ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷದ ನಾಯಕರಿಂದ ಆಯೋಜಿಸಿದ್ದ ೧೦೮ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಇನ್ಸ್ಪೆಕ್ಟರ್ವೊಬ್ಬರು ಹಿಂದೂಗಳಿಗೆ ಗ್ರಹಚಾರ ಬಿಡಿಸುತ್ತೇನೆ ಅಂತಾರೆ. ಇದೇ ಮಾತನ್ನು ಮುಸಲ್ಮಾನರಿಗೆ ಹೇಳಲಿ ನೋಡೋಣ. ಎಂದಾದರೂ ಅವರು ಆಚರಿಸುವ ಹಬ್ಬದ ಬಗ್ಗೆ ಹೀಗೆ ಹೇಳಿದ್ದಾರಾ ಎಂದು ಪ್ರಶ್ನಿಸಿದರು.
ಮುಸಲ್ಮಾನರು ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಯಾರ ಅಪ್ಪಂದು ರಸ್ತೆ. ಗಣಪತಿಯನ್ನು ಬಿಜೆಪಿ ಕೊಂಡುಕೊಂಡಿದ್ದೀರಾ ಎಂದು ಟೀಕಿಸುವ ಕಾಂಗ್ರೆಸ್ಸಿಗರು ಎಲೆಕ್ಷನ್ ಬಂದಾಗ ಮಾತ್ರ ಹಿಂದೂ ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಅಂತಾರೆ. ಆದರೆ, ನಮ್ಮ ರಕ್ತದ ನರನಾಡಿಗಳಲ್ಲಿ ಹಿಂದೂ ರಕ್ತ ಹರಿಯುತ್ತಿದೆ. ಹಾಗಾಗಿ ನಾವು ಯಾವಾಗಲೂ ಹಿಂದೂ ಎಂದು ನೇರವಾಗಿ ಹೇಳಿದರು.ಒಬ್ಬ ವಿರೋಧ ಪಕ್ಷದ ನಾಯಕ ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಹೋಗುತ್ತಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗಣಪತಿಗೆ ನಿರ್ಬಂಧ ಹೇರಿದರೆ ಒಂದು ಬೀದಿಗೆ ಸಹ ಹೋಗಲು ಸಿದ್ಧನಿದ್ದೇನೆ. ಹಬ್ಬ ಮಾಡುವ ತಾಕತ್ತು ನಮಗೆ ಇದೆ. ನಮ್ಮ ಹೋರಾಟ ಗಣಪತಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಬೇಕು. ಇದು ಪೊಲೀಸರ ಹಬ್ಬ ಆಗಬಾರಾದು. ಇದು ಗಣೇಶ ಮೆರವಣಿಗೆ ಮಾತ್ರವಲ್ಲ ಕಾಂಗ್ರೆಸ್ ವಿರುದ್ಧದ ಧ್ವನಿ. ಈ ಸರ್ಕಾರ ಮುಂದಿನ ವರ್ಷ ಇದ್ದರೆ ಗಣೇಶ ಹಬ್ಬಕ್ಕೆ ನಿರ್ಬಂಧ ಇರಬಾರದು ಎಂದು ಗುಡುಗಿದರು.
ನಮಗೆ ಮಸೀದಿ ಮುಂದೆ ಹೋಗಬೇಡಿ ಅಂತಾರೆ. ಅದೇ ಮುಸ್ಲಿಂ ಮೆರವಣಿಗೆ ಹಿಂದೂ ದೇವಸ್ಥಾನ ಮುಂದೆ ಹೋಗಬೇಡಿ ಎಂದು ಹೇಳಿದ್ದಾರಾ. ಈ ಬುದ್ಧಿಯಿಂದಲೇ ಕಾಂಗ್ರೆಸ್ನ್ನು ಹಿಂದೂ ವಿರೋಧಿ ಅನ್ನೋದು. ಇಟಲಿಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೈಯ್ಯಲ್ಲಿ ಹರಿಯುತ್ತಿರುವುದು ಹಿಂದೂ ವಿರೋಧಿ ರಕ್ತ ಎಂದು ಟೀಕಿಸಿದರು.
ಹಿಂದೂಗಳನ್ನು ಹತ್ತಿಕ್ಕಿವುದು ಬೇಡ. ಕಾಂಗ್ರೆಸ್ನವರು ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಉರ್ಮ ಖಲೀದ್ ನ್ಯಾಷನಲಿಸ್ಟ್ ಎನ್ನುತಾರೆ ಇವರು. ಉರ್ಮ ಖಲೀದ್ ಎಷ್ಟು ನ್ಯಾಷನಲಿಸ್ಟ್ ಬಿ.ಕೆ.ಹರಿಪ್ರಸಾದ್ ಕೂಡ ಅಷ್ಟೇ ನ್ಯಾಷಲಿಸ್ಟ್. ಜನ ಉಮರ್ ಖಲೀದ್ನನ್ನು ಭಯೋತ್ಪಾದಕ ಎನ್ನುತ್ತಾರೆ. ನೀವೂ ಅವರ ರೀತಿಯೇ ಅನ್ನೋಕೆ ಆಗುತ್ತಾ ಎಂದು ವ್ಯಂಗ್ಯವಾಡಿದರು.