ಆರೋಗ್ಯಕರ ಸಮಾಜಕ್ಕೆ ಪೌರಕಾರ್ಮಿಕರ ಸೇವೆ ಅಮೂಲ್ಯ: ಸವಿತಾ ತಾಂಭ್ರೆ

KannadaprabhaNewsNetwork |  
Published : Sep 24, 2025, 01:01 AM IST
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶಿರಹಟ್ಟಿಯಲ್ಲಿ ಮೆರವಣಿಗೆ ವೇಳೆ ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ಮಾತನಾಡಿದರು. | Kannada Prabha

ಸಾರಾಂಶ

ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರಸ್ತಂಭ ಮತ್ತು ಭೂಸೇನಾ ಸೈನಿಕರಿದ್ದಂತೆ.

ಶಿರಹಟ್ಟಿ: ಜನಸಾಮಾನ್ಯರಿಗೆ ನೀಡುವ ಗೌರವ ಪೌರಕಾರ್ಮಿಕರಿಗೂ ನೀಡಬೇಕು. ಪೌರಕಾರ್ಮಿಕರು ನಮ್ಮಂತೆ ಮನುಷ್ಯರೆ. ಗಾಳಿ, ಮಳೆ, ಚಳಿ, ಬಿಸಿಲು ಎನ್ನದೇ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಲ್ಲುವ ಇವರ ಕಾರ್ಯ ಅತ್ಯಮೂಲ್ಯ. ಪೌರಕಾರ್ಮಿಕರು ನೈಜ ಕಾಯಕಯೋಗಿಗಳು. ಸ್ವಚ್ಛತಾ ರೂವಾರಿಗಳು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ತಿಳಿಸಿದರು.ಕರ್ನಾಟಕ ರಾಜ್ಯ ಪೌರ ನೌಕರರ ಕೇಂದ್ರ ಕಚೇರಿ ಚಿತ್ರದುರ್ಗ, ಜಿಲ್ಲಾ ಸಂಘ ಗದಗ, ಶಿರಹಟ್ಟಿ ಪಟ್ಟಣದ ಪಂಚಾಯಿತಿ ಶಾಖೆ ವತಿಯಿಂದ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಮಾತನಾಡಿದರು. ಪೌರಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸೂಚಿಸಿದರು.ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರಸ್ತಂಭ ಮತ್ತು ಭೂಸೇನಾ ಸೈನಿಕರಿದ್ದಂತೆ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಆರೋಗ್ಯ ಬದಿಗೊತ್ತಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ನಿಮ್ಮ ಆರೋಗ್ಯ ಕಾಪಾಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮತ್ತು ಸರ್ಕಾರಕ್ಕಿರುತ್ತದೆ ಎಂದರು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಮಾತನಾಡಿ, ಬಹುತೇಕ ದಿನಗೂಲಿ ಪೌರಕಾರ್ಮಿಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿ ಕಾಣುವಂತೆ ಮಾಡುವ ಈ ನೌಕರರು ತಾವು ಕೂಡ ಆರೋಗ್ಯವಂತರಾಗಿರಬೇಕು. ಸರ್ಕಾರದಿಂದ ಪೌರಕಾರ್ಮಿಕರಿಗಾಗಿ ಎಲ್ಲ ಹಂತದ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ನಾವು ಕೂಡ ಶ್ರಮಿಸುವುದಾಗಿ ತಿಳಿಸಿದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸದಸ್ಯರಾದ ಫಕ್ಕೀರೇಶ ರಟ್ಟಿಹಳ್ಳಿ, ಅನಿತಾ ಬಾರಬರ, ದೇವಪ್ಪ ಆಡೂರ, ಸೋಮನಗೌಡ ಮರಿಗೌಡ್ರ, ಸಂಘದ ಮಾಜಿ ಅಧ್ಯಕ್ಷ ಸಿದ್ದಪ್ಪ ಅಮರಾಪೂರ, ಗುರುನಾಥ ಪಾತಾಳೆ, ಐ.ಪಿ. ಜಾಲಿಕಟ್ಟಿ, ನಾಗೇಶ ಕುಲಕರ್ಣಿ ಸೇರಿ ಪಪಂ ಸದಸ್ಯರು ಇದ್ದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹುಚ್ಚಪ್ಪ ಗೋಡೆಣ್ಣವರ, ಉಪಾಧ್ಯಕ್ಷ ಚೆನ್ನಯ್ಯ ಹಿರೇಮಠ, ಆನಂದ ಘಂಟಿ, ಉಡಚಪ್ಪ ನೀಲಣ್ಣವರ, ಉಮೇಶ ಬಡೆಣ್ಣವರ, ಪಕ್ಕಣ್ಣ ಬಂತಿ, ದುರಗಪ್ಪ ಗುಡಿಮನಿ, ಮರಿಯಪ್ಪ ಗುಡಿಮನಿ, ಆನಂದಪ್ಪ ಬಿಡನಾಳ, ಮರಿಯಪ್ಪ ಪೂಜಾರ, ಯಲ್ಲವ್ವ ಗೋಡೆಣ್ಣವರ, ದ್ರಾಕ್ಷಾಯಣಿ ಕಂಟೆಮ್ಮನವರ, ಬಸವಣ್ಣೆವ್ವ ಗುಡಿಮನಿ, ನಿಂಗವ್ವ ಮರ್ಚಣ್ಣವರ, ಹನುಮವ್ವ ಗುಡಿಮನಿ, ಉಡಚವ್ವ ಬಡೆಣ್ಣವರ, ಮರಿಯವ್ವ ಪೂಜಾರ, ಸಾವಕ್ಕ ಗುಡಿಮನಿ, ರತ್ನವ್ವ ಬಡೆಣ್ಣವರ, ಶಿವಕ್ಕ ಗೋಡೆಣ್ಣವರ, ನೀಲವ್ವ ಗುಡಿಮನಿ ಸೇರಿ ಎಲ್ಲ ಪೌರ ಕಾರ್ಮಿಕರು ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ