ತೆರಿಗೆ ಪಾವತಿಸಿದವರಿಗೆ ಶಿವಮೊಗ್ಗ ಪಾಲಿಕೆ ಆಡಳಿತದಿಂದ ಸಿಹಿ

KannadaprabhaNewsNetwork |  
Published : Apr 02, 2026, 01:45 AM IST
ಶಿವಮೊಗ್ಗ ಪಾಲಿಕೆ | Kannada Prabha

ಸಾರಾಂಶ

ಹಣಕಾಸು ವರ್ಷದ ಮೊದಲ ದಿನವಾದ ಏ.1 ರಂದು ಆಸ್ತಿ ತೆರಿಗೆ ಪಾವತಿಸಿದ ನಾಗರಿಕರಿಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ಸಿಹಿ ವಿತರಣೆ ಜೊತೆಗೆ ‘ಅಭಿನಂದನಾ ಪತ್ರ’ ನೀಡಿ ಗೌರವಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಣಕಾಸು ವರ್ಷದ ಮೊದಲ ದಿನವಾದ ಏ.1 ರಂದು ಆಸ್ತಿ ತೆರಿಗೆ ಪಾವತಿಸಿದ ನಾಗರಿಕರಿಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ಸಿಹಿ ವಿತರಣೆ ಜೊತೆಗೆ ‘ಅಭಿನಂದನಾ ಪತ್ರ’ ನೀಡಿ ಗೌರವಿಸಿದೆ.

ಇದೇ ಮೊದಲ ಬಾರಿಗೆ ತೆರಿಗೆದಾರರನ್ನು ಗೌರವಿಸುವ ವಿನೂತನ ಕಾರ್ಯವನ್ನು ಪಾಲಿಕೆ ಆಡಳಿತ ನಡೆಸಿತು. ಏ.1 ರಂದು ಪಾಲಿಕೆಯ ವಲಯ ಕಚೇರಿಗಳನ್ನು ಹೂವು, ತಳಿರು – ತೋರಣಗಳಿಂದ ಸಿಂಗರಿಸಲಾಗಿತ್ತು. ತೆರಿಗೆ ಪಾವತಿಸಲು ಆಗಮಿಸಿದ ನಾಗರಿಕರನ್ನು ಕಚೇರಿ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.

ಕಚೇರಿಗಳಲ್ಲಿ ವಿಶೇಷವಾಗಿ ಸಿದ್ದಪಡಿಸಿದ ಆಸನದಲ್ಲಿ ಕುಳ್ಳರಿಸಿ, ಸಕಾಲದಲ್ಲಿ ಕಂದಾಯ ಪಾವತಿ ಮಾಡುತ್ತಿರುವ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಸದರಿ ತೆರಿಗೆದಾರರಿಗೆ ಲಾಡು ವಿತರಿಸಿದರು. ‘ಮಾದರಿ ನಾಗರಿಕ’ ಎಂಬ ಬಿರುದು ಒಳಗೊಂಡ, ಆಯುಕ್ತರು ಸಹಿ ಮಾಡಿದ ಅಭಿನಂದನಾ ಪತ್ರ ನೀಡಿ ಗೌರವಸಿದರು.

ಇದೇ ಮೊದಲ ಬಾರಿಗೆ ಪಾಲಿಕೆ ವಲಯ ಕಚೇರಿಗಳಲ್ಲಿ ಮಾಡಿದ್ದ ಈ ವಿಶೇಷ ವ್ಯವಸ್ಥೆಯು, ಕಂದಾಯ ಪಾವತಿ ಮಾಡಲು ಆಗಮಿಸಿದ ನಾಗರಿಕರಲ್ಲಿ ಅಚ್ಚರಿಯ ಜೊತೆಗೆ ಸಂತಸ ಉಂಟು ಮಾಡಿತು.

ಈ ಸಂದರ್ಭದಲ್ಲಿ ವಲಯ ಕಚೇರಿಯ ಉಪ ಆಯುಕ್ತ ವಿರುಪಾಕ್ಷಪ್ಪ ಪೂಜಾರ್, ಆರ್.ಓ.ನಾಗೇಂದ್ರ, ಸಹಾಯಕ ಕಂದಾಯಾಧಿಕಾರಿ ಅಂಜನಮೂರ್ತಿ, ಕಂದಾಯ ನಿರೀಕ್ಷರಾದ ಅನೀಸ್, ವರ್ಷ, ಜುಬೇರ್ ಮೊದಲಾದವರು ಹಾಜರಿದ್ದರು.ನಾಗರಿಕರು ಸಕಾಲದಲ್ಲಿ ತೆರಿಗೆ ಪಾವತಿಸಿ

ನಾಗರಿಕರು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿ ನಗರದ ಅಭಿವೃದ್ದಿಗೆ ಕೈಜೋಡಿಸಬೇಕು. ತೆರಿಗೆ ಪಾವತಿ ಬಗ್ಗೆ ಜಾಗೃತಿ ಮೂಡಿಸಲು, ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಹಾಗೂ ನಾಗರಿಕರ ಗಮನ ಸೆಳೆಯುವ ಉದ್ಧೇಶದಿಂದ, ಹಣಕಾಸು ವರ್ಷ ಆರಂಭದ ಮೊದಲ ದಿನವಾದ ಏ.1 ರಂದು ತೆರಿಗೆ ಪಾವತಿ ಮಾಡಲು ಆಗಮಿಸುವ ನಾಗರಿಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ‌ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.

ಏಪ್ರಿಲ್‌ನಲ್ಲಿ ತೆರಿಗೆ ಪಾವತಿಸಿದರೆ ಶೇ.5 ರಿಯಾಯ್ತಿ!

ಏಪ್ರಿಲ್ ತಿಂಗಳಾಂತ್ಯದೊಳಗೆ 2026-27 ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವ ನಾಗರಿಕರಿಗೆ ಶೇ. 5 ರಷ್ಟು ರಿಯಾಯ್ತಿ ಕಲ್ಪಿಸಲಾಗುವುದು. ಮೇ. 1 ರಿಂದ 30 ರವರೆಗೆ ಈ ರಿಯಾಯ್ತಿ ಅನ್ವಯವಾಗುವುದಿಲ್ಲ ಎಂದು ಪಾಲಿಕೆ ಆಡಳಿತ ತಿಳಿಸಿದೆ. ಒಂದು ವೇಳೆ ಸಕಾಲದಲ್ಲಿ ತೆರಿಗೆ ಪಾವತಿಸದಿದ್ದರೆ ಜೂನ್ 1 ರಿಂದ ಪ್ರತಿ ತಿಂಗಳಿಗೆ ಶೇ. 2 ರಷ್ಟು ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಡಳಿತ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ