ಆಹಾರ- ಆತಿಥ್ಯೋದ್ಯಮ ಕ್ಷೇತ್ರ ಜಾಗತಿಕ ಉದ್ಯೋಗಾವಕಾಶಗಳ ಗಣಿ ಇದ್ದಂತೆ

KannadaprabhaNewsNetwork |  
Published : Mar 19, 2026, 01:15 AM IST
38 | Kannada Prabha

ಸಾರಾಂಶ

ಭಾರತೀಯ ಬಾಣಸಿಗರಿಗೆ ಇಂದು ವಿಶ್ವ ಮಟ್ಟದಲ್ಲಿ ಅವರ ಕೌಶಲ್ಯದ ಕಾರಣಕ್ಕೆ ಬಹಳ ಬೇಡಿಕೆ ಇದೆ. ಕೃತಕ ಬುದ್ದಿಮತ್ತೆ ಈ ಕ್ಷೇತ್ರಕ್ಕೆ ತಟ್ಟುವುದಿಲ್ಲ. ಆಹಾರ ವಿಜ್ಞಾನ ವಿದ್ಯಾರ್ಥಿಗಳು ಈ ಕೋರ್ಸ್ ಮೂಲಕ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ತರಬೇತಿ-ಅನುಭವ ಹೊಂದಿರುವ ಭಾರತೀಯ ಬಾಣಸಿಗರಿಗೆ ಇಂದು ವಿಶ್ವಾದ್ಯಂತ ಅಪಾರ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿದ್ದು, ಯುವ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈಸೂರು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕಲಿನರಿ (ಎಂಐಎಚ್ಎಂಸಿ) ಬಾಣಸಿಗ ಸತೀಶ್ ನಾಗರಾಜ್ ಹೇಳಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಎಂಐಎಚ್ಎಂಸಿನಲ್ಲಿ ಆಹಾರ- ಆತಿಥ್ಯೋದ್ಯಮ ಕ್ಷೇತ್ರದಲ್ಲಿ ಲಭ್ಯವಿರುವ ವೃತ್ತಿಪರ ಕೋರ್ಸ್ ಗಳು ಹಾಗೂ ಜಾಗತಿಕ ಅವಕಾಶಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರತೀಯ ಬಾಣಸಿಗರಿಗೆ ಇಂದು ವಿಶ್ವ ಮಟ್ಟದಲ್ಲಿ ಅವರ ಕೌಶಲ್ಯದ ಕಾರಣಕ್ಕೆ ಬಹಳ ಬೇಡಿಕೆ ಇದೆ. ಕೃತಕ ಬುದ್ದಿಮತ್ತೆ ಈ ಕ್ಷೇತ್ರಕ್ಕೆ ತಟ್ಟುವುದಿಲ್ಲ. ಆಹಾರ ವಿಜ್ಞಾನ ವಿದ್ಯಾರ್ಥಿಗಳು ಈ ಕೋರ್ಸ್ ಮೂಲಕ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು ಎಂದರು.

ಇಂದು ಪ್ರತಿಯೊಬ್ಬರೂ ಕೂಡಾ ತಾವು ಸೇವಿಸುವ ಆಹಾರ, ಡಯಟ್, ಪೌಷ್ಟಿಕಾಂಶಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದರೆ. ಇದು, ಈ ಕ್ಷೇತ್ರದಲ್ಲಿನ ಉದ್ಯೋಗಾವಕಾಶವನ್ನು ಇನ್ನಷ್ಟು ಹೆಚ್ಚಿಸಿದೆ. ಮೆನು ಪ್ಲಾನರ್ ನಿಂದ ಆರಂಭಗೊಳ್ಳುವ ಉದ್ಯೋಗಾವಕಾಶಕ್ಕೆ ಅವಾಕಾಶಗಳು ಉಜ್ವಲವಾಗಿವೆ. ಕಾರ್ಪೊರೇಟ್ ಕಿಚನ್, ಡಯಟ್ ಚೆಫ್ ಗಳು, ಹೀಗೆ ಈ ಕ್ಷೇತ್ರ ವಿಸ್ತೃತಗೊಳ್ಳುತ್ತಿದೆ ಎಂದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆಹಾರ ವಿಜ್ಞಾನ ಹಾಗೂ ಪೌಷ್ಟಿಕತೆ ವಿಭಾಗದ ಪ್ರಾಧ್ಯಾಪಕಿ ಡಾ. ಜೆ. ರಾಜೇಶ್ವರಿ ಮಾತನಾಡಿ, ಆಹಾರ-ಪೌಷ್ಟಿಕಾಂಶ ಕ್ಷೇತ್ರ ಅನೇಕ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ವಿದ್ಯಾರ್ಥಿನಿಯರು ತಮ್ಮ ಕೌಶಲ್ಯ ವೃದ್ಧಿಸಿಕೊಂಡರೆ ಅವರಿಗೆ ಅಪಾರ ಉದ್ಯೋಗವಾಕಾಶ ದೊರೆಯುತ್ತದೆ ಎಂದರು.

ನೀವು ಕೌಶಲ್ಯ ಬೆಳೆಸಿಕೊಂಡರೆ ನಿಮ್ಮ ಕನಸುಗಳನ್ನು ನನಸಾಗಿಸುವುದು ಕಷ್ಟವಲ್ಲ ಎಂದರು.

ಎಂಐಎಚ್ಎಂಸಿ ಆಡಳಿತ ಮಂಡಳಿಯ ಅರ್ಪಿತ ಧರ್ಮವೀರ್ ಮಾತನಾಡಿ, ಆಹಾರ ವಿಜ್ಞಾನ ಕ್ಷೇತ್ರ ಮಹಿಳೆಯರಿಗೆ ಹೆಚ್ಚು ಸೂಕ್ತ.ಅವರಿಗೆ ಈ ಕ್ಷೇತ್ರದ ಕೌಶಲ್ಯಗಳನ್ನು ಕಲಿಯುವುದು ಸುಲಭ ಏಕೆಂದರೆ ಅದು ರಕ್ತಗತವಾಗಿ ಬಂದಿರುತ್ತದೆ ಎಂದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆಹಾರ ವಿಜ್ಞಾನ ಹಾಗೂ ಪೌಷ್ಟಿಕತೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ. ನಮ್ರತಾ ಇದ್ದರು. ಎಂಐಎಚ್ಎಂಸಿ ಪ್ರಾಂಶುಪಾಲ ವಿಕ್ಟರ್ ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯಂಗ ಸ್ನಾನಕ್ಕೆ ಒತ್ತು ನೀಡುವುದು ಅಗತ್ಯ: ಡಾ.ಚಂದ್ರಕಾಂತ್ ನಾಗಸಮುದ್ರ
2024ನೇ ಸಾಲಿನ ಶ್ರೀಶಿವರಾತ್ರೀಶ್ವರ ಪ್ರಶಸ್ತಿಗೆ ಪ್ರೊ.ಬಾಲಚಂದ್ರ ಜಯಶೆಟ್ಟಿ ಆಯ್ಕೆ