ಧಾರವಾಡ: ಎಲ್ಲ ಧರ್ಮಗಳ ಮೂಲತತ್ವ ಒಂದೇ. ಅವುಗಳು ಕಾಲ ಕಾಲಕ್ಕೆ ಮಾರ್ಪಾಡಾಗಿ ಜೀವನ ಕ್ರಮದಲ್ಲಿ ಬದಲಾಗುತ್ತಾ ಹೋಗಬಹುದು. ಪ್ರತಿ ಮಾನವ ದೇವರನ್ನು ಪ್ರೀತಿಸಿ ಐಕ್ಯವಾಗುವುದು ಜೀವನದ ಗುರಿ. ಅದರಲ್ಲಿಯೇ ಮೋಕ್ಷ ಇದೆ ಎಂದು ಬೆಂಗಳೂರಿನ ಮೆಹರಬಾಬಾ ವಿಶ್ವ ಆಧ್ಯಾತ್ಮಿಕ ಕೇಂದ್ರದ ನರ್ಮದಾ ನಾಗೇಶ ಹೇಳಿದರು.
ಕವಿ, ಸಾಹಿತಿ, ಆಧ್ಯಾತ್ಮಿಕ ಚಿಂತಕ ಎ.ಎ.ದರ್ಗಾ ಅವರು ಮೆಹರಬಾಬಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶ್ರೇಷ್ಠ ದಾರ್ಶನಿಕರಾದ ಮೆಹರಬಾಬಾರವರ ಮಾನವೀಯ ಮೌಲ್ಯಗಳು ನಮಗೆಲ್ಲ ಅನುಕರಣೀಯ. ಸಮಾಜದಲ್ಲಿ ಜಾತಿ,ಮತ, ಪಂಥ ಎಂಬ ಭೇದಗಳನ್ನು ಧಿಕ್ಕರಿಸಿ ಸೌಹಾರ್ಧಯುತವಾಗಿ ಸಾಮರಸ್ಯದಿಂದ ನಾವೆಲ್ಲ ಬಾಳಬೇಕು ಎಂದರು.
ನಾರಾಯಣಪುರ ಲೈನ್ಸ್ ಸ್ಕೂಲ್ನ ಪ್ರಾಂಶುಪಾಲರಾದ ಶಶಿಕಲಾ ಹೆಬ್ಳಿಕರ್, ಕವಿವ ಸಂಘದ ಅಧ್ಯಕ್ಷ ಚಂದ್ರಕಾತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿ ದಾನಿ ಯು.ಎಸ್. ಕುನ್ನಿಭಾವಿ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಪೂಜಾರ ವಂದಿಸಿದರು.