ಕನ್ನಡಪ್ರಭ ವಾರ್ತೆ ಶಿರಾ
ಅವರು ತಾಲೂಕು ಯಲಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಡಿಗರದಾಸರಹಳ್ಳಿ ಗ್ರಾಮದಲ್ಲಿ ಜರುಗಿದ ಸ್ಥಿರ ನಾಗಬಿಂಬ ಪ್ರತಿಷ್ಠಾಪನಾ ಮಹೋತ್ಸವ ಕಳಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ದೇವತಾ ಉತ್ಸವ, ಪೂಜಾ ಕೈಂಕರ್ಯ ನಡೆಯುತ್ತಾ ಬರುತ್ತಿದ್ದು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ, ಎಲ್ಲಾ ಜನಸಾಮಾನ್ಯರ ನೋವು, ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಮನಸ್ಸಿಗೆ ಶಾಂತಿ ನೆಮ್ಮದಿ ಹಾಗೂ ಜೀವನದಲ್ಲಿ ಸುಭಿಕ್ಷೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಣ್ಣ, ಮಾಜಿ ಸದಸ್ಯ ಹನುಮಂತರಾಜು, ಗುತ್ತಯ್ಯ, ರಾಮು, ಗ್ರಾಮ ಪಂ. ಸದಸ್ಯೆ ಸುಷ್ಮಾ ಮೋಹನ್, ಬಾಲರಾಜು, ತಿಮ್ಮಪ್ಪ, ಗೋವಿಂದರಾಜು, ಬಲರಾಮ, ಸುರೇಶ್, ಶಿವರಾಜು, ಆರ್ಯ ಈಡಿಗರ ಕುಲಬಾಂಧವರು ಹಾಗೂ ಗ್ರಾಮಸ್ಥರು ಹಾಜರಿದ್ದರು.