ಸೈನಿಕರ ಸೇವೆ ಸ್ಪೂರ್ತಿದಾಯಕ: ಕೆ.ವಿರೂಪಾಕ್ಷಪ್ಪ

KannadaprabhaNewsNetwork |  
Published : Sep 02, 2025, 01:00 AM IST
01ಕೆಪಿಎಸ್ಎನ್ಡಿ4:  | Kannada Prabha

ಸಾರಾಂಶ

22 ವರ್ಷಗಳ ಕಾಲ ಸುದೀರ್ಘ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಹುಟ್ಟೂರಾದ ಸಿಂಧನೂರಿಗೆ ಆಗಮಿಸಿದ ಎಂ.ಡಿ.ತಾಹೀರ್ ನಕಾಶ್ ಅ.ಹಣಗಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಸಿಂಧನೂರು: 22 ವರ್ಷಗಳ ಕಾಲ ಸುದೀರ್ಘ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಹುಟ್ಟೂರಾದ ಸಿಂಧನೂರಿಗೆ ಆಗಮಿಸಿದ ಎಂ.ಡಿ.ತಾಹೀರ್ ನಕಾಶ್ ಅ.ಹಣಗಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕರ್ನಾಟಕ ಮಾಜಿ ಯೋಧರ ಸಂಘದ ತಾಲೂಕು ಘಟಕದಿಂದ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಬಾಬು ಜಗಜೀವನರಾಮ್ ವೃತ್ತದ ಮೂಲಕ ಎಪಿಎಂಸಿ ರೈತ ಭವನದವರೆಗೆ ಮೆರವಣಿಗೆ ನಡೆಸಲಾಯಿತು.

ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ದೇಶ ಮತ್ತು ಜನರ ರಕ್ಷಣೆಗಾಗಿ ಸೈನಿಕರು ತಮ್ಮ ಜೀವವನ್ನು ಮುಡುಪಿಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಸ್ಪೂರ್ತಿದಾಯಕ. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಎಂ.ಡಿ.ತಾಹೀರ್ ನಕಾಶ್ ಅ.ಹಣಗಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಯೋಧರಾದ ವೀರೇಶ ಯಾದವ್, ಸುರೇಶ, ರುದ್ರೇಶ ತುಪ್ಪದ, ನಾಗರಾಜ ತುರ್ವಿಹಾಳ, ನರಸಿಂಹ ಕಲ್ಲೂರು, ಪರಶುರಾಮ ತುರಕಟ್ಟಿ ಕ್ಯಾಂಪ್, ನಾಗರಾಜ ಉಪ್ಪಾರ, ಹಾಲೇಶ ಬಾದರ್ಲಿ, ಕಳಕಪ್ಪ ತುರ್ವಿಹಾಳ, ವೀರಭದ್ರಯ್ಯಸ್ವಾಮಿ, ರಾಜಾಸಾಬ್, ವಿರೂಪಾಕ್ಷಪ್ಪ ಹಿರೇಮಠ, ನೀಲಪ್ಪ ನಂದವಾಡಗಿ, ಮಲ್ಲಪ್ಪ ಕುಂಬಾರ ಗೆಜ್ಜಲಗಟ್ಟ, ಸಂಗಯ್ಯ ಹಿರೇಮಠ, ಅಮರೇಗೌಡ ಪಾಟೀಲ್, ಮುಸ್ಲಿಂ ಸಂಘದ ಅಧ್ಯಕ್ಷ ಫಯಾಜ್ ಫೀರಾ, ಮುಖಂಡರಾದ ಶಫ್ಫುವುಲ್ಲಾ ಖಾನ್, ಅನಗವಾಡಿ ನಬಿ, ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷ ಚನ್ನಬಸಯ್ಯ ಸ್ವಾಮಿ ಹಿರೇಮಠ, ವೆಂಕಟೇಶ ಬಾದರ್ಲಿ, ಸೋಮನಾಥ ಪತ್ತಾರ, ಮಲ್ಲಿಕಾರ್ಜುನ ರೆಡ್ಡಿ ಇದ್ದರು.

----------

ಸಿಂಧನೂರಿಗೆ ಆಗಮಿಸಿದ ನಿವೃತ್ತ ಯೋಧ ಎಂ.ಡಿ.ತಾಹೀರ್ ನಕಾಶ್ ಅ.ಹಣಗಿ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ