ಹಲವರಿಗೆ ಜೀವ ದಾನ ಮಾಡಿದ ಪ್ರಣವ್ ಹೆಗ್ಡೆ ಕುಟುಂಬ

KannadaprabhaNewsNetwork |  
Published : Aug 29, 2026, 01:45 AM IST
28ಪ್ರಣವ್‌ | Kannada Prabha

ಸಾರಾಂಶ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದ ಮಣಿಪಾಲದ ಪ್ರಣವ್ ಹೆಗ್ಡೆ (41) ಅವರ ಕುಟುಂಬವು ಮೃತರ ಅಂಗಾಂಗಗಳನ್ನು ದಾನ ಮಾಡಿ ಹಲವು ರೋಗಿಗಳಿಗೆ ಹೊಸ ಬದುಕು ನೀಡಿದೆ.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದ ಮಣಿಪಾಲದ ಪ್ರಣವ್ ಹೆಗ್ಡೆ (41) ಅವರ ಕುಟುಂಬವು ಮೃತರ ಅಂಗಾಂಗಗಳನ್ನು ದಾನ ಮಾಡಿ ಹಲವು ರೋಗಿಗಳಿಗೆ ಹೊಸ ಬದುಕು ನೀಡಿದೆ.

ಪ್ರಣವ್ ಹೆಗ್ಡೆ ಅವರನ್ನು ಆ. 17ರಂದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದ ನಡುವೆಯೂ ಅವರ ಆರೋಗ್ಯ ಸುಧಾರಿಸದೆ ಗುರುವಾರ ಅವರ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ಘೋಷಿಸಲಾಯಿತು. ಮಾನವ ಅಂಗಾಂಗ ಕಸಿ ಕಾಯಿದೆ-1994ರ ಪ್ರಕಾರ, ಅಧಿಕೃತ ತಜ್ಞ ವೈದ್ಯರ ತಂಡ ಎರಡು ಬಾರಿ ಮೆದುಳು ನಿಷ್ಕ್ರಿಯತೆಯನ್ನು ಖಚಿತಪಡಿಸಿತು.

ಬಳಿಕ ಕುಟುಂಬದವರು ಸ್ವಇಚ್ಛೆಯಿಂದ ಮುಂದೆ ಬಂದು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಈ ಕುಟುಂಬ ಇತರರಿಗೆ ಜೀವ ನೀಡುವ ಅಪರೂಪದ ಧೈರ್ಯ ಮತ್ತು ವಿಶಾಲ ಮನಸ್ಸನ್ನು ತೋರಿಸಿತು.

ಜೀವಸಾರ್ಥಕತೆ ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಬೆಂಗಳೂರು ಇವರ ಸಮನ್ವಯದೊಂದಿಗೆ ಅಂಗಾಂಗಗಳನ್ನು ಹಂಚಿಕೆ ಮಾಡಲಾಯಿತು. ಯಕೃತ್ ಮತ್ತು ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕಳುಹಿಸಲಾಯಿತು. ಕಣ್ಣಿನ ಪೊರೆಗಳನ್ನು (ಕಾರ್ನಿಯಾ) ಅತ್ತಾವರದ ಕೆಎಂಸಿಗೆ ನೀಡಲಾಯಿತು. ಕಸಿಗಾಗಿ ಕಾಯುತ್ತಿದ್ದ ನೋಂದಾಯಿತ ರೋಗಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆ ಒಂದು ಮೂತ್ರಪಿಂಡವನ್ನು ಉಳಿಸಿಕೊಂಡಿತು.ಮಾಹೆ ಬೋಧನಾ ಆಸ್ಪತ್ರೆಗಳ ಸಿಇಓ ಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಕುಟುಂಬದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಭರವಸೆ ಮೂಡಿಸಿದ ಪ್ರಣವ್ ಹೆಗ್ಡೆ ಅವರ ಕುಟುಂಬದ ಈ ಉದಾರ ನಡೆಗೆ ಆಸ್ಪತ್ರೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ರಲ್ಲಿ ಉಡುಪಿಯಲ್ಲಿ ವಿಶ್ವ ತುಳುವ ಮಹಾಸಭೆ
ಪತ್ರಕರ್ತರ ಮೇಲೆ ಹಲ್ಲೆ ಖಂಡನೀಯ: ಸುಧೀರ್‌ ಕುಮಾರ್‌