannadaprabhaNewsNetwork |  
Published : Jun 27, 2025, 12:48 AM IST
26 ಬೀರೂರು 3ಬೀರೂರಿನ ಎಪಿಎಂಸಿ ಆವರಣದಲ್ಲಿ ರೈತರಿಂದ ರಾಗಿ ಖರೀದಿ ಮಾಡುತ್ತಿರುವುದು. | Kannada Prabha

ಸಾರಾಂಶ

ಬೀರೂರು, ನಾಫೆಡ್ ನಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಜೂ.30ಕ್ಕೆ ಮುಕ್ತಾಯವಾಗಲಿದೆ. ನೋಂದಾಯಿತ ರೈತರು ಕಡೆಯ ದಿನದ ಒಳಗೆ ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ಧಾನ್ಯ ಮಾರಾಟ ಮಾಡಬೇಕು ಎಂದು ಖರೀದಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ನಾಫೆಡ್ ಮೂಲಕ 16529 ರೈತರು ರಾಗಿ ಮಾರಾಟ: ಬಾಗಪ್ಪ ಕಟ್ಟೀಮನಿ

ಕನ್ನಡಪ್ರಭ ವಾರ್ತೆ, ಬೀರೂರು

ನಾಫೆಡ್ ನಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಜೂ.30ಕ್ಕೆ ಮುಕ್ತಾಯವಾಗಲಿದೆ. ನೋಂದಾಯಿತ ರೈತರು ಕಡೆಯ ದಿನದ ಒಳಗೆ ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ಧಾನ್ಯ ಮಾರಾಟ ಮಾಡಬೇಕು ಎಂದು ಖರೀದಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು ತಾಲೂಕಿನಲ್ಲಿ 5, ಚಿಕ್ಕಮಗಳೂರಿನಲ್ಲಿ 1, ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳಲ್ಲಿ ತಲಾ 1 ಖರೀದಿ ಕೇಂದ್ರ ಆರಂಭಿಸಲಾಗಿತ್ತು, ಒಟ್ಟು 18453 ರೈತರು ನೋಂದಾಯಿಸಿದ್ದು ಈವರೆಗೆ 16529 ರೈತರು ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಿದ್ದಾರೆ ಎಂದು ನಾಫೆಡ್ ಅಧಿಕಾರಿ ಬಾಗಪ್ಪ ಕಟ್ಟೀಮನಿ ತಿಳಿಸಿದರು.ತಾಲೂಕಿನ ಪಂಚನಹಳ್ಳಿಯಲ್ಲಿ 2, ಕಡೂರಿನಲ್ಲಿ 2 ಮತ್ತು ಬೀರೂರಿನಲ್ಲಿ ಒಂದು ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಿವೆ. ಪಂಚನಹಳ್ಳಿಯಲ್ಲಿ ಒಟ್ಟು 3840 ರೈತರು ನೋಂದಾಯಿಸಿಕೊಂಡಿದ್ದು ಅವರಲ್ಲಿ 3466 ರೈತರು 62239 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದಾರೆ. ಕಡೂರಿನಲ್ಲಿ ನೋಂದಾಯಿಸಿದ 6910 ರೈತರ ಪೈಕಿ 6131 ರೈತರು 1.06ಲಕ್ಷ ಕ್ವಿಂಟಾಲ್ ರಾಗಿ ಬಿಟ್ಟಿದ್ದಾರೆ. ಬೀರೂರಿನಲ್ಲಿ 1937 ರೈತರಲ್ಲಿ 1713 ರೈತರು 29789 ಕ್ವಿಂಟಲ್ ರಾಗಿ ಬೆಂಬಲಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ 998 ರೈತರಲ್ಲಿ 951 ಮಂದಿ 15471 ಕ್ವಿಂಟಲ್, ತರೀಕೆರೆಯಲ್ಲಿ 1559 ರೈತರಲ್ಲಿ 1423 ರೈತರು 26134 ಕ್ವಿಂಟಾಲ್, ಅಜ್ಜಂಪುರದಲ್ಲಿ 3219 ರೈತರ ಪೈಕಿ 2845 ರೈತರು 50106 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದಾರೆ. ಒಟ್ಟಾರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 3.04ಲಕ್ಷ ಕ್ವಿಂಟಲ್ ರಾಗಿ ಖರೀದಿಯ ಗುರಿ ಹೊಂದಲಾಗಿತ್ತು, ಈವರೆಗೆ 2.90ಲಕ್ಷ ಕ್ವಿಂಟಲ್ ರಾಗಿ ಖರೀದಿಸಿದ್ದು ಅದರ ಒಟ್ಟಾರೆ ಮೌಲ್ಯ ₹124.55 ಕೋಟಿಯಾಗಿದೆ. ಕಳೆದ ಮಾರ್ಚ್ನಿಂದ ಖರೀದಿ ಆರಂಭಗೊಂಡಿದ್ದು, ಈ ಪೈಕಿ ಜೂನ್ ತಿಂಗಳಿನಲ್ಲಿ ಖರೀದಿ ಮಾಡಿದ ರಾಗಿಗೆ ಮಾತ್ರ ಹಣ ಪಾವತಿಯಾಗಬೇಕಿದೆ. ಸದ್ಯದಲ್ಲಿಯೇ ಅವರಿಗೂ ಹಣ ಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಬಾರಿ ರೈತರು ರಾಗಿ ಮಾರಾಟ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿದರೂ ಖರೀದಿ ಮಾತ್ರ ನಿರೀಕ್ಷೆಯಷ್ಟು ಆಗಿರಲಿಲ್ಲ, ಈ ಬಾರಿ ನಾಫೆಡ್ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೈತರಿಗೆ ಸರ್ಕಾರ ರಾಗಿ ಕ್ವಿಂಟಾಲ್‌ ಗೆ ₹4290 ನಿಗದಿಪಡಿಸಲಾಗಿತ್ತು ಎಂದರು.26 ಬೀರೂರು 3ಬೀರೂರಿನ ಎಪಿಎಂಸಿ ಆವರಣದಲ್ಲಿ ರೈತರಿಂದ ರಾಗಿ ಖರೀದಿ ಮಾಡುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ