ನಾಡವರ ಭಾಷೆ, ಜೀವನ ವಿಧಾನ, ಸಂಸ್ಕೃತಿ ವಿಶಿಷ್ಟ: ಲೋಕಾಯುಕ್ತ ಡಿವೈಎಸ್ಪಿ ಧನ್ಯಾ

KannadaprabhaNewsNetwork |  
Published : Dec 23, 2025, 02:30 AM IST
ಎಚ್‌22.12-ಡಿಎನ್‌ಡಿ2:  ನಾಡವರ ಸಂಘ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತರ ಅಭಿನಂದನಾ ಸಮಾರಂಭ | Kannada Prabha

ಸಾರಾಂಶ

ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಕಿರಿದಾಗಿರುವ ನಾಡವರ ಸಮುದಾಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ತನ್ನದೇ ಆದ ಹಿರಿಮೆಯನ್ನು ಹೊಂದಿರುವಂತಹ ಸಮಾಜವಾಗಿದೆ. ನಾಡವರ ಭಾಷೆ, ಜೀವನ ವಿಧಾನ ಹಾಗೂ ಸಂಸ್ಕೃತಿ ಅತ್ಯಂತ ವಿಶಿಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಕಿರಿದಾಗಿರುವ ನಾಡವರ ಸಮುದಾಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ತನ್ನದೇ ಆದ ಹಿರಿಮೆಯನ್ನು ಹೊಂದಿರುವಂತಹ ಸಮಾಜವಾಗಿದೆ. ನಾಡವರ ಭಾಷೆ, ಜೀವನ ವಿಧಾನ ಹಾಗೂ ಸಂಸ್ಕೃತಿ ಅತ್ಯಂತ ವಿಶಿಷ್ಟವಾಗಿದೆ ಎಂದು ಕಾರವಾರದ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ಎನ್. ನಾಯಕ ಹೇಳಿದರು.

ನಗರದ ನಾಡವರ ಸಂಘ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದು ತಂತ್ರಜ್ಞಾನ ನಮಗೆ ಅತಿ ಅವಶ್ಯ. ಹಾಗೆಂದು ನಾವು ಮತ್ತು ನಮ್ಮ ಮಕ್ಕಳು ಮೊಬೈಲ್‌ನಲ್ಲಿಯೇ ಕಳೆದು ಹೋಗಬಾರದು. ಮಕ್ಕಳಿಗೆ ಸಾಮಾನ್ಯ ಜ್ಞಾನದ ಅರಿವನ್ನು ನೀಡಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಕೂಡ ನೀಡಬೇಕು ಎಂದರು.

ಕಾರವಾರದ ದಂತ ವೈದ್ಯ ಡಾ. ಸಮೀರ್ ಕುಮಾರ್ ಟಿ. ನಾಯಕ ಮಾತನಾಡಿ, ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸುವುದು ಹಾಗೂ ನಿವೃತ್ತರನ್ನು ಅಭಿನಂದಿಸುವುದು ನಿಜಕ್ಕೂ ಕೂಡ ಶ್ಲಾಘನಾರ್ಹ ಕಾರ್ಯವಾಗಿದೆ. ನಾಡವರ ಸಮಾಜದ ಹಿರಿಮೆ ಹಾಗೂ ಆಡು ಭಾಷೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಸಮಾಜದ ಹಿರಿಯ ಪ್ರಕಾಶ ಬಿ. ನಾಯಕ ಸಾಂದರ್ಭಿಕವಾಗಿ ಮಾತನಾಡಿದರು. ನಾಡವರ ಸಂಘದ ಅಧ್ಯಕ್ಷ ಸುಭಾಷ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಸುರೇಶ ನಾಯಕ, ವೆಂಕಮ್ಮ ಗಾಂವಕರ, ಶ್ಯಾಮಲಾ ನಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಆರಾಧನಾ ಬಸವರಾಜ್, ಸೃಷ್ಟಿ ಪ್ರವೀಣ ನಾಯಕ, ದ್ವಿತಿ ದೀಪಕ ನಾಯಕ, ಗಗನ ರವಿಕುಮಾರ್ ನಾಯಕ, ಅಕುಲ ಮಂಜುನಾಥ ನಾಯಕರನ್ನು ಪುರಸ್ಕರಿಸಲಾಯಿತು. ಅತಿಥಿಗಳಾಗಿದ್ದ ಧನ್ಯಾ ನಾಯಕ ಹಾಗೂ ಸಮೀರ್ ನಾಯಕರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ವೆಂಕಮ್ಮ ಗಾಂವಕರ ಹಾಗೂ ವಿದ್ಯಾರ್ಥಿಗಳ ಪರವಾಗಿ ಆರಾಧನಾ ಬಸವರಾಜ ಮಾತನಾಡಿದರು.

ಸಂಘದ ಖಜಾಂಚಿ ರವಿ ಗಾಂವಕರ ಸ್ವಾಗತಿಸಿದರು. ಉಪಾಧ್ಯಕ್ಷೆ ಜೀವನಾ ನಾಯಕ ಪ್ರಾಸ್ತಾವಿಕ ಮಾತುಗಳಾಡಿದರು. ಕಾರ್ಯದರ್ಶಿ ಮಿಥುನ ನಾಯಕ ವರದಿ ವಾಚಿಸಿದರು. ಮಾನ್ಯತಾ ಪ್ರಾರ್ಥಿಸಿದರು. ನಿರುಪಮಾ ನಾಯಕ, ದೀಪ್ತಿ ನಾಯಕ, ಮೌರ್ಯ ನಾಯಕ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌