ಆರುಂಡಿಯಲ್ಲಿ ಚಿರತೆ ಓಡಾಡಿದಂತೆ ಪೋಟೋ ಸೃಷ್ಟಿಸಿದ ಕಿಡಿಗೇಡಿಗಳು

KannadaprabhaNewsNetwork |  
Published : Oct 28, 2024, 12:52 AM IST
ಪಟ್ಟಣದ ಸಮೀಪದ ಆರುಂಡಿ ಗ್ರಾಮದ ಬಸ್ಸ್ ನಿಲ್ದಾಣದ ಬಳಿ ಚಿರತೆ ಓಡಾಡಿದಂತೆ ಕಾಣುವ ನಕಲಿ ಚಿತ್ರವನ್ನು ಕೆಲ ಯುವಕರು ಸೃಷ್ಟಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ಗ್ರಾಮದ ಜನರನ್ನು ಆಂತಕಗೊಳಿಸಿದ ಪ್ರಸಂಗ ನಡೆದಿದೆ. | Kannada Prabha

ಸಾರಾಂಶ

ನ್ಯಾಮತಿ ಪಟ್ಟಣ ಸಮೀಪದ ಆರುಂಡಿ ಗ್ರಾಮದ ಬಸ್‌ ನಿಲ್ದಾಣ ಬಳಿ ಚಿರತೆ ಓಡಾಡಿದಂತೆ ಕಾಣುವ ನಕಲಿ ಚಿತ್ರವನ್ನು ಕೆಲ ಯುವಕರು ಸೃಷ್ಟಿಸಿ ಜಾಲತಾಣಗಳಲ್ಲಿ ಹರಿಬಿಟ್ಟದ್ದಾರೆ. ಚಿರತೆ ಎಂಬ ವಿಚಾರದಿಂದ ಗ್ರಾಮಸ್ಥರು ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ.

- ಯಾವುದೇ ಚಿರತೆ ಇಲ್ಲ: ಹೊನ್ನಾಳಿ ವಲಯ ಅರಣ್ಯ ಅಧಿಕಾರಿ ಕಿಶೋರ್‌ ನಾಯ್ಕ ಹೇಳಿಕೆ

- - - - ಗ್ರಾಮಸ್ಥರ ಆತಂಕ ಹಿನ್ನೆಲೆ ಕಾಯಾಚರಣೆ ನಡೆಸಿದ ಅರಣ್ಯ ಇಲಾಖೆ - ಚಿರತೆ ಜಾಡು ಪತ್ತೆಯಾಗದ ಹಿನ್ನೆಲೆ ನಕಲಿ ಫೋಟೋ ಎಂಬ ನಿರ್ಧಾರ

- ವಾಟ್ಸಪ್‌ಗೆ ಭೀತಿ ಹುಟ್ಟಿಸುವ ಇಂಥ ಪೋಟೋ-ವಿಡಿಯೋ ಹರಿಯಬಿಟ್ಟರೆ ಕ್ರಮದ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣ ಸಮೀಪದ ಆರುಂಡಿ ಗ್ರಾಮದ ಬಸ್‌ ನಿಲ್ದಾಣ ಬಳಿ ಚಿರತೆ ಓಡಾಡಿದಂತೆ ಕಾಣುವ ನಕಲಿ ಚಿತ್ರವನ್ನು ಕೆಲ ಯುವಕರು ಸೃಷ್ಟಿಸಿ ಜಾಲತಾಣಗಳಲ್ಲಿ ಹರಿಬಿಟ್ಟದ್ದಾರೆ. ಚಿರತೆ ಎಂಬ ವಿಚಾರದಿಂದ ಗ್ರಾಮಸ್ಥರು ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ.

ಕೆಲ ಕಿಡಿಗೇಡಿ ಯುವಕರು ಆರುಂಡಿ ಗ್ರಾಮದ ಬಸ್‌ ನಿಲ್ದಾಣ ಬಳಿ ಚಿರತೆ ಹೋಲುವಂಥ ಗೊಂಬೆಯನ್ನು ತಂದಿಟ್ಟು, ಮುಂಜಾನೆ ಸಮಯದಲ್ಲಿ ಪೋಟೋ ತೆಗೆದು ವಾಟ್ಸಪ್‌ನಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಚಾರವು ಬೆಳಗಾಗುತ್ತಿದ್ದಂತೆ ಗ್ರಾಮದಲ್ಲೆಲ್ಲ ಹರಡಿ ಗ್ರಾಮದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು.

ಚಿರತೆ-ಫೋಟೋ ವಿಚಾರ ಅರಣ್ಯ ಇಲಾಖೆ ಗಮನಕ್ಕೆ ಬಂದ ಕೂಡಲೇ ಚಿರತೆ ಪತ್ತೆಗಾಗಿ ಕಾರ್ಯಾಚರಣೆ ಸಹ ನಡೆಸಿದ್ದಾರೆ. ಆದರೆ, ಚಿರತೆ ಪತ್ತೆಯಾಗದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಚಿರತೆಯ ಫೋಟೋ ನಕಲಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಹೊನ್ನಾಳಿ ವಲಯ ಅರಣ್ಯ ಅಧಿಕಾರಿ ಕಿಶೋರ್‌ ನಾಯ್ಕ ಈ ಕುರಿತು ಪ್ರತಿಕ್ರಿಯಿಸಿದ್ದು, ಜನರಲ್ಲಿ ಭೀತಿ ಹುಟ್ಟಿಸುವ ಇಂಥ ಫೋಟೋ- ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೊದಲು ಪರಿಶೀಲನೆ ನಡೆಸಬೇಕು. ಜನರು ಸಹ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಆರುಂಡಿ ಗ್ರಾಮದಲ್ಲಿ ಯಾವುದೇ ಚಿರತೆಯಿಲ್ಲ, ಗ್ರಾಮಸ್ಥರು ಆತಂಕಪಡಬಾರದು. ಕಿಡಿಗೇಡಿಗಳು ಮಾಡುವ ಕೀಟಲೆಗೆ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಇನ್ನೊಮ್ಮೆ ಈ ರೀತಿ ನಕಲಿ ಫೋಟೋ- ವಿಡಿಯೋ ಗಳನ್ನು ಅಪ್‌ಲೋಡ್‌ ಮಾಡುವವರ ವಿರುದ್ಧ ದೂರು ದಾಖಲಿಸಿ, ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

- - - (-ಫೋಟೋ): ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಟೋ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ