ನೀರಾವರಿ ಯೋಜನೆ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Jul 28, 2025, 12:30 AM IST
27ಸಿಎಚ್‌ಎನ್‌53ಚಾಮರಾಜನಗರ ತಾಲ್ಲೂಕಿನ ಹುಭ್ಭೇಹುಣಸೆ ಡ್ಯಾಂ ಗೆ ನೀರಾವರಿ ಇಲಾಖೆ ಎ ಇ ಇ ಕರುಣಮಯಿ ಮತ್ತು ರೈತರ ಜೊತೆಗೂಡಿ ಡ್ಯಾಂ ವೀಕ್ಷಣೆ ಮಾಡಿ  ಹೊರ ಹೋಗುವ  ನೀರಾವರಿ ಕಾಲುವೆಗಳನ್ನು ವೀಕ್ಷಿಸಲು ಕಾಲ್ನಾಡಿಗೆಯಲ್ಲಿ ಎರಡು ಕಿಲೋಮೀಟರ್  ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ನೀರಾವರಿ ಯೋಜನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಎಂ.ಆರ್‌. ಮಂಜುನಾಥ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ನೀರಾವರಿ ಯೋಜನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಎಂ.ಆರ್‌. ಮಂಜುನಾಥ್ ಸೂಚನೆ ನೀಡಿದರು.ತಾಲೂಕಿನ ಹುಭ್ಭೇಹುಣಸೆ ಡ್ಯಾಂಗೆ ನೀರಾವರಿ ಇಲಾಖೆ ಎಇಇ ಕರುಣಮಯಿ ಮತ್ತು ರೈತರ ಜೊತೆಗೂಡಿ ಡ್ಯಾಂ ವೀಕ್ಷಿಸಿ ಮಾತನಾಡಿದರು. ಕಳೆದ ಭಾರಿ ಉಭ್ಭೇಹುಣಸೆ ಜಲಾಶಯ ನಾಲೆಗಳಲ್ಲಿ ಸಾಕಷ್ಟು ಸಿಲ್ಟ್ ಜಂಗಲ್ ಗಿಡಗಂಟಿಗಳನ್ನು ತೆರವುಗೊಳಿಸಿ ನಾಲೆಯಲ್ಲಿ ಎಲ್ಲೇಮಾಳ ರಸ್ತೆ ತನಕ ನೀರು ಹರಿಸಲಾಗಿತ್ತು. ಈ ಬಾರಿಯೂ ನೀರು ಹರಿದು ತಟ್ಟೆಹಳ್ಳದ ಮೂಲಕ ನೀರು ನದಿಗೆ ಹೋಗುತ್ತದೆ. ಅದನ್ನು ಪೋಲಾಗದಂತೆ ತಡೆಗಟ್ಟಿ ರೈತರಿಗೆ ಅನುಕೂಲ ಕಲ್ಪಿಸಲು ನೀರು ಸಂಗ್ರಹಣೆಗಾಗಿ ಹಲವಾರು ಯೋಜನೆ ರೂಪಿಸಲು ರೈತರ ಜೊತೆ ವೀಕ್ಷಣೆ ಮಾಡಿದ್ದೇನೆ ಎಂದರು.

ಅಲ್ಲದೆ ವೈಶಂ ಪಾಳ್ಯ ಭಾಗದ ಜನರು ಕರೆ ತುಂಬಿಸುವಂತೆ ಕೇಳುತ್ತಿದ್ದು ಆ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಹರಕನ ಹಳ್ಳಕ್ಕೆ ಕಾಲುವೆ ಮುಖಾಂತರ ನೀರು ಸರಬರಾಜು ಮಾಡಿದರೆ ಅಂತರ್ಜಲ ವೃದ್ಧಿ ಜೊತೆಗೆ ರೈತರ ಜಮೀನುಗಳಲ್ಲಿ ಇರುವ ಕೊಳವೆಬಾವಿ ತೊಡು ಬಾಯಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರಾವರಿಗೆ ಅನುಕೂಲವಾಗುತ್ತದೆ ರೈತರ ಜಮೀನಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.

ಹಾಗಾಗಿ ಈಗಾಗಲೇ ಒಂದಷ್ಟು ನೀರಾವರಿ ಯೋಜನೆ ಅಭಿವೃದ್ಧಿಗೆ ಅನುದಾನ ಬಂದಿದ್ದು, ಡಿಪಿಆರ್ ಸರ್ವೇ ಕಾರ್ಯ ನಡೆಯುತ್ತಿದ್ದು ಮುಗಿದ ಬಳಿಕ ಇನ್ನೆಷ್ಟು ಅನುದಾನ ಬೇಕಾಗುತ್ತದೆ ಎಂಬುದನ್ನು ಅಂದಾಜು ಮಾಡಿಕೊಂಡು ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿದೆ ಎಂದರು.

ಈ ವೇಳೆ ನೀರಾವರಿ ಇಲಾಖೆ ಎಇಇ ಕರುಣಾಮಯಿ, ಕೆಆರ್ ಐಡಿಎಲ್ ಅಭಿಯಂತರ ಕಾರ್ತಿಕ್, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಹನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಗೌಡ, ನಟರಾಜು, ಮುಖಂಡರಾದ ಹನೂರು ಗೋವಿಂದ ಚಿನ್ನತಂಬಿ, ಬಾಲು, ಚಿನ್ನವೆಂಕಟ, ಚಿನ್ನಸ್ವಾಮಿ, ಎಸ್.ಆರ್ ಮಹದೇವ್, ಚನ್ನಲಿಂಗನಹಳ್ಳಿ ವೆಂಕಟೇಶ್ ,ಆರ್ ಮಹಾದೇವ ಗೌಡ, ಎಸ್ ಮಲ್ಲೇಗೌಡ ಹಾಗೂ ರೈತ ಮುಖಂಡರುಗಳು ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ