ಚಿಕ್ಕಮಗಳೂರಿನಲ್ಲಿ ಟಿ- 20 ಕ್ರಿಕೆಟ್‌ ಪಂದ್ಯಾವಳಿ

KannadaprabhaNewsNetwork | Published : Nov 12, 2023 1:03 AM

ಸಾರಾಂಶ

ಚಿಕ್ಕಮಗಳೂರಿನಲ್ಲಿ ಟಿ- 20 ಕ್ರಿಕೆಟ್‌ ಪಂದ್ಯಾವಳಿ

ಚಿಕ್ಕಮಗಳೂರು: ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದಿ.ಗೌರಮ್ಮ ಬಸವೇಗೌಡರ ಸ್ಮರಣಾರ್ಥ ಇಲ್ಲಿನ ರಾಣಾ ಸ್ಪೋರ್ಟ್ಸ್ ಕ್ಲಬ್ ನಿಂದ ನ.20 ರಿಂದ 26 ರವರೆಗೆ ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ 6ನೇ ಆವೃತ್ತಿಯ ಟಿ-20 ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ ಆಯೋಜಿಸಲಾಗಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಕ್ಲಬ್ ಖಜಾಂಚಿ ನಟರಾಜ್ ಈ ವಿಷಯ ತಿಳಿಸಿ, ಸುಮಾರು 150 ಕ್ಕಿಂತ ಹೆಚ್ಚು ಶಿವಮೊಗ್ಗ ವಲಯದ (ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ) ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 5 ತಂಡದ ಮಾಲೀಕರು ಆಟಗಾರರನ್ನು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು, ಈಗಾಗಲೇ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದರು.

ಐಪಿಎಲ್‌ ಮಾದರಿಯ ಈ ಟೂರ್ನಮೆಂಟ್‌ನಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ ಒಂದು ಲಕ್ಷ ಹಾಗೂ ಆಕರ್ಷಕ ಪಾರಿತೋಷಕ, ದ್ವಿತೀಯ ಬಹುಮಾನ 50 ಸಾವಿರ ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದು ಎಂದು ಹೇಳಿದರು. ತಂಡದ ಮಾಲೀಕರು ಅಕ್ಷಯ ಬ್ಲಾಸ್ಟರ್ ಶರದ್, ರೈಸಿಂಗ್ ಸ್ಟಾರ್ ತಾಮ್ಸನ್, ವಸಿಷ್ಠ ಇ-ಸ್ಪೋರ್ಟ್ಸ್ ಸಂದೀಪ್, ಆಲ್-ರೆಹಮಾನ್ ವಾರಿಯರ್ಸ್‌ ಅಫೀಜ್, ರಕೀನ್ ಇ- ಸ್ಪೋರ್ಟ್ಸ್ ರಕೀನ್ ಎಂದರು. ಪಂದ್ಯಾವಳಿ ಉದ್ಘಾಟನೆ ನ.20 ರಂದು ಬೆಳಿಗ್ಗೆ 8.30 ಕ್ಕೆ ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನೆರವೇರಲಿದ್ದು, ಸಮಾರೋಪ ಸಮಾರಂಭ ನ.26ರ ಸಂಜೆ 5.30ಕ್ಕೆ ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹರೀಶ್‌, ಸುನೀಲ್‌, ಅಭಿಷೇಕ್, ಸಂತೋಷ್‌ ಇದ್ದರು.

Share this article