ಮಹೇಶ ಛಬ್ಬಿ ಗದಗ
ಪ್ರಸಕ್ತ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷೆ ಇದ್ದು, ಸದ್ಯ ರಾಜ್ಯ, ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಕೃಷಿ ಚಟುವಟಿಕೆ ಗರಿಗೆದರಿದೆ. ಬೀಜ ಬಿತ್ತನೆಗೆ ಉತ್ಸಾಹದಲ್ಲಿ ಹೊಲ ಹದಗೊಳಿಸಿದ ರೈತರಿಗೆ ಬೀಜ, ಗೊಬ್ಬರ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ 5 ಕೆಜಿ ಬೀಜದ ಪ್ಯಾಕೆಟ್ ಮೇಲೆ 250 ರು. ವರೆಗೆ ಹೆಚ್ಚಳವಾಗಿದೆ.
ಅತಿವೃಷ್ಟಿ, ಅನಾವೃಷ್ಟಿ, ಬರ, ಅಸಮರ್ಪಕ ಬೆಳೆ ಪರಿಹಾರ ಸೇರಿದಂತೆ ನಾನಾ ಕಾರಣಗಳಿಂದ ರೈತ ಸಮುದಾಯ ಸಂಕಷ್ಟ ಎದುರಿಸುತ್ತಿದೆ. ಪ್ರಸಕ್ತ ಉತ್ತಮ ಮಳೆ ಮುನ್ಸೂಚನೆ ಸಿಕ್ಕಿದ್ದು, ರೈತರು ಉತ್ಸಾಹದಲ್ಲಿದ್ದಾರೆ. ಬಿತ್ತನೆ ಬೀಜ ಖರೀದಿಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಿದ್ದಾರೆ. ಆದರೆ ಬಿತ್ತನೆ ಬೀಜದ ದರ ಕೇಳಿ ಕಂಗಾಲಾಗಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಮುಂಗಾರು ಬೀಜ ಬಿತ್ತನೆಗೆ ಅನುಕೂಲವಾಗುವಂತೆ ದರ ನಿಗದಿಪಡಿಸಿ, ರೈತರ ಹಿತ ಕಾಪಾಡಬೇಕಿತ್ತು. ಆದರೆ ಏಕಾಏಕಿ ದರ ಹೆಚ್ಚಳ ರೈತರ ನಿದ್ದೆಗೆಡಿಸಿದೆ.ಸ್ಪಿಕ್ ಡಿಎಪಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ:ರೈತರು ಬೀಜ ಬಿತ್ತನೆಗೆ ಹೊಲ ಸಿದ್ಧಗೊಳಿಸಿ, ಬಿತ್ತುವ ತವಕದಲ್ಲಿದ್ದಾರೆ. ಆದರೆ ಬಿತ್ತನೆಗೆ ಸ್ಪಿಕ್ ಡಿಎಪಿ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ. ಬೇರೆ, ಬೇರೆ ತಾಲೂಕು, ಜಿಲ್ಲೆಗಳಿಂದ ಸ್ಪಿಕ್ ಡಿಎಪಿ ಗೊಬ್ಬರವನ್ನು ಹೆಚ್ಚಿನ ದರ ನೀಡಿ ತರುವಂತಹ ಸ್ಥಿತಿ ನಿರ್ಮಾಣವಾಗಿದೆ.
2023ರಲ್ಲಿ ಬೀಜದ ದರಬಿತ್ತನೆ ಬೀಜ ಸಾಮಾನ್ಯ ವರ್ಗ ಎಸ್ಸಿ, ಎಸ್ಟಿಹೆಸರು 501 438ತೊಗರಿ 525 462ಜೋಳ. 202 157ಬಾಕ್ಸ್...
ಬಿತ್ತನೆ ಬೀಜಪೂರ್ಣ ದರಸಾಮಾನ್ಯ ವರ್ಗ (ಸಬ್ಸಿಡಿ)ಎಸ್ಸಿ-ಎಸ್ಟಿ (ಸಬ್ಸಿಡಿ)
ತೊಗರಿ895 (5 ಕೆಜಿ)770707.5
ಬಿತ್ತನೆ ಗುರಿ:ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1.25 ಲಕ್ಷ ಹೆಕ್ಟೆರ್ ಹೆಸರು, ಮೆಕ್ಕೆ ಜೋಳ 1 ಲಕ್ಷ ಹೆ, 30 ಸಾವಿರ ಹೆ.ಶೇಂಗಾ, 11 ಸಾವಿರ ಹೆ.ಸೂರ್ಯಕಾಂತಿ ಹಾಗೂ 20 ಸಾವಿರ ಹೆ. ಹತ್ತಿ ಸೇರಿದಂತೆ ಒಟ್ಟು 3ಲಕ್ಷ 1 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರದ ಗುರಿ ಹೊಂದಿದೆ. ವಿವಿಧ ಗೊಬ್ಬರ ದಾಸ್ತಾನು:ಜಿಲ್ಲೆಯಲ್ಲಿ ಯೂರಿಯಾ 7732.79 ಮೆ.ಟನ್, ಡಿಎಪಿ 2574.65 ಮೆ.ಟನ್, ಎಂಓಪಿ 670.20 ಮೆ.ಟನ್, ಎಸ್.ಎಸ್.ಪಿ 174.10 ಮೆ.ಟನ್ ಹಾಗೂ ಇತರೆ ಸಂಯುಕ್ತ ರಸಗೊಬ್ಬರ 4435.19 ಮೆ.ಟನ್ ಸೇರಿ ಒಟ್ಟಾರೆ 15586.93 ಮೆ.ಟನ್ಗಳಷ್ಟು ವಿವಿಧ ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರ ಸದ್ಯದ ರೈತರ ಪರಿಸ್ಥಿತಿಯನ್ನು ಅರಿತು ದರ ನಿಗದಿಪಡಿಸಬೇಕಿತ್ತು. ಜತೆಗೆ ಬೀಜ ಬಿತ್ತನೆಗೆ ರೈತರ ಬೇಡಿಕೆಗೆ ತಕ್ಕಂತೆ ಸ್ಪಿಕ್ ಡಿಎಪಿ ಗೊಬ್ಬರವನ್ನು ಸ್ಥಳೀಯ ಮಟ್ಟದಲ್ಲಿಯೇ ಸಿಗುವಂತೆ ಕ್ರಮ ಕೈಗೊಳ್ಳಬೇಕಿತ್ತು. ಸಕಾಲದಲ್ಲಿ ಗೊಬ್ಬರ ಸಿಗದೇ ಹೋದರೆ ಬೀಜ ಬಿತ್ತನೆಗೆ ಹಿನ್ನೆಡೆಯಾಗುತ್ತದೆ. ಮುಂದೆ ಇಳುವರಿಯಲ್ಲೂ ಕುಂಠಿತವಾಗುವುದರಿಂದ ರೈತರಿಗೆ ನಷ್ಟವಾಗುತ್ತದೆ ಎನ್ನುತ್ತಾರೆ ರೈತರು.