ಕನ್ನಡಪ್ರಭ ವಾರ್ತೆ ಹನೂರು
ಜಿಲ್ಲೆಯಲ್ಲಿ ನಾವು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ, ಇನ್ನೂ ಹೆಚ್ಚಿನ ಉತ್ಪಾದನೆಗೆ ತಮ್ಮ ಸಂಘಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ರಾಜಕೀಯ ಬಿಟ್ಟು ಎಲ್ಲಾ ಒಗ್ಗಟಾಗಿ ಕೂಡಿ ಸಂಘಗಳ ಅಭಿವೃದ್ಧಿ ಸಹಕಾರ ನೀಡಬೇಕು. ಹನೂರು ತಾಲೂಕಿನಲ್ಲಿ 90 ಸಾವಿರ ಹಾಲು ಪೂರೈಕೆಯಾಗುತ್ತಿದೆ. ಚಿಕ್ಕ ಜಿಲ್ಲೆಗೆ ಒಕ್ಕೂಟ ಬರಲು ಶ್ರಮಿಸಿದ ಮಹದೇವಪ್ರಸಾದ್ ಅವರನ್ನು ನೆನೆಪು ಮಾಡಿಕೊಳ್ಳಬೇಕು. ಹಾಗಾಗಿ ಎಲ್ಲಾ ಹೈನುಗಾರಿಕೆ ಮಾಡುವ ಮಾಡುವ ಮೂಲಕ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕರಾದ ಮಹಾದೇವಸ್ವಾಮಿ (ಉದ್ದನೂರು ಪ್ರಸಾದ್), ಶಾಹುಲ್ ಅಹಮದ್ (ತಾರೀಖ್), ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ವ್ಯವಸ್ಥಾಪಕ ನಿರ್ದೇಶಕ ಕೆ. ರಾಜಕುಮಾರ್, ಪ್ರಭಾರ ವ್ಯವಸ್ಥಾಪಕ ಶರತ್ ಕುಮಾರ್, ವಿಸ್ತರಣಾಧಿಕಾರಿಗಳಾದ ವೆಂಕಟೇಶ್, ರಘು, ಸೋಮಶೇಖರ್, ಶ್ರೀನಿವಾಸ್ ಪ್ರಸಾದ್, ಚಾಮರಾಜನಗರ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪ, ವಿವಿಧ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಕರು ಹಾಜರಿದ್ದರು.----------14ಸಿಎಚ್ಎನ್23
ಹನೂರು ಪಟ್ಟಣದ ಚಾಮುಲ್ ಉಪ ಕಚೇರಿಯಲ್ಲಿ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ - 2025 ಸಮಾರೋಪ ಸಮಾರಂಭದ ಪ್ರಯುಕ್ತ ಹನೂರು ಕ್ಷೇತ್ರ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಪೂರ್ವಭಾವಿಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಮಾತನಾಡಿದರು.