ವಿವೇಕಾನಂದರ ಜವಾಬ್ದಾರಿಗಳಿಗೆ ಪಾಲನಕರ್ತರಾಗಿ

KannadaprabhaNewsNetwork |  
Published : Jan 15, 2024, 01:49 AM IST
೧೩ಎಂಬಿಎಲ್೧: ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತ ಗಿರಿಯಲ್ಲಿರುವ ಅರಿಹಂತ ಚಾರಿಟೇಬಲ್ ಟ್ರಸ್ಟ್, ಅರಿಹಂತ ಬಿ.ಎಸ್ ಡಬ್ಲೂ ಕಾಲೇಜಿನ ಎನ್.ಎಸ್.ಎಸ್ ಘಟಕ, ವಿಜಯಪುರ ಜಿಲ್ಲಾಸ್ಪತ್ರೆ, ಜಿಲ್ಲಾ ರಕ್ತನಿಧಿ ಕೇಂದ್ರ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮ ದಿನೋತ್ಸವ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ತ್ಯಾಗ ಮತ್ತು ಸೇವೆಗಳ ಮಹತ್ವ ತಿಳಿಸಿಕೊಟ್ಟು. ಕುಸಿಯುತ್ತಿರುವ ಜನರ ಉದ್ದಾರಕ್ಕೆ ಯುವಜನತೆ ಆಸರೆಯಾಗಿ ನಿಲ್ಲಬೇಕು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಾನಸಿಕ, ದೈಹಿಕ ಹಾಗೂ ಭೌದ್ಧಿಕ ಶಕ್ತಿಗಳನ್ನೆಲ್ಲ ಒಟ್ಟುಗೂಡಿಸಿ ದೇಶದ ಅಭಿವೃದ್ಧಿಗೆ ಪೂರಕವಾದ ನಿಸ್ವಾರ್ಥ ಸೇವೆಗೆ ಸಮರ್ಪಿತರಾಗುವ ಮೂಲಕ ವಿವೇಕಾನಂದರು ನೀಡಿದ ಜವಾಬ್ದಾರಿಗಳಿಗೆ ಯುವಜನತೆ ಪಾಲನಕರ್ತರಾಗಬೇಕು ಎಂದು ಚಿಂತಕ ಅರವಿಂದ ಹು. ಕೊಪ್ಪ ಕರೆ ನೀಡಿದರು. ಅವರು ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತ ಗಿರಿಯಲ್ಲಿರುವ ಅರಿಹಂತ ಚಾರಿಟೇಬಲ್ ಟ್ರಸ್ಟ್, ಅರಿಹಂತ ಬಿ.ಎಸ್ ಡಬ್ಲೂ ಕಾಲೇಜಿನ ಎನ್.ಎಸ್.ಎಸ್ ಘಟಕ, ವಿಜಯಪುರ ಜಿಲ್ಲಾಸ್ಪತ್ರೆ, ಜಿಲ್ಲಾ ರಕ್ತನಿಧಿ ಕೇಂದ್ರ ವಿಜಯಪುರ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ ರಕ್ತದಾನ ಕ್ರಿಯಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಶ್ರದ್ಧಾಪೂರ್ಣ ಅಧ್ಯಯನ, ಉತ್ಸಾಹ ಪೂರ್ಣ ಆಲೋಚನೆ ಹಾಗೂ ಅನನ್ಯ ಶಕ್ತಿ ಸಾಮರ್ಥ್ಯಗಳಿರುವ ಯುವಜನತೆ ಎದುರು ನೋಡುತ್ತಿರುವ ಭಾರತಾಂಬೆಗೆ ವಿಶ್ವಮಾನ್ಯತೆ ತಂದು ಕೊಡಲು ವ್ಯಯಕ್ತಿಕ ಬದುಕಿನ ಸುಖ ಭೋಗಗಳನ್ನು ತಿರಸ್ಕರಿಸಿ, ಪರರ ಒಳಿತಿಗೆ ದುಡಿಯಲು ಹಂಬಲಿಸುವ ಮನಗಳಿಗೆ, ಸೂಕ್ತ ಸೇವಾ ಕ್ಷೇತ್ರಗಳನ್ನು ನೀಡಿ ಗೌರವಿಸುವ ವ್ಯವಸ್ಥೆ ರೂಪಿಸುವ ಜವಾಬ್ದಾರಿ ಹಿರಿಯರು ತೆಗೆದುಕೊಂಡಲ್ಲಿ ಮಾತ್ರ ಯುವಶಕ್ತಿಯ ಸದ್ವಿನಿಯೋಗ ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ ಮಾತನಾಡಿ, ಇಚ್ಛೆ ಮತ್ತು ಬಯಕೆಗಳಿಗೆ ಸರಿಹೊಂದುವ ಆದರ್ಶಗಳು, ಭಾವನಾತ್ಮಕ ಕ್ರಿಯೆಗಳ ಲಭ್ಯತೆಯಿಂದ ವಂಚಿತರಾಗುವ ಯುವಜನತೆ ಉದ್ವೇಗ, ಹಿಂಸೆ, ಅಸಹಾಯಕತೆ, ನಿರುತ್ಸಾಹಗಳಂತಹ ಮಾರಕ ಭಾವನೆಗಳಿಗೆ ತುತ್ತಾಗಿ, ಸಮಾಜ ದ್ರೋಹಿ ಶಕ್ತಿಗಳಾಗಿ ರೂಪುಗೊಳ್ಳುತ್ತಿರುವುದನ್ನು ತಡೆದು, ಉತ್ಪಾದಕ ಶಕ್ತಿಯನ್ನಾಗಿಸಲು ವಿವೇಕಾನಂದರ ಚಿಂತನೆಗಳೇ ಚಿಕಿತ್ಸಕ ಸಾಧನಗಳಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ತ್ಯಾಗ ಮತ್ತು ಸೇವೆಗಳ ಮಹತ್ವ ತಿಳಿಸಿಕೊಟ್ಟು. ಕುಸಿಯುತ್ತಿರುವ ಜನರ ಉದ್ದಾರಕ್ಕೆ ಯುವಜನತೆ ಆಸರೆಯಾಗಿ ನಿಲ್ಲಬೇಕು. ವಿವೇಕಾನಂದರು ನಡೆಸಿದ ಸತ್ಯ ಶೋಧಕ ಆಂದೋಲನ ಇಂದಿನ ಯುವಜನಾಂಗಕ್ಕೆ ದಾರಿದೀಪ ಆಗಬೇಕು ಎಂದರು.

ಜಿಲ್ಲಾ ರಕ್ತನಿಧಿ ಕೇಂದ್ರದ ಕಾರ್ಯನಿರತ ವೈಧ್ಯ ಡಾ. ನಕ್ಷ ರಕ್ತದಾನದ ಮಹತ್ವ, ರಕ್ತದಾನಿಗೆ ಆಗುವ ಆರೋಗ್ಯವರ್ಧಕ ಲಾಭಗಳು, ರಕ್ತದಾನಿಗಿರಬೇಕಾದ ಅರ್ಹತೆಗಳು ಇತ್ಯಾದಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹೆಚ್ಚುಬಾರಿ ರಕ್ತದಾನ ಮಾಡಿದ ಕೀರ್ತಿಗೆ ಪಾತ್ರರಾದ ಅರವಿಂದ ಕೊಪ್ಪರವರನ್ನು ತಾಲೂಕು ಆಸ್ಪತ್ರೆಯ ವತಿಯಿಂದ ಸನ್ಮಾನಿಸಿದರು. ವೇದಿಕೆಯ ಮೇಲೆ ಅರಿಹಂತ ಬಿ.ಎಸ್.ಡಬ್ಲೂ ಕಾಲೇಜು ಪ್ರಾಚಾರ್ಯ ವಿಫುಲ ಸಗರಿ, ನ್ಯಾಯವಾದಿ ರಶ್ಮಿ ಕುಲಕರ್ಣಿ, ತಾಲೂಕು ಆಸ್ಪತ್ರೆ ಪ್ರಯೋಗಾಲಯದ ಹಿರಿಯ ತಾಂತ್ರಿಕ ಅಧಿಕಾರಿ ವಿ.ವಿ ಪವಾಡಶೆಟ್ಟಿ ಇದ್ದರು.

ಶಿಬಿರದಲ್ಲಿ ವಲಯ ಅರಣ್ಯ ಇಲಾಖೆ ಅಧಿಕಾರಿ ಸಿದ್ಲಿಂಗಪ್ಪ ಸಂಗಲಕ ಸೇರಿದಂತೆ 27 ಜನರು ರಕ್ತ ದಾನ ಮಾಡಿದರು. ಶಿಬಿರವನ್ನು ನರ್ಸಿಂಗ್ ಆಫೀಸರ್‌ ಎಂ. ಆರ್‌ ಹವಾಲ್ದಾರ, ನಬಿ ಬೀಳಗಿ, ಪ್ರಯೋಗಾಲಯ ತಜ್ಞೆ ಸುನೇನಾ ತಳವಾರ, ಪ್ರಯೋಗಾಲಯ ಸಹಾಯಕ ಐಶ್ವರ್ಯ ಪ್ಯಾಟಿಗೌಡರ, ನಿಖಿಲ್ ನಡೆಸಿಕೊಟ್ಟರು.

ಉಪನ್ಯಾಸಕ ಅಶೋಕ ಹಡಪದ ಸ್ವಾಗತಿಸಿದರು. ಇಂಗ್ಲಿಷ್‌ ಉಪನ್ಯಾಸ ರಾಜು ನಲವಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನ್ಯಾಯವಾದಿ ಬಸವರಾಜ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ ಕಟ್ಟಿ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ