ಶೃಂಗೇರಿಗೆ ಹರಿದು ಬರುತ್ತಿದೆ ಜನಸಾಗರ

KannadaprabhaNewsNetwork |  
Published : May 11, 2025, 11:56 PM ISTUpdated : May 11, 2025, 11:57 PM IST
ಿುುು | Kannada Prabha

ಸಾರಾಂಶ

ಶೃಂಗೇರಿ: ಕಳೆದ ಕೆಲ ದಿನಗಳಿಂದ ಶೃಂಗೇರಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಕಂಡುಬರುತ್ತಿದ್ದು, ವಾರದ ಕೊನೆ ದಿನವಾದ ಭಾನುವಾರ ಬೆಳಿಗ್ಗೆಯಿಂದಲೇ ಜನಸಾಗರ ಕಂಡುಬಂದಿತು.

ಶೃಂಗೇರಿ: ಕಳೆದ ಕೆಲ ದಿನಗಳಿಂದ ಶೃಂಗೇರಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಕಂಡುಬರುತ್ತಿದ್ದು, ವಾರದ ಕೊನೆ ದಿನವಾದ ಭಾನುವಾರ ಬೆಳಿಗ್ಗೆಯಿಂದಲೇ ಜನಸಾಗರ ಕಂಡುಬಂದಿತು.

ಶ್ರೀಮಠದ ಆವರಣ, ನರಸಿಂಹವನ, ಶ್ರೀ ಶಾರದಾಂಬಾ ದೇವಾಲಯ, ಬೋಜನಾ ಶಾಲೆ, ಭಾರತೀ ಬೀದಿ, ಗಾಂಧಿ ಮೈದಾನ, ಬಸ್ ನಿಲ್ದಾಣ ಎಲ್ಲೆಡೆ ಜನಸಂದಣಿ ಕಂಡುಬಂದಿತು. ಶಾಲೆಗಳಿಗೆ ರಜೆ ಹಿನ್ನೆಲೆಯಲ್ಲಿ, ರಜೆ ಮುಗಿಯುತ್ತಾ ಬಂದಿರುವುದರಿಂದ ಶೃಂಗೇರಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವಿರುವುದರಿಂದ ಸರ್ಕಾರಿ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಶೃಂಗೇರಿ ಬರುವ - ಹೋಗುವ ಬಸ್ ಗಳೆಲ್ಲ ಫುಲ್ಆ ಗಿ ಸಂಚರಿಸುತ್ತಿವೆ. ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು.

11 ಶ್ರೀ ಚಿತ್ರ 3 -ಶೃಂಗೇರಿ ಶ್ರೀ ಮಠದ ಎದುರು ಭಾನುವಾರ ಕಂಡು ಬಂದ ಜನಸಾಗರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!