ಅರಸೀಕೆರೆ: ಗೋಶಾಲೆಯಲ್ಲಿ ಸೇವೆ ಮತ್ತು ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ಕೊಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹೆಸರನ್ನು ಹೇಳಲು ಇಚ್ಛಿಸದ ದಾನಿಗಳಿಗೆ ಅಭಿನಂದನೆಗಳು ಎಂದು ಸಿಆರ್ಪಿ ವಿಷ್ಣುವರ್ಧನ್ ಹೇಳಿದರು.
ಗೋಶಾಲೆ ಆಡಳಿತ ಅಧಿಕಾರಿ ಮೋಹನ್ ಕುಮಾರ್ ಗೋವುಗಳನ್ನು ಮಾಲೀಕರು ತಮಗೆ ಸಾಕಲಾಗದ ಗೋವುಗಳನ್ನು ಗೋಶಾಲೆಗೆ ತಂದುಬಿಡುತ್ತಾರೆ. ಅವುಗಳನ್ನು ನಿರ್ವಹಿಸಲು ನಾವು ದಾನಿಗಳಿಂದ ಸಹಕಾರವನ್ನು ಪಡೆಯಬೇಕಾಗುತ್ತದೆ. ಕಲಿಕಾ ಉಪಕರಣಗಳನ್ನು ಕೊಟ್ಟಿರುವ ಹೆಸರು ಹೇಳಲಿಚ್ಛಿಸದ ದಾನಿಗಳು ಒಂದು ಗೋವಿನ ನಿರ್ವಹಣೆಯ ದತ್ತು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ಮನೆಗಳ ಶುಭ ಕಾರ್ಯಗಳಲ್ಲಿ ಮತ್ತು ಹುಟ್ಟುಹಬ್ಬದ ನೆನಪಿನಲ್ಲಿ ಗೋ ಶಾಲೆಗೆ ಬಂದು ಗೋವುಗಳಿಗೆ ಸೇವೆ ಸಲ್ಲಿಸಬಹುದು ಎಂದರು.
ಶ್ರೀ ಸಂಕಟಮೋಚನಾ ಪಾರ್ಶ್ವಭೈರವ ದೇವಾಲಯ ಸಮಿತಿ ಸದಸ್ಯ ಚೇತನ್ ಜೈನ್ ಶ್ರೀ ಕ್ಷೇತ್ರಕ್ಕೆ ಮಕ್ಕಳನ್ನು ಕರೆದುಕೊಂಡು ಬನ್ನಿ ಗೋ ಶಾಲೆಗಳನ್ನು ನೋಡಿದಂತೆ ಆಗುತ್ತದೆ ಎಂದ ಅವರು ನಾನು ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಈ ಶಾಲೆಗೆ ನಮ್ಮ ಸಹಕಾರ ಇರುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಕರಿಯಮ್ಮ ಸರಕಾರಿ ಶಾಲೆಗಳಿಗೆ ದಾನಿಗಳು ಸ್ಪಂದಿಸಿದಾಗ ಕರ್ತವ್ಯದಲ್ಲಿ ನಮಗೆ ಇನ್ನೂ ಹೆಚ್ಚಿನ ಸ್ಫೂರ್ತಿ ಬರುತ್ತದೆ. ನಿಮ್ಮಸಹಕಾರ ಸದಾ ಇರಲಿ ಎಂದು ಆಶಿಸಿದರು.